ಲಾಕ್ ಡೌನ್ ಕಾರಣ ಎಲ್ಲಾ ದೇವಸ್ಥಾನಗಳು, ಮಸೀದಿಗಳು ಹಾಗೂ ಚರ್ಚ್ಗಳನ್ನು ಬಂದ್ ಮಾಡಲಾಗಿದೆ. ಆದ್ದರಿಂದ ನಗರದ ಬಮ್ಮಾಪುರ ಓಣಿಯ ಯುವಕರು ಮತ್ತು ಹಿರಿಯರೆಲ್ಲರೂ ಸೇರಿಕೊಂಡು ಘಂಟಿಕೇರಿ ಪೋಲಿಸ್ ಠಾಣೆಗೆ ದೀಪ ಬೆಳಗಿ, ಟೆಂಗಿನಕಾಯಿ ಒಡೆದು ನೀವೇ ನಿಜವಾದ ದೇವರು ಎಂದು ವಿಶಿಷ್ಟವಾಗಿ ಕೊರೊನಾ ವಾರಿಯರ್ಸ್ ಗಳಿಗೆ ಗೌರವ ಸಲ್ಲಿಸಿದರು.