<p><strong>ಹುಬ್ಬಳ್ಳಿ:</strong> ಸಮಗ್ರ ಕೃಷಿ ಹಾಗೂ ಕೃಷಿ ಉಪ ಕಸುಬುಗಳಿಂದ ಅಣ್ಣಿಗೇರಿ ತಾಲ್ಲೂಕಿನ ಭದ್ರಾಪುರ ಗ್ರಾಮದ ಯುವ ರೈತ ಉಮೇಶ ಗುಡ್ಡದ ಅವರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಅವರು ಬಿ.ಎ, ಬಿಪಿ.ಎಡ್ ಪದವೀಧರರು.</p><p>ಒಟ್ಟು 30 ಎಕರೆ ಜಮೀನಿದೆ. 20 ಎಕರೆಯಲ್ಲಿ ಹತ್ತಿ, ತಲಾ 2 ಎಕರೆಯಲ್ಲಿ ಹೆಸರು, ಶೇಂಗಾ ಮತ್ತು ಶ್ರೀಗಂಧ ಮರಗಳನ್ನು ಬೆಳೆದಿದ್ದಾರೆ. 3 ಎಕರೆಯಲ್ಲಿ ಕೆಂಪು ಮೆಣಸಿನಕಾಯಿ ಬೆಳೆಸಿದ್ದಾರೆ. ಇದು ಅಲ್ಲದೇ 52 ತೆಂಗು, 10 ಸೀತಾಫಲ, 10 ಪಪ್ಪಾಯ, 10–15 ಕರಿಬೇವು, ಚಿಕ್ಕು, ಸೇಬು, ನೆಲ್ಲಿ, ಪೇರಲ ಗಿಡಗಳನ್ನು ಬೆಳೆಸಿದ್ದಾರೆ.</p>.<p><strong>ಆಡು ಸಾಕಾಣಿಕೆ:</strong> ಏಳು ವರ್ಷಗಳ ಹಿಂದೆ ಕೊಪ್ಪಳ ಜಿಲ್ಲೆಯ ಕುಂಕುಮಪಾಳ್ಯದಲ್ಲಿ ₹35 ಸಾವಿರಕ್ಕೆ ಈಯಲು ಬಂದ 5 ಆಡುಗಳನ್ನು (ಮೇಕೆ) ಖರೀದಿಸಿ, ಸಾಕಾಣಿಕೆ ಆರಂಭಿಸಿದರು. ಅದಕ್ಕೆ ₹20 ಲಕ್ಷ ವೆಚ್ಚದಲ್ಲಿ 100 ಅಡಿ ಉದ್ದದ, 400 ಅಡಿ ಅಗಲದ ಹೈಟೆಕ್ ಶೆಡ್ ನಿರ್ಮಿಸಿಕೊಂಡರು. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ 20X20 ಅಳತೆಯ ಶೆಡ್ಗೆ ₹68 ಸಾವಿರ ನೆರವನ್ನೂ ಪಡೆದರು. </p>.<p>ಉಮೇಶ ಅವರ ಬಳಿ ಜಮುನಾಪುರಿ, ಶಿರೋಹಿ, ಸೊಜತ್ ತಳಿಯ ಗಂಡು ಮೇಕೆಗಳಿವೆ. 150 ಆಡುಗಳಿವೆ. 4 ತಿಂಗಳ ಮರಿಗೆ ₹8 ಸಾವಿರದಿಂದ ₹10 ಸಾವಿರ, 1 ವರ್ಷ ಪ್ರಾಯದ ಆಡಿಗೆ ₹15 ಸಾವಿರದಿಂದ ₹18 ಸಾವಿರ ವರೆಗೆ ದರ ಸಿಗುತ್ತದೆ. ಹಲವರು ತೋಟಕ್ಕೆ ಬಂದು ಖರೀದಿಸುತ್ತಾರೆ.</p>.<p><strong>ಆಡಿನ ಗೊಬ್ಬರಕ್ಕೆ ಬೇಡಿಕೆ</strong>: ‘ತಿಂಗಳಿಗೆ 4 ಟ್ರ್ಯಾಕ್ಟರ್ನಷ್ಟು ಆಡಿನ ಗೊಬ್ಬರ ಉತ್ಪಾದನೆ ಆಗುತ್ತದೆ. ಅಡಿಕೆ ಬೆಳೆಗಾರರಿಂದ ಹೆಚ್ಚಿನ ಬೇಡಿಕೆ ಇದ್ದು, ಒಂದು ಟ್ರ್ಯಾಕ್ಟರ್ಗೆ ₹7 ಸಾವಿರದಂತೆ ಮಾರುತ್ತೇವೆ. ಆಡು ಸಾಕಣೆಯಿಂದ ವರ್ಷಕ್ಕೆ ₹ 5 ಲಕ್ಷ ಆದಾಯ ಪಡೆಯುತ್ತಿದ್ದೇವೆ’ ಎಂದು ಉಮೇಶ ಗುಡ್ಡದ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p><strong>ಕೋಳಿ ಸಾಕಾಣಿಕೆ:</strong> ‘50–100 ಜವಾರಿ ಕೋಳಿಗಳಿಂದ ತಿಂಗಳಿಗೆ 30 ಮೊಟ್ಟೆಗಳು ಸಿಗುತ್ತವೆ. ₹15ಕ್ಕೆ ಒಂದರಂತೆ ಮೊಟ್ಟೆ, ಅಂದಾಜು ₹1,000– 1,200ಕ್ಕೆ ಒಂದರಂತೆ ಕೋಳಿಗಳನ್ನು ಮಾರುತ್ತೇವೆ’ ಎಂದರು.