<p>ಧಾರವಾಡ: ‘ಬಯಲಾಟದಂತಹ ಕಲೆಯನ್ನು ಅತಿ ಎಚ್ಚರದಿಂದ ಕಾಪಿಟ್ಟುಕೊಳ್ಳಬೇಕು. ಮುಂದುವರಿಸಬೇಕು ಮತ್ತು ಬೆಳೆಸಬೇಕು’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಸಲಹೆ ನೀಡಿದರು.</p><p>ನಗರದ ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಬಾಗಲಕೋಟೆಯ ಕರ್ನಾಟಕ ಬಯಲಾಟ ಅಕಾಡೆಮಿ ಮತ್ತು ಕರ್ನಾಟಕ ವಿದ್ಯಾವರ್ಧಕ ಸಂಘದ ವತಿಯಿಂದ ಮಂಗಳವಾರ ನಡೆದ ‘ಬಯಲಾಟ: ಹೊಸ ಸಾಧ್ಯತೆಗಳು’ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.</p>.<p>‘ಇಂತಹ ಕಲೆಗಳಿಂದ ‘ಮಹಾಭಾರತ’, ‘ರಾಮಾಯಣ’ದಂತಹ ಮಹಾಕತೆಗಳು ಜನಸಂಸ್ಕೃತಿಯಲ್ಲಿ ಪ್ರವೇಶಿಸಿ ಮರುಸೃಷ್ಟಿಯಾಗಿವೆ. ಈ ಮರುಸೃಷ್ಟಿಗೊಳ್ಳುವ ಬಗೆಯಲ್ಲಿ ಭಾರತೀಯ ಸಂಸ್ಕೃತಿಯ ಸೂಕ್ಷ್ಮಗಳು ಇವೆ. ಈ ಕಲೆಗಳು ಬೇಕು. ಮಾತಿನಲ್ಲೇ ಪ್ರೇಕ್ಷಕರನ್ನು ಹಿಡಿದಿಡುವ ಶಕ್ತಿ ಕಲೆಗೆ ಇದೆ’ ಎಂದು ವಿವರಿಸಿದರು.</p>.<div><blockquote>ಕಲೆಗಳು ಇಲ್ಲದಿದ್ದರೆ ಭಾರತೀಯ ಪರಂಪರೆ ಅರ್ಥವಾಗುತ್ತಿರಲಿಲ್ಲ. ಭಾರತೀಯ ಪುರಾಣಗಳು ಗೊತ್ತಾಗಿದ್ದೇ ಇವುಗಳಿಂದ.</blockquote><span class="attribution">ಪುರುಷೋತ್ತಮ ಬಿಳಿಮಲೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ</span></div>.<p>‘ಬಯಲಾಟ ಕಲೆಯ ಮೂಲಗುಣ ನಾಶವಾಗದಂತೆ ವೇಷಭೂಷಣದಲ್ಲಿ ಸ್ವಲ್ಪ ಪರಿಷ್ಕರಣೆ ಮಾಡಿಕೊಳ್ಳಬಹುದು. ಹಾಡುಗಾರಿಕೆಗೆ ಏಳು ಕಲಾವಿದರನ್ನು ಬಳಸಿಕೊಳ್ಳುವುದನ್ನು ಹಾಗೆಯೇ ಉಳಿಸಿಕೊಳ್ಳಬೇಕು. ಹಿಂದೂಸ್ತಾನಿ ಗಾಯಕರು ಬಯಲಾಟದವರಿಗೆ ಮಾರ್ಗದರ್ಶನ ನೀಡಬೇಕು. ಅರ್ಥಗಾರಿಕೆ ಸರಳಗೊಳಿಸಬೇಕು’ ಎಂದು ಸಲಹೆ ನೀಡಿದರು.</p>.<p>ಹಿಂದೂಸ್ಥಾನಿ ಗಾಯಕ ಪಂಡಿತ ಎಂ.ವೆಂಕಟೇಶಕುಮಾರ ಮಾತನಾಡಿದರು. ಬಯಲಾಟ ಅಕಾಡೆಮಿ ಅಧ್ಯಕ್ಷ ಕೆ.ಆರ್.ದುರ್ಗಾದಾಸ್ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ವಿಶ್ವೇಶ್ವರಿ ಹಿರೇಮಠ ಉಪಸ್ಥಿತರಿದ್ದರು.