<p>ಬಿ.ಜೆ.ಧನ್ಯಪ್ರಸಾದ್</p>.<p><strong>ಧಾರವಾಡ:</strong> ನಗರದ ಐದನೇ ವಾರ್ಡ್ನಲ್ಲಿ ಕಳ್ಳತನ, ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಇಡುವ ನಿಟ್ಟಿನಲ್ಲಿ ಕಣ್ಗಾವಲಿಗೆ ವಿವಿಧೆಡೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ, ಹಲವೆಡೆ ಕಾಂಕ್ರಿಟ್ ರಸ್ತೆ ನಿರ್ಮಿಸಲಾಗಿದೆ. ವಾರ್ಡ್ನ ಹಲವು ರಸ್ತೆಗಳು ಹದಗೆಟ್ಟಿವೆ, ಸ್ವಚ್ಛತೆ, ಬೀದಿದೀಪಗಳ ಸಮಸ್ಯೆ ಹಲವೆಡೆ ಇದೆ.</p>.<p>ಈ ವಾರ್ಡ್ನಲ್ಲಿ ವಾರಕ್ಕೊಮ್ಮೆ ನೀರು ಪೂರೈಕೆ ಆಗುತ್ತದೆ. ನೀರು ಪೂರೈಕೆಯಾದಾಗ ವಾರಕ್ಕಾಗುವಷ್ಟು ನೀರನ್ನು ಸಂಗ್ರಹಿಸಿ ಇಟ್ಟುಕೊಳ್ಳಬೇಕು. ಕೆಲ ಸಲ ಮಣ್ಣುಮಿಶ್ರಿತ ನೀರು ಪೂರೈಕೆ ಆಗುತ್ತದೆ ಎಂಬ ದೂರುಗಳು ಇವೆ.</p>.<p>ಮಣಿಕಂಠ ನಗರ, ಶಿವ ನಗರ ಸಹಿತ ಹಲವೆಡೆ ರಸ್ತೆಗಳು ಹದೆಗಟ್ಟಿವೆ. 24X7 ನೀರು ಪೂರೈಕೆ ಪೈಪ್ ಅಳವಡಿಕೆ ನಿಟ್ಟಿನಲ್ಲಿ ರಸ್ತೆ ಬದಿಗಳಲ್ಲಿ ಅಗೆದು ಮುಚ್ಚಿರುವ ಕಡೆಗಳಲ್ಲಿ ತಗ್ಗುಗಳಾಗಿವೆ. ಕಾಂಕ್ರಿಟ್ ರಸ್ತೆ ಅಗೆದು ವ್ಯವಸ್ಥಿತವಾಗಿ ಮುಚ್ಚದಿರುವ ಕಡೆ ಸಂಚಾರ ಪಡಿಪಾಟಲಾಗಿದೆ.</p>.<p>ಮದಿಹಾಳ, ಮಣಿಕಂಠ ನಗರ ಸಹಿತ ವಿವಿಧೆಡೆಗಳಲ್ಲಿ ಗಟಾರಗಳ ಸಮಸ್ಯೆ ಇದೆ. ಚರಂಡಿಗಳಲ್ಲಿ ಕಸ, ಕಡ್ಡಿ, ಕೊಳಕು ತುಂಬಿವೆ.</p>.<p>‘ಕೆಲವೊಮ್ಮೆ ನಳದಲ್ಲಿ ಮಣ್ಣುಮಿಶ್ರಿತ ನೀರು ಬರುತ್ತದೆ. ಕನಿಷ್ಠ ಮೂರು ದಿನಕ್ಕೊಮ್ಮೆಯಾದರೂ ನೀರು ಪೂರೈಸಲು ಸಂಬಂಧಪಟ್ಟವರು ಕ್ರಮ ವಹಿಸಬೇಕು’ ಎಂದು ಮದಿಹಾಳ ನಿವಾಸಿ ನೀಲಮ್ಮ ಸವಣೂರ ಒತ್ತಾಯಿಸಿದರು.</p>.<p>ಮದಿಹಾಳದ ಸರ್ಕಾರಿ ಪ್ರಾಥಮಿಕ ಶಾಲೆ (ನಂಬರ್ 3) ಹಿಂಭಾಗದಲ್ಲಿ ಬ್ಯಾಸ್ಕೆಟ್ ಬಾಲ್ ಅಂಗಳ ನಿರ್ಮಿಸಲಾಗಿದೆ. ಪಕ್ಕದಲ್ಲಿ ವ್ಯಾಯಾಮಕ್ಕೆ ಕೆಲವು ಪರಿಕರ ಅಳವಡಿಸಲಾಗಿದೆ. ನಿರ್ವಹಣೆ ಕೊರತೆಯಿಂದ ಕೆಲವು ಪರಿಕರಗಳು ಹಾಳಾಗಿವೆ.