ಅಮೃತೇಶ್ವರ ದೇವಸ್ಥಾನದ ಪ್ರವೇಶದ್ವಾರದ ಮುಂದಿರುವ ಸುಂದರ ಕೆತ್ತನೆ
ಅಮೃತೇಶ್ವರ ದೇವಾಲಯದ ಗೋಡೆ ಮೇಲಿರುವ ಕೆತ್ತನೆ
ಮೊದಲನೇ ಸೋಮೇಶ್ವರನು ಆಳುವಾಗ ಚೋಳರು ಈ ದೇವಾಲಯವನ್ನು ದ್ವಂಸ ಅಥವಾ ಸುಟ್ಟು ಹಾಕಿದ ಕಾರಣ ಚೋಳಗೊಂಡ ತ್ರೈಪುರುಷ ದೇವಾಲಯವೆಂದು ಶಾಸನದಲ್ಲಿ ಉಲ್ಲೇಖವಿದೆ.
ಆರ್.ಎಂ. ಷಡಕ್ಷರಯ್ಯ ನಿವೃತ್ತ ಪ್ರಾಧ್ಯಾಪಕ ಇತಿಹಾಸ ವಿಭಾಗ ಕವಿವಿ
ಅನ್ನದಾನದ ಊರು ಅಣ್ಣಿಗೇರಿ
ಈ ಭಾಗದಲ್ಲಿ ನಿತ್ಯ ಅನ್ನದಾನ ಏರ್ಪಡಿಸಲಾಗುತ್ತಿದ್ದ ಕಾರಣ ಅನ್ನ ನೀಡುವ ಊರು ‘ಅನ್ನಗಿರಿ’ ಎಂದು ಕರೆಯಲಾಗುತ್ತಿತ್ತು. ಮುಂದೆ ಕಾಲಾನಂತರ ಅದು ‘ಅಣ್ಣಿಗೇರಿ’ಯಾಯಿತು ಎನ್ನುತ್ತದೆ ಇತಿಹಾಸ. ‘ಅನ್ನಗಿರಿ’ ‘ಅನ್ಯತಟಾಕ’ ಎಂತಲೂ ಐತಿಹಾಸಿಕ ಕೃತಿಯಲ್ಲಿ ಗುರುತಿಸಿಕೊಂಡಿದೆ. ಈ ದೇವಾಲಯವನ್ನು ಸ್ಮಶಾನದ ಮೇಲೆ ನಿರ್ಮಿಸಲಾಗಿದೆ ಎಂಬ ನಂಬಿಕೆಯೂ ಇದೆ. ದೇವಾಲಯದ ಆವರಣದ ಅರಳಿಕಟ್ಟಿಯಲ್ಲಿ ಅರಳಿ ಮರ ಮತ್ತು ಬೇವಿನ ಮರ ಒಟ್ಟಿಗೆ ಬೆಳೆದಿವೆ.