ಹುಬ್ಬಳ್ಳಿ;ಡಾನ್ಸ್ ಕಲಿಯಲು ಆಸಕ್ತಿ ಇರುವವರು ಹುಬ್ಬಳ್ಳಿ ಧಾರವಾಡಕ್ಕೆ ಬನ್ನಿ. ಇಲ್ಲಿನ ಗುಂಡಿಬಿದ್ದಿರುವ ರಸ್ತೆಗಳಲ್ಲಿ ಎರಡು ಸುತ್ತು ಓಡಾಡಿದರೆ ತನ್ನಿಂದತಾನೇ ಡಾನ್ಸ್ ಕಲಿಯಬಹುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವ್ಯಂಗ್ಯವಾಡಿದರು.
ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ದಿನ ಹುಬ್ಬಳ್ಳಿ, ಧಾರವಾಡದಲ್ಲಿ ಓಡಾಡಿದೆ, ಒಂದೂ ರಸ್ತೆ ಸರಿಯಿಲ್ಲ. ಗುಂಡಿಬಿದ್ದು ಹಾಳಾಗಿವೆ. ಬಿಜೆಪಿ ಸುಳ್ಳು ಭರವಸೆ ನೀಡಿ ಜನರಿಗೆ ಮೋಸ ಮಾಡಿದೆ ಎಂದು ವಾಗ್ದಾಳಿ ನಡೆಸಿದರು.