</p>.<p>ನಿವೇಶನಗಳಲ್ಲಿ, ರಸ್ತೆ ಬದಿಗಳಲ್ಲಿ ಕೆಲವೆಡೆ ಕಸ, ತ್ಯಾಜ್ಯ ಸುರಿಯಲಾಗಿದೆ. ಕೆಲವೆಡೆ ಬೀದಿದೀಪಗಳು ಹಾಳಾಗಿವೆ, ಕಂಬಗಳು ದುಃಸ್ಥಿತಿಯಲ್ಲಿವೆ, ತಂತಿಗಳು, ಕೇಬಲ್ಗಳು ಜೋತಾಡುತ್ತಿವೆ.</p>.<div><blockquote>ನೀರು ಸ್ವಚ್ಛತೆ ಬೀದಿದೀಪ ರಸ್ತೆ ಸಮಸ್ಯೆ ಇದೆ. ವರ್ಷಕ್ಕೊಮ್ಮೆ ಗಟಾರಗಳನ್ನು ಸ್ವಚ್ಛಗೊಳಿಸಬೇಕು. ಬೀದಿ ನಾಯಿಗಳ ಹಾವಳಿ ಇದೆ. ಸಮಸ್ಯೆಗಳನ್ನು ಪರಿಹರಿಸಲು ಆದ್ಯತೆ ನೀಡಬೇಕು.</blockquote><span class="attribution">ರಾಜು ಉಟಗಿ ನಿವಾಸಿ ಮದಿಹಾಳ</span></div>.<div><blockquote>₹ 11 ಲಕ್ಷ ಅನುದಾನದಲ್ಲಿ ವಿವಿಧೆಡೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. 24X7 ನೀರು ಪೂರೈಕೆ ಯೋಜನೆ ಕಾರ್ಯಗತವಾದರೆ ನೀರಿನ ಸಮಸ್ಯೆ ಪರಿಹಾರವಾಗಲಿದೆ.</blockquote><span class="attribution"> ನಿತಿನ್ ಇಂಡಿ ಪಾಲಿಕೆ ಸದಸ್ಯ 5ನೇ ವಾರ್ಡ್</span></div>.<p><strong>'ವಿದ್ಯುತ್ ಕಂಬ ಲೈನ್ ಬೀದಿದೀಪಕ್ಕೆ ₹ 23 ಲಕ್ಷ ಅನುದಾನ‘ </strong></p><p>ವಾರ್ಡ್ನ ಎಲ್ಲ ಕಡೆ ಎಲ್ಇಡಿ ಬೀದಿದೀಪ ಅಳವಡಿಸಲಾಗುತ್ತಿದೆ. ಅಶೋಕ ನಗರ ಮತ್ತು ಮಾಸ್ತೆಮ್ಮ ಮಣಿಕಂಠ ನಗರ ಹಾಗೂ ಮಲ್ಲಿಕಾರ್ಜುನ ನಗರದಲ್ಲಿ ನಗರ ವಿದ್ಯುತ್ ಕಂಬ ಲೈನ್ ಬೀದಿದೀಪ ಅಳವಡಿಕೆಗೆ ₹ 23 ಲಕ್ಷ ಮಂಜೂರಾಗಿದೆ. ರೇಣುಕಾ ನಗರದಲ್ಲಿ ಪಾರ್ಕ್ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದೆ. ವಾರ್ಡ್ ವಿವಿಧೆಡೆ ಗಟಾರ ನಿರ್ಮಾಣ ರಸ್ತೆ ಅಭಿವೃದ್ಧಿಗೆ ಕ್ರಮ ವಹಿಸಲಾಗಿದೆ ಎಂದು ವಾರ್ಡ್ ಸದಸ್ಯ ನಿತಿನ್ ಇಂಡಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬಿ.ಜೆ.ಧನ್ಯಪ್ರಸಾದ್</p>.<p><strong>ಧಾರವಾಡ:</strong> ನಗರದ ಐದನೇ ವಾರ್ಡ್ನಲ್ಲಿ ಕಳ್ಳತನ, ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಇಡುವ ನಿಟ್ಟಿನಲ್ಲಿ ಕಣ್ಗಾವಲಿಗೆ ವಿವಿಧೆಡೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ, ಹಲವೆಡೆ ಕಾಂಕ್ರಿಟ್ ರಸ್ತೆ ನಿರ್ಮಿಸಲಾಗಿದೆ. ವಾರ್ಡ್ನ ಹಲವು ರಸ್ತೆಗಳು ಹದಗೆಟ್ಟಿವೆ, ಸ್ವಚ್ಛತೆ, ಬೀದಿದೀಪಗಳ ಸಮಸ್ಯೆ ಹಲವೆಡೆ ಇದೆ.</p>.<p>ಈ ವಾರ್ಡ್ನಲ್ಲಿ ವಾರಕ್ಕೊಮ್ಮೆ ನೀರು ಪೂರೈಕೆ ಆಗುತ್ತದೆ. ನೀರು ಪೂರೈಕೆಯಾದಾಗ ವಾರಕ್ಕಾಗುವಷ್ಟು ನೀರನ್ನು ಸಂಗ್ರಹಿಸಿ ಇಟ್ಟುಕೊಳ್ಳಬೇಕು. ಕೆಲ ಸಲ ಮಣ್ಣುಮಿಶ್ರಿತ ನೀರು ಪೂರೈಕೆ ಆಗುತ್ತದೆ ಎಂಬ ದೂರುಗಳು ಇವೆ.</p>.<p>ಮಣಿಕಂಠ ನಗರ, ಶಿವ ನಗರ ಸಹಿತ ಹಲವೆಡೆ ರಸ್ತೆಗಳು ಹದೆಗಟ್ಟಿವೆ. 24X7 ನೀರು ಪೂರೈಕೆ ಪೈಪ್ ಅಳವಡಿಕೆ ನಿಟ್ಟಿನಲ್ಲಿ ರಸ್ತೆ ಬದಿಗಳಲ್ಲಿ ಅಗೆದು ಮುಚ್ಚಿರುವ ಕಡೆಗಳಲ್ಲಿ ತಗ್ಗುಗಳಾಗಿವೆ. ಕಾಂಕ್ರಿಟ್ ರಸ್ತೆ ಅಗೆದು ವ್ಯವಸ್ಥಿತವಾಗಿ ಮುಚ್ಚದಿರುವ ಕಡೆ ಸಂಚಾರ ಪಡಿಪಾಟಲಾಗಿದೆ.</p>.<p>ಮದಿಹಾಳ, ಮಣಿಕಂಠ ನಗರ ಸಹಿತ ವಿವಿಧೆಡೆಗಳಲ್ಲಿ ಗಟಾರಗಳ ಸಮಸ್ಯೆ ಇದೆ. ಚರಂಡಿಗಳಲ್ಲಿ ಕಸ, ಕಡ್ಡಿ, ಕೊಳಕು ತುಂಬಿವೆ.</p>.<p>‘ಕೆಲವೊಮ್ಮೆ ನಳದಲ್ಲಿ ಮಣ್ಣುಮಿಶ್ರಿತ ನೀರು ಬರುತ್ತದೆ. ಕನಿಷ್ಠ ಮೂರು ದಿನಕ್ಕೊಮ್ಮೆಯಾದರೂ ನೀರು ಪೂರೈಸಲು ಸಂಬಂಧಪಟ್ಟವರು ಕ್ರಮ ವಹಿಸಬೇಕು’ ಎಂದು ಮದಿಹಾಳ ನಿವಾಸಿ ನೀಲಮ್ಮ ಸವಣೂರ ಒತ್ತಾಯಿಸಿದರು.</p>.<p>ಮದಿಹಾಳದ ಸರ್ಕಾರಿ ಪ್ರಾಥಮಿಕ ಶಾಲೆ (ನಂಬರ್ 3) ಹಿಂಭಾಗದಲ್ಲಿ ಬ್ಯಾಸ್ಕೆಟ್ ಬಾಲ್ ಅಂಗಳ ನಿರ್ಮಿಸಲಾಗಿದೆ. ಪಕ್ಕದಲ್ಲಿ ವ್ಯಾಯಾಮಕ್ಕೆ ಕೆಲವು ಪರಿಕರ ಅಳವಡಿಸಲಾಗಿದೆ. ನಿರ್ವಹಣೆ ಕೊರತೆಯಿಂದ ಕೆಲವು ಪರಿಕರಗಳು ಹಾಳಾಗಿವೆ.