ಸರ್ಕಾರದ್ದೇ ಕಾಮಗಾರಿ ಆಗಿರುವುದರಿಂದ ಪರಿಹಾರ ತುಸು ವಿಳಂಬವಾದರೂ ಬರುತ್ತದೆ. ಒಂದು ವಾರದಲ್ಲಿ ಕಚೇರಿಗಳನ್ನು ಸ್ಥಳಾಂತರಗೊಳಿಸಲು ಸೂಚಿಸಲಾಗುವುದು.
–ದಿವ್ಯಪ್ರಭು, ಜಿಲ್ಲಾಧಿಕಾರಿ
ಕಾಮಗಾರಿ ಹಿನ್ನೆಲೆಯಲ್ಲಿ ಒಂದು ವಾರದಲ್ಲಿ ಕಚೇರಿಗಳನ್ನು ತೆರವು ಮಾಡುವುದಾಗಿ ಪೊಲೀಸ್ ಕಮಿಷನರ್ ಹೇಳಿದ್ದರು. ಆದರೆ ಪರಿಹಾರ ಧನ ಸಿಕ್ಕ ಬಳಿಕ ಮಾಡುವುದಾಗಿ ಹೇಳುತ್ತಿದ್ದಾರೆ. ಪರಿಶೀಲಿಸುವೆ.
– ಮಹೇಶ ಟೆಂಗಿನಕಾಯಿ, ಶಾಸಕ
ಮೇಲ್ಸೇತುವೆ ಕಾಮಗಾರಿಗೆ ಉಪನಗರ ಠಾಣೆ ಕಟ್ಟಡ ಭಾಗಶಃ ತೆರವಾಗಲಿದೆ. ಸ್ವಾದೀನ ಪ್ರಕ್ರಿಯೆಯಲ್ಲಿ ಜಾಗ ಮತ್ತು ಕಟ್ಟಡಕ್ಕೆ ₹5.32 ಕೋಟಿ ಪರಿಹಾರ ಅಂದಾಜಿಸಲಾಗಿದೆ. ಅದು ಸಿಕ್ಕ ತಕ್ಷಣ ಠಾಣೆ ಕಚೇರಿ ಸ್ಥಳಾಂತರಿಸುತ್ತೇವೆ.