ಅಳ್ನಾವರ: ಮಂಗಳವಾರ ರಾತ್ರಿ ಆರಂಭವಾದ ಮಳೆ ಬುಧವಾರ ಬೆಳಗಿನ ಜಾವದವರೆಗೆ ಬಿಟ್ಟು ಬಿಡದೆ ಸುರಿದಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು.
ಪಟ್ಟಣ ಹಾಗೂ ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ಉತ್ತಮ ಮಳೆಯಾಗಿದೆ.ಗದ್ದೆಗಳಲ್ಲಿ ನೀರು ನಿಂತಿದೆ. ಭತ್ತ ಹಾಗೂ ಕಬ್ಬು ಬೆಳೆಗೆ ಮಳೆ ಸಹಕಾರಿಯಾಗಿದೆ. ಮಧ್ಯಾಹ್ನದವರೆಗೆ ಅಂಗಡಿಗಳ ಮಾಲೀಕರು ವಹಿವಾಟು ನಡೆಸಿದರು.
ಸಭೆ: ಪಟ್ಟಣ ಪಂಚಾಯ್ತಿ ಸಭಾಭವನದಲ್ಲಿ ಜಿಲ್ಲಾ ಯೋಜನಾ ನಿರ್ದೇಶಕ ಹಾಗೂ ಅತಿವೃಷ್ಟಿಸಮಿತಿಯ ನೋಡಲ್ ಅಧಿಕಾರಿ ರುದ್ರೇಶ ಅಧಿಕಾರಿಗಳ ಜೊತೆಸಭೆ ನಡೆಸಿದರು.
ಕೋವಿಡ್ಲಸಿಕೆ ಪಡೆಯಲು ಜನರಲ್ಲಿ ಜಾಗೃತಿ ಮೂಡಿಸಬೇಕು, ಪ್ರವಾಹ ಪರಿಸ್ಥಿತಿ ಉಂಟಾದರೆ ತುರ್ತು ಕಾರ್ಯಕ್ಕೆ ಸಜ್ಜಾಗಿರಬೇಕು ಎಂದು ಸೂಚಿಸಿದರು.ಕಳೆದ ವರ್ಷ ಉಂಟಾದ ಅತಿವೃಷ್ಟಿಗೆ ಸಿಲುಕಿದಬಡಾವಣೆಗಳನ್ನು ವೀಕ್ಷಿಸಿದ ಅವರು ಮುಂಜಾಗ್ರತಾಕ್ರಮ ಜರುಗಿಸಲು ಹೇಳಿದರು.
ತುಂಬಿರುವ ಕಾರಣ ಡೌಗಿ ನಾಲಾ ಬಾಂದಾರಾದ ಗೇಟ್ಗಳನ್ನುತೆರೆದು ಹೆಚ್ಚುವರಿ ಹಳ್ಳದ ನೀರನ್ನು ಬಿಡಲಾಗುತ್ತಿದೆ.
ತಹಶೀಲ್ದಾರ್ ಅಮರೇಶ ಪಮ್ಮಾರ, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಪಿ.ಕೆ. ಗುಡದಾರಿ, ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ತಾಲ್ಲೂಕಿನ ಗ್ರಾಮ ಪಂಚಾಯ್ತಿ ಪಿಡಿಒಗಳು, ಗ್ರಾಮ ಲೆಕ್ಕಾಧಿಕಾರಿಗಳು ಪಾಲ್ಗೊಂಡಿದ್ದರು.