</p>.<p><strong>ಯುವಜನರ ಆಕರ್ಷಿಸಲು ಸಲಹೆ </strong></p><p>‘ಬಯಲಾಟ ಸಣ್ಣಾಟ ದೊಡ್ಡಾಟದಂತಹ ಕಲಾ ಪರಂಪರೆಗಳು ಸಾಂಸ್ಕೃತಿಕ ಬದುಕನ್ನು ಕಟ್ಟಿಕೊಟ್ಟಿವೆ. ಜನರಲ್ಲಿ ಮೌಲ್ಯ ಪ್ರಜ್ಞೆ ಬಿತ್ತಿವೆ’ ಎಂದು ಆಕಾಶವಾಣಿ ನಿವೃತ್ತ ನಿರ್ದೇಶಕ ಬಸವರಾಜ ಸಾದರ ಹೇಳಿದರು. </p><p>‘ಬಯಲಾಟ ಕಲೆಯ ಕಡೆಗೆ ಯುವಜನರನ್ನು ಆಕರ್ಷಿಸಬೇಕು. ಅವರಿಗೆ ಕಲೆ ಕಲಿಸಬೇಕು. ಕಲೆಯ ಮೂಲವಸ್ತು ಉಳಿಸಿಕೊಂಡು ಸಮಯ ಸಂಕ್ಷೇಪಗೊಳಿಸಿ ಇಡೀ ವಸ್ತುವನ್ನು ಕಟ್ಟಿಕೊಡಬೇಕು. ಯೂಟ್ಯೂಬ್ ಮಾಧ್ಯಮ ಬಳಸಿಕೊಳ್ಳುವ ಸಾಧ್ಯತೆಗಳ ಬಗ್ಗೆ ಯೋಚಿಸಬೇಕು’ ಎಂದು ಸಲಹೆ ನೀಡಿದರು.</p><p> ‘ಈ ಕಲಾ ಪ್ರಕಾರದಲ್ಲಿ ಹೊಸಗನ್ನಡ ಸಾಹಿತ್ಯದ ಕತೆ ಪ್ರಬಂಧಗಳನ್ನು ಅಳವಡಿಸುವುದು ಜನಪದ ಕಲೆ ಪ್ರದರ್ಶನದ ರಿಯಾಲಿಟಿ ಷೋ ಆಯೋಜಿಸುವ ಹೊಸ ಸಾಧ್ಯತೆಗಳ ಬಗ್ಗೆ ಯೋಚಿಸಬೇಕು’ ಎಂದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಧಾರವಾಡ: ‘ಬಯಲಾಟದಂತಹ ಕಲೆಯನ್ನು ಅತಿ ಎಚ್ಚರದಿಂದ ಕಾಪಿಟ್ಟುಕೊಳ್ಳಬೇಕು. ಮುಂದುವರಿಸಬೇಕು ಮತ್ತು ಬೆಳೆಸಬೇಕು’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಸಲಹೆ ನೀಡಿದರು.</p><p>ನಗರದ ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಬಾಗಲಕೋಟೆಯ ಕರ್ನಾಟಕ ಬಯಲಾಟ ಅಕಾಡೆಮಿ ಮತ್ತು ಕರ್ನಾಟಕ ವಿದ್ಯಾವರ್ಧಕ ಸಂಘದ ವತಿಯಿಂದ ಮಂಗಳವಾರ ನಡೆದ ‘ಬಯಲಾಟ: ಹೊಸ ಸಾಧ್ಯತೆಗಳು’ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.</p>.<p>‘ಇಂತಹ ಕಲೆಗಳಿಂದ ‘ಮಹಾಭಾರತ’, ‘ರಾಮಾಯಣ’ದಂತಹ ಮಹಾಕತೆಗಳು ಜನಸಂಸ್ಕೃತಿಯಲ್ಲಿ ಪ್ರವೇಶಿಸಿ ಮರುಸೃಷ್ಟಿಯಾಗಿವೆ. ಈ ಮರುಸೃಷ್ಟಿಗೊಳ್ಳುವ ಬಗೆಯಲ್ಲಿ ಭಾರತೀಯ ಸಂಸ್ಕೃತಿಯ ಸೂಕ್ಷ್ಮಗಳು ಇವೆ. ಈ ಕಲೆಗಳು ಬೇಕು. ಮಾತಿನಲ್ಲೇ ಪ್ರೇಕ್ಷಕರನ್ನು ಹಿಡಿದಿಡುವ ಶಕ್ತಿ ಕಲೆಗೆ ಇದೆ’ ಎಂದು ವಿವರಿಸಿದರು.</p>.