<p><strong>ಹುಬ್ಬಳ್ಳಿ: ಧಾ</strong>ರವಾಡ– ಬೆಳಗಾವಿ ಮಾರ್ಗದ ಮಧ್ಯೆ ಮಾ.6ರಿಂದ ಸೆಪ್ಟೆಂಬರ್ 6ರವರೆಗೆ ವಿಶೇಷ ರೈಲು ಸಂಚರಿಸಲಿದೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ.</p>.<p>ಧಾರವಾಡದಿಂದ ಬೆಳಿಗ್ಗೆ 8.15ಕ್ಕೆ ಹೊರಡುವ (ಗಾಡಿ ಸಂಖ್ಯೆ 07357) ರೈಲು ಅಳ್ನಾವರ, ಲೋಂಡಾ, ಖಾನಾಪುರ ಮಾರ್ಗವಾಗಿ 10.45ಕ್ಕೆ ಬೆಳಗಾವಿ ತಲುಪಲಿದೆ. ಅಲ್ಲಿಂದ ರಾತ್ರಿ 7.30ಕ್ಕೆ ಹೊರಟು (07358) 9.55ಕ್ಕೆ ಧಾರವಾಡ ತಲುಪಲಿದೆ.</p>.<p>ಎ.ಸಿ, ಸ್ಲೀಪರ್, ಸಾಮಾನ್ಯ ಸೇರಿದಂತೆ 22 ಬೋಗಿಗಳನ್ನು ರೈಲು ಹೊಂದಿದೆ. ಈ ಅವಧಿಯಲ್ಲಿ ಧಾರವಾಡ–ಹುಬ್ಬಳ್ಳಿ–ಧಾರವಾಡ (07363/07364) ರೈಲು ಸಂಚಾರ ರದ್ದಾಗಲಿದೆ.</p>.<p>ಈ ರೈಲು ಸಂಚರಿಸುವ ಕಾರಣ ಮಾರ್ಚ್ 6ರಂದು ಧಾರವಾಡ– ಮೈಸೂರು ಎಕ್ಸ್ಪ್ರೆಸ್ ( 17302), ಮೀರಜ್–ಕೆಎಸ್ಆರ್ ಬೆಂಗಳೂರು ರಾಣಿ ಚನ್ನಮ್ಮ ಎಕ್ಸ್ಪ್ರೆಸ್ (16590), 8ರಂದು ಹಜರತ್ ನಿಜಾಮುದ್ದೀನ್–ಯಶವಂತಪುರ ಸಂಪರ್ಕಕ್ರಾಂತಿ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ (12630), 4ರಂದು ಚಂಡಿಗಢ–ಯಶವಂತಪುರ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ (22686), 10ರಂದು ಪಂಢರಪುರ–ಯಶವಂತಪುರ ಎಕ್ಸ್ಪ್ರೆಸ್ (16542) ತಡವಾಗಿ ಸಂಚರಿಸಲಿವೆ. </p>.<p>ತಾತ್ಕಾಲಿಕ ನಿಲುಗಡೆ: ಪ್ರಯಾಣಿಕರ ಅನುಕೂಲಕ್ಕಾಗಿ ಕೆಲವು ರೈಲ್ವೆ ನಿಲ್ದಾಣಗಳಲ್ಲಿ ಆರು ತಿಂಗಳವರೆಗೆ ಪ್ರಾಯೋಗಿಕ ಆಧಾರದಲ್ಲಿ ಒಂದು ನಿಮಿಷ ನಿಲುಗಡೆ ಮಾಡಲು ನೈರುತ್ಯ ರೈಲ್ವೆ ಇಲಾಖೆ ನಿರ್ಧರಿಸಿದೆ. </p>.<p>ಮಾ.5ರಿಂದ ಹುಬ್ಬಳ್ಳಿ–ದಾದರ್ (17317) ಹಾಗೂ ಮಾರ್ಚ್ 4ರಿಂದ ದಾದರ್– ಹುಬ್ಬಳ್ಳಿ (17318) ರೈಲು ಚಿಕ್ಕೋಡಿ ರೋಡ್ ನಿಲ್ದಾಣದಲ್ಲಿ, 5ರಿಂದ ಮೈಸೂರು–ಬಾಗಲಕೋಟೆ (17307) ಹಾಗೂ 6ರಿಂದ ಬಾಗಲ ಕೋಟೆ–ಮೈಸೂರು ( 17308) ರೈಲು ಇಬ್ರಾಹಿಂಪುರ ಹಾಲ್ಟ್ನಲ್ಲಿ, 7ರಿಂದ ಹುಬ್ಬಳ್ಳಿ–ಕಾರಟಗಿ (17303) ಹಾಗೂ ಹಾಗೂ ಕಾರಟಗಿ–ಹುಬ್ಬಳ್ಳಿ (17304) ರೈಲುಗಳು ಬನ್ನಿಕೊಪ್ಪ ನಿಲ್ದಾಣದಲ್ಲಿ ನಿಲ್ಲಲಿವೆ ಎಂದು ಪ್ರಕಟಣೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ: ಧಾ</strong>ರವಾಡ– ಬೆಳಗಾವಿ ಮಾರ್ಗದ ಮಧ್ಯೆ ಮಾ.6ರಿಂದ ಸೆಪ್ಟೆಂಬರ್ 6ರವರೆಗೆ ವಿಶೇಷ ರೈಲು ಸಂಚರಿಸಲಿದೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ.