<p>ಹುಬ್ಬಳ್ಳಿ: ರಾತ್ರಿ ಪಾಳೆಯಲ್ಲಿ ಪಾಯಿಂಟ್ ಪುಸ್ತಕ ಪಂಚ್ ಮಾಡುವ ವಿಷಯದಲ್ಲಿ ನಗರದ ಪೊಲೀಸ್ ಠಾಣೆಯೊಂದರ ಇನ್ಸ್ಟೆಕ್ಟರ್ ತಮ್ಮ ಸಿಬ್ಬಂದಿಗೆ ಅವಾಚ್ಯ ಪದಗಳಿಂದ ನಿಂದಿಸಿ ಕಿರುಕುಳ ನೀಡಿದ್ದಾರೆ ಎನ್ನುವ ಆರೋಪಕ್ಕೆ ಸಂಬಂಧಿಸಿದಂತೆ ಮಂಗಳವಾರ ಡಿಸಿಪಿ ಸಾಹಿಲ್ ಬಾಗ್ಲಾ ಠಾಣೆಗೆ ತೆರಳಿ ವಿಚಾರಣೆ ಮಾಡಿದ್ದಾರೆ.</p>.<p>ಸಾಹಿಲ್ ಬಾಗ್ಲಾ ಅವರು ಕೆಲ ಸಿಬ್ಬಂದಿಯನ್ನು ಆ ಠಾಣೆಯ ಇನ್ಸ್ಟೆಕ್ಟರ್ ಸಮ್ಮುಖದಲ್ಲಿಯೇ ವಿಚಾರಣೆ ಮಾಡಿದ್ದಾರೆ. ಇದಕ್ಕೆ ಕೆಲ ಸಿಬ್ಬಂದಿ ಅಸಮಾಧಾನ ವ್ಯಕ್ತಪಡಿಸಿದ್ದು, ‘ಇನ್ಸ್ಟೆಕ್ಟರ್ ಎದುರೇ ನಮ್ಮನ್ನು ವಿಚಾರಣೆ ಮಾಡಿದರೆ ಹೇಗೆ? ಅಲ್ಲಿ ಮುಕ್ತವಾಗಿ ಮಾತನಾಡಲು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದ್ದಾರೆ.</p>.<p>ಪಾಯಿಂಟ್ ಬುಕ್ ಪಂಚ್ ಮಾಹಿತಿ ನೀಡಲು ಇನ್ಸ್ಪೆಕ್ಟರ್ಗೆ ಹೆಡ್ ಕಾನ್ಸ್ಟೆಬಲ್ ಕರೆ ಮಾಡಿದ್ದಾಗ ಅವಾಚ್ಯವಾಗಿ ನಿಂದಿಸಿದ್ದಾರೆ. ಅಮಾನತು ಮಾಡಿಸುತ್ತೇನೆ ಎಂದು ದರ್ಪ ತೋರಿದ್ದಾರೆ ಎಂದು ಸಿಬ್ಬಂದಿ ಆರೋಪಿಸಿದ್ದಾರೆ. ಈ ಕುರಿತು ವಿಚಾರಣೆ ನಡೆಸುವಂತೆ ಆಯುಕ್ತ ಲಾಭೂರಾಮ್ ಅವರು ಡಿಸಿಪಿಗೆ ಸೂಚಿಸಿದ್ದರು.</p>.<p>ಈ ಕುರಿತು ಪ್ರತಿಕ್ರಿಯಿಸಿದ ಸಾಹಿಲ್ ಬಾಗ್ಲಾ ‘ಇನ್ಸ್ಪೆಕರ್ ವಿರುದ್ಧ ಸಿಬ್ಬಂದಿ ಆರೋಪ ಮಾಡಿರುವುದು ಆಂತರಿಕ ವಿಷಯ. ಎಲ್ಲರೊಂದಿಗೆ ಚರ್ಚಿಸಿ ಸಮಸ್ಯೆ ಪರಿಹರಿಸಲಾಗಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹುಬ್ಬಳ್ಳಿ: