<p><strong>ಧಾರವಾಡ:</strong> ‘ಕಲಾವಿದರಿಗೆ ₹5 ಸಾವಿರ ಮಾಸಾಶನ ನೀಡಬೇಕು’ ಎಂದು ಮುಖಂಡ ಆರ್.ಎಂ. ದರಗದ ಒತ್ತಾಯಿಸಿದರು.</p>.<p>ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಇಬ್ರಾಹಿಂ ಸುತಾರ ಸಾಮರಸ್ಯ ಸಾಂಸ್ಕೃತಿಕ ಸಂಸ್ಥೆ ವತಿಯಿಂದ ಸೋಮವಾರ ಏರ್ಪಡಿಸಿದ್ದ ಜನಪದ ಸಂಭ್ರಮ ಸಮಾರಂಭದಲ್ಲಿ ಅವರು ಮಾತನಾಡಿದರು.</p>.<p>‘ಕಲೆಯನ್ನು ಎಲ್ಲರೂ ಪ್ರೀತಿಸುತ್ತಾರೆ. ಆದರೆ, ಕಲಾವಿದರ ಕಷ್ಟಗಳನ್ನು ಅರಿತುಕೊಳ್ಳವರಿಲ್ಲ. ಅವರನ್ನು ಬಳಸಿಕೊಂಡು ನಂತರ ನಿಷ್ಕಾಳಜಿ ತೋರುತ್ತಾರೆ’ ಎಂದು ಬೇಸರ ವಕ್ತಪಡಿಸಿದರು.</p>.<p>ವಿದ್ಯಾವರ್ಧಕ ಸಂಘದ ಕೋಶಾಧ್ಯಕ್ಷ ಸತೀಶ ತುರಮರಿ ಮಾತನಾಡಿ, ‘ಸಂಗೀತಕ್ಕೆ ಅಗಾಧ ಶಕ್ತಿ ಇದೆ. ಅದು ಎಲ್ಲರನ್ನು ತಲುಪುತ್ತದೆ’ ಎಂದರು. </p>.<p>ಸುಮತಿಶ್ರೀ, ನವಲಿಹಿರೇಮಠ, ಕರವೇ ಜಿಲ್ಲಾ ಘಟಕದ ಅಧ್ಯಕ್ಷ ರುದ್ರೇಶ ಹಳವದ, ಅಣ್ಣಪ್ಪ ದೇಸಾಯಿ, ರೈತ ಮುಖಂಡ ಯಮನೂರ ನಧಾಪ ಮುದಗಲ್, ಪ್ರಕಾಶ ಮಲ್ಲಿಗವಾಡ, ಶಿವ ಬಿದರಕಟ್ಟಿ ಇದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಧಾರವಾಡ:</strong> ‘ಕಲಾವಿದರಿಗೆ ₹5 ಸಾವಿರ ಮಾಸಾಶನ ನೀಡಬೇಕು’ ಎಂದು ಮುಖಂಡ ಆರ್.ಎಂ. ದರಗದ ಒತ್ತಾಯಿಸಿದರು.</p>.<p>ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಇಬ್ರಾಹಿಂ ಸುತಾರ ಸಾಮರಸ್ಯ ಸಾಂಸ್ಕೃತಿಕ ಸಂಸ್ಥೆ ವತಿಯಿಂದ ಸೋಮವಾರ ಏರ್ಪಡಿಸಿದ್ದ ಜನಪದ ಸಂಭ್ರಮ ಸಮಾರಂಭದಲ್ಲಿ ಅವರು ಮಾತನಾಡಿದರು.</p>.<p>‘ಕಲೆಯನ್ನು ಎಲ್ಲರೂ ಪ್ರೀತಿಸುತ್ತಾರೆ. ಆದರೆ, ಕಲಾವಿದರ ಕಷ್ಟಗಳನ್ನು ಅರಿತುಕೊಳ್ಳವರಿಲ್ಲ. ಅವರನ್ನು ಬಳಸಿಕೊಂಡು ನಂತರ ನಿಷ್ಕಾಳಜಿ ತೋರುತ್ತಾರೆ’ ಎಂದು ಬೇಸರ ವಕ್ತಪಡಿಸಿದರು.</p>.<p>ವಿದ್ಯಾವರ್ಧಕ ಸಂಘದ ಕೋಶಾಧ್ಯಕ್ಷ ಸತೀಶ ತುರಮರಿ ಮಾತನಾಡಿ, ‘ಸಂಗೀತಕ್ಕೆ ಅಗಾಧ ಶಕ್ತಿ ಇದೆ. ಅದು ಎಲ್ಲರನ್ನು ತಲುಪುತ್ತದೆ’ ಎಂದರು. </p>.<p>ಸುಮತಿಶ್ರೀ, ನವಲಿಹಿರೇಮಠ, ಕರವೇ ಜಿಲ್ಲಾ ಘಟಕದ ಅಧ್ಯಕ್ಷ ರುದ್ರೇಶ ಹಳವದ, ಅಣ್ಣಪ್ಪ ದೇಸಾಯಿ, ರೈತ ಮುಖಂಡ ಯಮನೂರ ನಧಾಪ ಮುದಗಲ್, ಪ್ರಕಾಶ ಮಲ್ಲಿಗವಾಡ, ಶಿವ ಬಿದರಕಟ್ಟಿ ಇದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>