</p>.<p>ಧಾರವಾಡದಿಂದ ಬೆಳಿಗ್ಗೆ 8.15ಕ್ಕೆ ಹೊರಡುವ (ಗಾಡಿ ಸಂಖ್ಯೆ 07357) ರೈಲು ಅಳ್ನಾವರ, ಲೋಂಡಾ, ಖಾನಾಪುರ ಮಾರ್ಗವಾಗಿ 10.45ಕ್ಕೆ ಬೆಳಗಾವಿ ತಲುಪಲಿದೆ. ಅಲ್ಲಿಂದ ರಾತ್ರಿ 7.30ಕ್ಕೆ ಹೊರಟು (07358) 9.55ಕ್ಕೆ ಧಾರವಾಡ ತಲುಪಲಿದೆ.</p>.<p>ಎ.ಸಿ, ಸ್ಲೀಪರ್, ಸಾಮಾನ್ಯ ಸೇರಿದಂತೆ 22 ಬೋಗಿಗಳನ್ನು ರೈಲು ಹೊಂದಿದೆ. ಈ ಅವಧಿಯಲ್ಲಿ ಧಾರವಾಡ–ಹುಬ್ಬಳ್ಳಿ–ಧಾರವಾಡ (07363/07364) ರೈಲು ಸಂಚಾರ ರದ್ದಾಗಲಿದೆ.</p>.<p>ಈ ರೈಲು ಸಂಚರಿಸುವ ಕಾರಣ ಮಾರ್ಚ್ 6ರಂದು ಧಾರವಾಡ– ಮೈಸೂರು ಎಕ್ಸ್ಪ್ರೆಸ್ ( 17302), ಮೀರಜ್–ಕೆಎಸ್ಆರ್ ಬೆಂಗಳೂರು ರಾಣಿ ಚನ್ನಮ್ಮ ಎಕ್ಸ್ಪ್ರೆಸ್ (16590), 8ರಂದು ಹಜರತ್ ನಿಜಾಮುದ್ದೀನ್–ಯಶವಂತಪುರ ಸಂಪರ್ಕಕ್ರಾಂತಿ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ (12630), 4ರಂದು ಚಂಡಿಗಢ–ಯಶವಂತಪುರ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ (22686), 10ರಂದು ಪಂಢರಪುರ–ಯಶವಂತಪುರ ಎಕ್ಸ್ಪ್ರೆಸ್ (16542) ತಡವಾಗಿ ಸಂಚರಿಸಲಿವೆ. </p>.<p>ತಾತ್ಕಾಲಿಕ ನಿಲುಗಡೆ: ಪ್ರಯಾಣಿಕರ ಅನುಕೂಲಕ್ಕಾಗಿ ಕೆಲವು ರೈಲ್ವೆ ನಿಲ್ದಾಣಗಳಲ್ಲಿ ಆರು ತಿಂಗಳವರೆಗೆ ಪ್ರಾಯೋಗಿಕ ಆಧಾರದಲ್ಲಿ ಒಂದು ನಿಮಿಷ ನಿಲುಗಡೆ ಮಾಡಲು ನೈರುತ್ಯ ರೈಲ್ವೆ ಇಲಾಖೆ ನಿರ್ಧರಿಸಿದೆ. </p>.<p>ಮಾ.5ರಿಂದ ಹುಬ್ಬಳ್ಳಿ–ದಾದರ್ (17317) ಹಾಗೂ ಮಾರ್ಚ್ 4ರಿಂದ ದಾದರ್– ಹುಬ್ಬಳ್ಳಿ (17318) ರೈಲು ಚಿಕ್ಕೋಡಿ ರೋಡ್ ನಿಲ್ದಾಣದಲ್ಲಿ, 5ರಿಂದ ಮೈಸೂರು–ಬಾಗಲಕೋಟೆ (17307) ಹಾಗೂ 6ರಿಂದ ಬಾಗಲ ಕೋಟೆ–ಮೈಸೂರು ( 17308) ರೈಲು ಇಬ್ರಾಹಿಂಪುರ ಹಾಲ್ಟ್ನಲ್ಲಿ, 7ರಿಂದ ಹುಬ್ಬಳ್ಳಿ–ಕಾರಟಗಿ (17303) ಹಾಗೂ ಹಾಗೂ ಕಾರಟಗಿ–ಹುಬ್ಬಳ್ಳಿ (17304) ರೈಲುಗಳು ಬನ್ನಿಕೊಪ್ಪ ನಿಲ್ದಾಣದಲ್ಲಿ ನಿಲ್ಲಲಿವೆ ಎಂದು ಪ್ರಕಟಣೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>