ರಾತ್ರಿ ಪಾಳೆಯಲ್ಲಿ ಪಾಯಿಂಟ್ ಪುಸ್ತಕ ಪಂಚ್ ಮಾಡುವ ವಿಷಯದಲ್ಲಿ ನಗರದ ಪೊಲೀಸ್ ಠಾಣೆಯೊಂದರ ಇನ್ಸ್ಟೆಕ್ಟರ್ ತಮ್ಮ ಸಿಬ್ಬಂದಿಗೆ ಅವಾಚ್ಯ ಪದಗಳಿಂದ ನಿಂದಿಸಿ ಕಿರುಕುಳ ನೀಡಿದ್ದಾರೆ ಎನ್ನುವ ಆರೋಪಕ್ಕೆ ಸಂಬಂಧಿಸಿದಂತೆ ಮಂಗಳವಾರ ಡಿಸಿಪಿ ಸಾಹಿಲ್ ಬಾಗ್ಲಾ ಠಾಣೆಗೆ ತೆರಳಿ ವಿಚಾರಣೆ ಮಾಡಿದ್ದಾರೆ.</p>.<p>ಸಾಹಿಲ್ ಬಾಗ್ಲಾ ಅವರು ಕೆಲ ಸಿಬ್ಬಂದಿಯನ್ನು ಆ ಠಾಣೆಯ ಇನ್ಸ್ಟೆಕ್ಟರ್ ಸಮ್ಮುಖದಲ್ಲಿಯೇ ವಿಚಾರಣೆ ಮಾಡಿದ್ದಾರೆ. ಇದಕ್ಕೆ ಕೆಲ ಸಿಬ್ಬಂದಿ ಅಸಮಾಧಾನ ವ್ಯಕ್ತಪಡಿಸಿದ್ದು, ‘ಇನ್ಸ್ಟೆಕ್ಟರ್ ಎದುರೇ ನಮ್ಮನ್ನು ವಿಚಾರಣೆ ಮಾಡಿದರೆ ಹೇಗೆ? ಅಲ್ಲಿ ಮುಕ್ತವಾಗಿ ಮಾತನಾಡಲು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದ್ದಾರೆ.</p>.<p>ಪಾಯಿಂಟ್ ಬುಕ್ ಪಂಚ್ ಮಾಹಿತಿ ನೀಡಲು ಇನ್ಸ್ಪೆಕ್ಟರ್ಗೆ ಹೆಡ್ ಕಾನ್ಸ್ಟೆಬಲ್ ಕರೆ ಮಾಡಿದ್ದಾಗ ಅವಾಚ್ಯವಾಗಿ ನಿಂದಿಸಿದ್ದಾರೆ. ಅಮಾನತು ಮಾಡಿಸುತ್ತೇನೆ ಎಂದು ದರ್ಪ ತೋರಿದ್ದಾರೆ ಎಂದು ಸಿಬ್ಬಂದಿ ಆರೋಪಿಸಿದ್ದಾರೆ. ಈ ಕುರಿತು ವಿಚಾರಣೆ ನಡೆಸುವಂತೆ ಆಯುಕ್ತ ಲಾಭೂರಾಮ್ ಅವರು ಡಿಸಿಪಿಗೆ ಸೂಚಿಸಿದ್ದರು.</p>.<p>ಈ ಕುರಿತು ಪ್ರತಿಕ್ರಿಯಿಸಿದ ಸಾಹಿಲ್ ಬಾಗ್ಲಾ ‘ಇನ್ಸ್ಪೆಕರ್ ವಿರುದ್ಧ ಸಿಬ್ಬಂದಿ ಆರೋಪ ಮಾಡಿರುವುದು ಆಂತರಿಕ ವಿಷಯ. ಎಲ್ಲರೊಂದಿಗೆ ಚರ್ಚಿಸಿ ಸಮಸ್ಯೆ ಪರಿಹರಿಸಲಾಗಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>