<div><blockquote>ಕಲೆಗಳು ಇಲ್ಲದಿದ್ದರೆ ಭಾರತೀಯ ಪರಂಪರೆ ಅರ್ಥವಾಗುತ್ತಿರಲಿಲ್ಲ. ಭಾರತೀಯ ಪುರಾಣಗಳು ಗೊತ್ತಾಗಿದ್ದೇ ಇವುಗಳಿಂದ.</blockquote><span class="attribution">ಪುರುಷೋತ್ತಮ ಬಿಳಿಮಲೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ</span></div>.<p>‘ಬಯಲಾಟ ಕಲೆಯ ಮೂಲಗುಣ ನಾಶವಾಗದಂತೆ ವೇಷಭೂಷಣದಲ್ಲಿ ಸ್ವಲ್ಪ ಪರಿಷ್ಕರಣೆ ಮಾಡಿಕೊಳ್ಳಬಹುದು. ಹಾಡುಗಾರಿಕೆಗೆ ಏಳು ಕಲಾವಿದರನ್ನು ಬಳಸಿಕೊಳ್ಳುವುದನ್ನು ಹಾಗೆಯೇ ಉಳಿಸಿಕೊಳ್ಳಬೇಕು. ಹಿಂದೂಸ್ತಾನಿ ಗಾಯಕರು ಬಯಲಾಟದವರಿಗೆ ಮಾರ್ಗದರ್ಶನ ನೀಡಬೇಕು. ಅರ್ಥಗಾರಿಕೆ ಸರಳಗೊಳಿಸಬೇಕು’ ಎಂದು ಸಲಹೆ ನೀಡಿದರು.</p>.<p>ಹಿಂದೂಸ್ಥಾನಿ ಗಾಯಕ ಪಂಡಿತ ಎಂ.ವೆಂಕಟೇಶಕುಮಾರ ಮಾತನಾಡಿದರು. ಬಯಲಾಟ ಅಕಾಡೆಮಿ ಅಧ್ಯಕ್ಷ ಕೆ.ಆರ್.ದುರ್ಗಾದಾಸ್ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ವಿಶ್ವೇಶ್ವರಿ ಹಿರೇಮಠ ಉಪಸ್ಥಿತರಿದ್ದರು.</p>.<p><strong>ಯುವಜನರ ಆಕರ್ಷಿಸಲು ಸಲಹೆ </strong></p><p>‘ಬಯಲಾಟ ಸಣ್ಣಾಟ ದೊಡ್ಡಾಟದಂತಹ ಕಲಾ ಪರಂಪರೆಗಳು ಸಾಂಸ್ಕೃತಿಕ ಬದುಕನ್ನು ಕಟ್ಟಿಕೊಟ್ಟಿವೆ. ಜನರಲ್ಲಿ ಮೌಲ್ಯ ಪ್ರಜ್ಞೆ ಬಿತ್ತಿವೆ’ ಎಂದು ಆಕಾಶವಾಣಿ ನಿವೃತ್ತ ನಿರ್ದೇಶಕ ಬಸವರಾಜ ಸಾದರ ಹೇಳಿದರು. </p><p>‘ಬಯಲಾಟ ಕಲೆಯ ಕಡೆಗೆ ಯುವಜನರನ್ನು ಆಕರ್ಷಿಸಬೇಕು. ಅವರಿಗೆ ಕಲೆ ಕಲಿಸಬೇಕು. ಕಲೆಯ ಮೂಲವಸ್ತು ಉಳಿಸಿಕೊಂಡು ಸಮಯ ಸಂಕ್ಷೇಪಗೊಳಿಸಿ ಇಡೀ ವಸ್ತುವನ್ನು ಕಟ್ಟಿಕೊಡಬೇಕು. ಯೂಟ್ಯೂಬ್ ಮಾಧ್ಯಮ ಬಳಸಿಕೊಳ್ಳುವ ಸಾಧ್ಯತೆಗಳ ಬಗ್ಗೆ ಯೋಚಿಸಬೇಕು’ ಎಂದು ಸಲಹೆ ನೀಡಿದರು.</p><p> ‘ಈ ಕಲಾ ಪ್ರಕಾರದಲ್ಲಿ ಹೊಸಗನ್ನಡ ಸಾಹಿತ್ಯದ ಕತೆ ಪ್ರಬಂಧಗಳನ್ನು ಅಳವಡಿಸುವುದು ಜನಪದ ಕಲೆ ಪ್ರದರ್ಶನದ ರಿಯಾಲಿಟಿ ಷೋ ಆಯೋಜಿಸುವ ಹೊಸ ಸಾಧ್ಯತೆಗಳ ಬಗ್ಗೆ ಯೋಚಿಸಬೇಕು’ ಎಂದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>