</p>.<p>ನಿವೇಶನಗಳಲ್ಲಿ, ರಸ್ತೆ ಬದಿಗಳಲ್ಲಿ ಕೆಲವೆಡೆ ಕಸ, ತ್ಯಾಜ್ಯ ಸುರಿಯಲಾಗಿದೆ. ಕೆಲವೆಡೆ ಬೀದಿದೀಪಗಳು ಹಾಳಾಗಿವೆ, ಕಂಬಗಳು ದುಃಸ್ಥಿತಿಯಲ್ಲಿವೆ, ತಂತಿಗಳು, ಕೇಬಲ್ಗಳು ಜೋತಾಡುತ್ತಿವೆ.</p>.<div><blockquote>ನೀರು ಸ್ವಚ್ಛತೆ ಬೀದಿದೀಪ ರಸ್ತೆ ಸಮಸ್ಯೆ ಇದೆ. ವರ್ಷಕ್ಕೊಮ್ಮೆ ಗಟಾರಗಳನ್ನು ಸ್ವಚ್ಛಗೊಳಿಸಬೇಕು. ಬೀದಿ ನಾಯಿಗಳ ಹಾವಳಿ ಇದೆ. ಸಮಸ್ಯೆಗಳನ್ನು ಪರಿಹರಿಸಲು ಆದ್ಯತೆ ನೀಡಬೇಕು.</blockquote><span class="attribution">ರಾಜು ಉಟಗಿ ನಿವಾಸಿ ಮದಿಹಾಳ</span></div>.<div><blockquote>₹ 11 ಲಕ್ಷ ಅನುದಾನದಲ್ಲಿ ವಿವಿಧೆಡೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. 24X7 ನೀರು ಪೂರೈಕೆ ಯೋಜನೆ ಕಾರ್ಯಗತವಾದರೆ ನೀರಿನ ಸಮಸ್ಯೆ ಪರಿಹಾರವಾಗಲಿದೆ.</blockquote><span class="attribution"> ನಿತಿನ್ ಇಂಡಿ ಪಾಲಿಕೆ ಸದಸ್ಯ 5ನೇ ವಾರ್ಡ್</span></div>.<p><strong>'ವಿದ್ಯುತ್ ಕಂಬ ಲೈನ್ ಬೀದಿದೀಪಕ್ಕೆ ₹ 23 ಲಕ್ಷ ಅನುದಾನ‘ </strong></p><p>ವಾರ್ಡ್ನ ಎಲ್ಲ ಕಡೆ ಎಲ್ಇಡಿ ಬೀದಿದೀಪ ಅಳವಡಿಸಲಾಗುತ್ತಿದೆ. ಅಶೋಕ ನಗರ ಮತ್ತು ಮಾಸ್ತೆಮ್ಮ ಮಣಿಕಂಠ ನಗರ ಹಾಗೂ ಮಲ್ಲಿಕಾರ್ಜುನ ನಗರದಲ್ಲಿ ನಗರ ವಿದ್ಯುತ್ ಕಂಬ ಲೈನ್ ಬೀದಿದೀಪ ಅಳವಡಿಕೆಗೆ ₹ 23 ಲಕ್ಷ ಮಂಜೂರಾಗಿದೆ. ರೇಣುಕಾ ನಗರದಲ್ಲಿ ಪಾರ್ಕ್ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದೆ. ವಾರ್ಡ್ ವಿವಿಧೆಡೆ ಗಟಾರ ನಿರ್ಮಾಣ ರಸ್ತೆ ಅಭಿವೃದ್ಧಿಗೆ ಕ್ರಮ ವಹಿಸಲಾಗಿದೆ ಎಂದು ವಾರ್ಡ್ ಸದಸ್ಯ ನಿತಿನ್ ಇಂಡಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>