ಹುಬ್ಬಳ್ಳಿಗೆ ಯಾವುದೇ ತೊಂದರೆಯಾಗಲ್ಲ. ಜನರಿಗೆ ಮೂಲಸೌಕರ್ಯ ನೀಡಲು ಬೇಕಾದ ಆರ್ಥಿಕ ಸಂಪನ್ಮೂಲವನ್ನು ಸ್ಥಳೀಯವಾಗಿ ತೆರಿಗೆ ರೂಪದಲ್ಲಿ ಸಂಗ್ರಹವಾಗುತ್ತದೆ. ಸರ್ಕಾರದಿಂದಲೂ ಅನುದಾನ ಸಿಗುತ್ತದೆ. ಹಣಕಾಸಿನ ತೊಂದರೆಯಾಗಲ್ಲ. ಇಷ್ಟು ವರ್ಷಗಳ ಕಾಲ ಎರಡೂ ನಗರಗಳು ಕೂಡಿ ಇದ್ದವು. ಈಗ ಬೇರೆಯಾಗುತ್ತಿರುವುದಕ್ಕೆ ಭಾವನಾತ್ಮಕ ನೋವು ಇದೆ.–ರಾಜಣ್ಣ ಕೊರವಿ ಪಾಲಿಕೆ ಸದಸ್ಯ ಹುಬ್ಬಳ್ಳಿ
ಹುಬ್ಬಳ್ಳಿಯಲ್ಲಿ ಹೆಚ್ಚು ತೆರಿಗೆ ಸಂಗ್ರಹವಾಗುತ್ತದೆ. ಇದರಲ್ಲಿನ ಒಂದಿಷ್ಟು ಪಾಲನ್ನು ಧಾರವಾಡದ ವಾರ್ಡ್ಗಳ ಅಭಿವೃದ್ಧಿಗೆ ಕೊಡುತ್ತಿದ್ದೇವು. ಆ ಹಣ ಈಗ ನಮ್ಮಲ್ಲಿಯೇ ಉಳಿಯುತ್ತದೆ. ಹುಬ್ಬಳ್ಳಿಯ ಅಭಿವೃದ್ಧಿಗೆ ಆ ಹಣ ಬಳಕೆಯಾಗುತ್ತದೆ. ಪ್ರತ್ಯೇಕವಾಗಿರುವುದರಿಂದ ಹುಬ್ಬಳ್ಳಿಗೆ ಲಾಭವಾಗಲಿದೆ.–ಮಹಮ್ಮದ್ ಇಸ್ಮಾಯಿಲ್ ಭದ್ರಾಪೂರ ಪಾಲಿಕೆ ಸದಸ್ಯ ಹುಬ್ಬಳ್ಳಿ
ಧಾರವಾಡ– ಕಿತ್ತೂರು ಮಾರ್ಗದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಈಗಾಗಲೇ ಸರ್ಕಾರದ ವತಿಯಿಂದ ಸಾಕಷ್ಟು ಕ್ರಮಕೈಗೊಳ್ಳಲಾಗಿದೆ. ಮುಂಬರುವ ವರ್ಷಗಳಲ್ಲಿ ಕೈಗಾರಿಕೆಗಳು ಧಾರವಾಡ ಕಡೆ ಶಿಫ್ಟ್ ಆಗಲಿವೆ. ಆಗ ಹುಬ್ಬಳ್ಳಿ ಪಾಲಿಕೆಗೆ ನಷ್ಟ ಉಂಟಾಗುವ ಸಾಧ್ಯತೆ ಇದೆ– ವಿನಯ ಜವಳಿ ಕೈಗಾರಿಕೋದ್ಯಮಿ
ನಾನು 2011–12ನೇ ಸಾಲಿನಲ್ಲಿ ಮೇಯರ್ ಆಗಿದ್ದಾಗ ಪ್ರತ್ಯೇಕ ಪಾಲಿಕೆಗೆ ಧ್ವನಿ ಎತ್ತಿದ್ದೆ. ಅದೀಗ ಫಲ ಕೊಟ್ಟಿದೆ. ಹಣದ ಕೊರತೆ ಆಗಲ್ಲ. ಸ್ಥಳೀಯ ಸಂಪನ್ಮೂಲ ಇದೆ. ಸರ್ಕಾರದಿಂದ ಪ್ರತ್ಯೇಕವಾಗಿ ಅನುದಾನ ಸಿಗುವುದರಿಂದ ಅಭಿವೃದ್ಧಿ ಸಾಧ್ಯವಾಗುತ್ತದೆ. ಪ್ರತ್ಯೇಕ ಪಾಲಿಕೆ ಆಗಿರುವುದರಿಂದ ಧಾರವಾಡಕ್ಕೆ ಒಳ್ಳೆಯ ಭವಿಷ್ಯ ಇದೆ.– ಪಾಂಡುರಂಗ ಪಾಟೀಲ ಮಾಜಿ ಮೇಯರ್
ಹುಬ್ಬಳ್ಳಿ– ಧಾರವಾಡ ಎರಡೂ ಪಾಲಿಕೆಗಳು ಪ್ರತ್ಯೇಕಗೊಂಡಿರುವುದರಿಂದ ಹುಬ್ಬಳ್ಳಿ– ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ (ಹುಡಾ) ತೊಂದರೆಯಾಗುವುದಿಲ್ಲ. ಎಂದಿನಂತೆ ಕಾರ್ಯ ಚಟುವಟಿಕೆಗಳು ಮುಂದುವರಿಯುತ್ತವೆ.– ಶಾಕೀರ ಸನದಿ ಅಧ್ಯಕ್ಷ ಹುಬ್ಬಳ್ಳಿ– ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.