ತಾಲ್ಲೂಕಿನ ಮೊರಬ, ಶಿರಕೋಳ, ಆಯಟ್ಟಿ, ಶಿರೂರ, ಗುಮ್ಮಗೋಳ, ಜಾವೂರ, ಹನಸಿ, ಬ್ಯಾಲ್ಯಾಳ, ಹೆಬ್ಬಾಳ, ನವಲಗುಂದ, ಗುಡಿಸಾಗರ, ನಾಗನೂರ, ಕಡದಳ್ಳಿ, ಅಮರಗೋಳ ಹಾಗೂ ಬೆಳವಟಗಿ ಸೇರಿದಂತೆ ಅನೇಕ ಗ್ರಾಮಗಳ ಜಮೀನುಗಳಲ್ಲಿ ಬೆಣ್ಣೆಹಳ್ಳದ ನೀರು ನುಗ್ಗಿದೆ. ಪರಿಣಾಮ ಹೆಸರು, ಹತ್ತಿ, ಗೋವಿನಜೋಳ ಹಾಗೂ ಈರುಳ್ಳಿ ಬೆಳೆಗಳಿಗೆ ಅಪಾರ ಪ್ರಮಾಣದ ಹಾನಿಯಾಗಿದೆ.