ಈ ಕುರಿತು ಪ್ರತಿಕ್ರಿಯಿಸಿದ ಧಾರವಾಡ ಬೆಳವಣಿಗೆ ಕೇಂದ್ರ, ಉದ್ಯಮಿಗಳ ಸಂಘದ ಅಧ್ಯಕ್ಷ ಶ್ರೀಕಾಂತ ಹುಲಮನಿ, ‘ಆರ್ಥಿಕ ಹಿಂಜರಿತ ಬಿಸಿ ಇಲ್ಲಿಯೂ ತಟ್ಟಿದೆ. ದೊಡ್ಡ ಕಂಪನಿಗಳ ಬೇಡಿಕೆಗೆ ಅನುಗುಣವಾಗಿ, ಸಣ್ಣ ಕಂಪನಿಗಳ ತಯಾರಿಕೆಯೂ ಗಣನೀಯವಾಗಿ ಇಳಿಮುಖವಾಗಿದೆ. ಬೇಡಿಕೆ ಹೆಚ್ಚಾಗದ ಹೊರತೂ, ಕೈಗಾರಿಕೆ ಮೇಲೇಳುವ ಯಾವ ಸಾಧ್ಯತೆಯೂ ಕಂಡುಬರುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.