‘ಜನರ ಆರೋಗ್ಯದ ಕಾಳಜಿ ಮುಖ್ಯ. ಆದರೆ, ರಾಜಕಾರಣಿಗಳು ತಮ್ಮ ಸಭೆ, ಸಮಾವೇಶಗಳಿಗೆ ಲಕ್ಷಾಂತರ ಜನರನ್ನು ಸೇರಿಸುತ್ತಾರೆ. ಯಾರೋ ಹೇಳಿದರೆಂದು ಸಿನಿಮಾಗಳಿಗೆ ನಿರ್ಬಂಧ ತೆಗೆಯುತ್ತಾರೆ. ಆದರೆ, ಹೋಟೆಲ್ಗಳ ಮೇಲೆ ಮಾತ್ರ ನಿರ್ಬಂಧ ಏಕೆ? ಆರು ತಿಂಗಳು ಸ್ತಬ್ಧರಾಗಿದ್ದೆವು. ಇತ್ತೀಚೆಗಷ್ಟೇ ಮರಳಿ ಹೋಟೆಲ್ಗಳು ಚೇತರಿಕೆ ಕಂಡಿದ್ದವು. ಬಹುಶಃ ಮತ್ತೆ ಲಾಕ್ಡೌನ್ ಏನಾದರೂ ಮಾಡಿದರೆ ಸಂಪೂರ್ಣ ನೆಲಕಚ್ಚಿ ಹೋಗಲಿದ್ದೇವೆ’ ಎಂದು ಹುಬ್ಬಳ್ಳಿ ಹೋಟೆಲ್ ಸಂಘಟನೆಗಳ ಅಧ್ಯಕ್ಷ ಸುಧಾಕರ ಶೆಟ್ಟಿ ಆತಂಕ ವ್ಯಕ್ತಪಡಿಸಿದರು.