ಬುಧವಾರ, 13 ಆಗಸ್ಟ್ 2025
×
ADVERTISEMENT
ADVERTISEMENT

2021ರಲ್ಲೇ ರಾಷ್ಟ್ರೀಯ ಮಾನ್ಯತೆ: ‘ಧಾರವಾಡಿ ಎಮ್ಮೆ’ ತಳಿ ಸಂವರ್ಧನೆಗಿಲ್ಲ ಕ್ರಮ

Published : 12 ಆಗಸ್ಟ್ 2025, 23:47 IST
Last Updated : 12 ಆಗಸ್ಟ್ 2025, 23:47 IST
ಫಾಲೋ ಮಾಡಿ
Comments
ಧಾರವಾಡಿ ತಳಿ ಸಂವರ್ಧನೆ ಪಶು ಇಲಾಖೆ ವ್ಯಾಪ್ತಿಗೆ ಬರಲ್ಲ. ಹೀಗಾಗಿ ಪ್ರಸ್ತಾವ ಸಲ್ಲಿಸಲು ಆಗದು. ಅದಕ್ಕೆ ಪ್ರತ್ಯೇಕ ವಿಭಾಗವಿದೆ
ಡಾ. ಸದಾಶಿವ ಉಪ್ಪಾರ್‌ ಉಪನಿರ್ದೇಶಕ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ
ಕಲಿಕೆ ಉದ್ದೇಶಕ್ಕಾಗಿ 12 ಎಮ್ಮೆಗಳನ್ನು ಪೋಷಿಸಲಾಗುತ್ತಿದೆ. ತಳಿ ಸಂವರ್ಧನೆಗಾಗಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುತ್ತೇವೆ. ಅನುದಾನ ಸಿಕ್ಕರೆ ಅನುಕೂಲ
ಡಾ. ಅನಿಲ್ ಕುಮಾರ್‌ ಜಿ.ಕೆ ಮುಖ್ಯಸ್ಥ ಪ್ರಾಣಿ ವಿಜ್ಞಾನ ವಿಭಾಗ ಕೃಷಿ ವಿಶ್ವವಿದ್ಯಾಲಯ
ಧಾರವಾಡಿ ತಳಿ ಅಭಿವೃದ್ಧಿಗೆ ಸರ್ಕಾರ ಶೀಘ್ರವೇ ಕ್ರಮ ವಹಿಸಬೇಕು. ರೈತರಿಗೆ ಸಬ್ಸಿಡಿ ದರದಲ್ಲಿ ಈ ತಳಿಯ ಎಮ್ಮೆ ನೀಡಬೇಕು
ವೀರೇಶ ಸೊಬರದಮಠ ರೈತ ಮುಖಂಡ
‘ಪೇಢೆ ಕುಂದಾ ಕರದಂಟಿಗೆ ಬಳಕೆ’
2021ರ ಅಂಕಿ ಅಂಶ ಪ್ರಕಾರ ಉತ್ತರ ಕರ್ನಾಟಕದ 14 ಜಿಲ್ಲೆಗಳಲ್ಲಿ ಕಾಣಸಿಗುವ ‘ಧಾರವಾಡಿ ತಳಿ’ಯ ಎಮ್ಮೆಗಳ ಸಂಖ್ಯೆ 12.05 ಲಕ್ಷ ಇದೆ. ಈ ತಳಿ ಎಮ್ಮೆ ಜೀವಿತಾವಧಿಯಲ್ಲಿ ಐದಕ್ಕೂ ಹೆಚ್ಚು ಬಾರಿ ಕರು ಹಾಕುತ್ತದೆ. 10 ತಿಂಗಳವರೆಗೆ 970 ಲೀಟರ್ ಹಾಲುನೀಡಲಿದೆ. ಕೊಟ್ಟಿಗೆಯಲ್ಲೇ ಸಾಕಿದಾಗ ‘ಸುರ್ತಿ’ ತಳಿಯ ಎಮ್ಮೆಯಷ್ಟೇ (1200 ಲೀಟರ್) ಹಾಲು ಕೊಟ್ಟಿತ್ತು. ‘ಈ ತಳಿ ಎಮ್ಮೆಗಳ ಹಾಲಿನಲ್ಲಿ ಶೇ 7ರಷ್ಟು ಕೊಬ್ಬಿನ ಅಂಶ ಇದೆ. ಧಾರವಾಡ ಪೇಢೆ ಬೆಳಗಾವಿ ಕುಂದಾ ಜಮಖಂಡಿ ಕಲ್ಲಿ ಪೇಢೆ ಗೋಕಾಕ ಮತ್ತು ಅಮೀನಗಡ ಕರದಂಟು ತಿನಿಸುಗಳಿಗೆ ಬಳಕೆಯಾಗುತ್ತದೆ’ ಎಂದು ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ವಿ.ಎಸ್.ಕುಲಕರ್ಣಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT