ಗಂಗಾವತಿಯಿಂದ ಬಂದಿದ್ದ ಪ್ರಯಾಣಿಕರೊಬ್ಬರು ಹಳೇ ಬಸ್ ನಿಲ್ದಾಣದಲ್ಲಿ ಬಸ್ ಏರಿ ಬಸ್ನಲ್ಲಿಯೇ ಬ್ಯಾಗ್ ಬಿಟ್ಟು ಶೌಚಾಲಯಕ್ಕೆ ಹೋಗಿದ್ದರು. ಕೆಲ ಹೊತ್ತಿನ ಬಳಿಕ ಬ್ಯಾಗ್ ಬಿಟ್ಟಿರುವುದನ್ನು ನೆನಪಿಸಿಕೊಂಡ ಅವರು ತಾವು ಏರಿದ್ದ ಬಸ್ಗಾಗಿ ಹುಡುಕಾಟ ನಡೆಸಲು ಧಾರವಾಡಕ್ಕೆ ಹೋಗಿದ್ದಾರೆ. ಪ್ರಯಾಣಿಕ ಗಾಬರಿಯಿಂದ ಬ್ಯಾಗ್ಗಾಗಿ ಮೂರ್ನಾಲ್ಕು ಬಸ್ಗಳಲ್ಲಿ ಹುಡುಕಿದ್ದಾನೆ. ಆಗ ಹನುಮಂತಪ್ಪ ಆ ಪ್ರಯಾಣಿಕಮನ್ನು ಕರೆದು ವಿಚಾರಿಸಿ, ಬ್ಯಾಗ್ ಅವರದ್ದೇ ಎನ್ನುವುದನ್ನು ಖಚಿತ ಪಡಿಸಿಕೊಂಡು ಅಧಿಕಾರಗಳ ಸಮ್ಮುಖದಲ್ಲಿ ವಾಪಸ್ ನೀಡಿದ್ದಾರೆ.