</p>.<p>ಕೂರಿಗೆ, ಟ್ರ್ಯಾಕ್ಟರ್ ಸೇರಿ ಕೃಷಿ ಚಟುವಟಿಕೆಗಳಿಗೆ ಪೂರಕವಾದ ಯಂತ್ರೋಪಕರಣ ಹೊಂದಿದ್ದಾರೆ. 70X100X7 ಅಳತೆಯ ಕೃಷಿ ಹೊಂಡವನ್ನೂ ನಿರ್ಮಿಸಿಕೊಂಡಿದ್ದಾರೆ.</p>.<div><blockquote>ವ್ಯವಹಾರ ಕ್ಷೇತ್ರದಲ್ಲಿ ನಿರೀಕ್ಷಿತ ಪ್ರಗತಿ ಸಾಧ್ಯವಾಗಲಿಲ್ಲ. ಕೃಷಿ ಕ್ಷೇತ್ರವು ದುಡಿಮೆ ಜೊತೆಗೆ ಹತ್ತಾರು ಜನರಿಗೆ ನನ್ನ ಪ್ರಗತಿ ಪರಿಚಯಿಸಿದೆ</blockquote><span class="attribution">ಉಮೇಶ ಗುಡ್ಡದ ಯುವ ರೈತ ಭದ್ರಾಪುರ ಅಣ್ಣಿಗೇರಿ</span></div>. <p><strong>ತರಬೇತಿ ಪ್ರಶಸ್ತಿ</strong></p><p> ರೈತ ಉಮೇಶ ಗುಡ್ಡದ ಅವರು ಕೃಷಿ ಕಾರ್ಯಾಗಾರಗಳಲ್ಲಿ ಉಪನ್ಯಾಸ ನೀಡುತ್ತಾರೆ. ಸಂಪನ್ಮೂಲ ವ್ಯಕ್ತಿಯಾಗಿ ಹೊಸ ಮಾದರಿ ತಂತ್ರಜ್ಞಾನಗಳ ಬಗ್ಗೆ ವಿವರಿಸುತ್ತಾರೆ. ಅವರು ಕೃಷಿ ಇಲಾಖೆಯ ‘ಉದಯೋನ್ಮುಖ ಕೃಷಿಕ’ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ:</strong> ಸಮಗ್ರ ಕೃಷಿ ಹಾಗೂ ಕೃಷಿ ಉಪ ಕಸುಬುಗಳಿಂದ ಅಣ್ಣಿಗೇರಿ ತಾಲ್ಲೂಕಿನ ಭದ್ರಾಪುರ ಗ್ರಾಮದ ಯುವ ರೈತ ಉಮೇಶ ಗುಡ್ಡದ ಅವರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಅವರು ಬಿ.ಎ, ಬಿಪಿ.ಎಡ್ ಪದವೀಧರರು.</p><p>ಒಟ್ಟು 30 ಎಕರೆ ಜಮೀನಿದೆ. 20 ಎಕರೆಯಲ್ಲಿ ಹತ್ತಿ, ತಲಾ 2 ಎಕರೆಯಲ್ಲಿ ಹೆಸರು, ಶೇಂಗಾ ಮತ್ತು ಶ್ರೀಗಂಧ ಮರಗಳನ್ನು ಬೆಳೆದಿದ್ದಾರೆ. 3 ಎಕರೆಯಲ್ಲಿ ಕೆಂಪು ಮೆಣಸಿನಕಾಯಿ ಬೆಳೆಸಿದ್ದಾರೆ. ಇದು ಅಲ್ಲದೇ 52 ತೆಂಗು, 10 ಸೀತಾಫಲ, 10 ಪಪ್ಪಾಯ, 10–15 ಕರಿಬೇವು, ಚಿಕ್ಕು, ಸೇಬು, ನೆಲ್ಲಿ, ಪೇರಲ ಗಿಡಗಳನ್ನು ಬೆಳೆಸಿದ್ದಾರೆ.</p>.<p><strong>ಆಡು ಸಾಕಾಣಿಕೆ:</strong> ಏಳು ವರ್ಷಗಳ ಹಿಂದೆ ಕೊಪ್ಪಳ ಜಿಲ್ಲೆಯ ಕುಂಕುಮಪಾಳ್ಯದಲ್ಲಿ ₹35 ಸಾವಿರಕ್ಕೆ ಈಯಲು ಬಂದ 5 ಆಡುಗಳನ್ನು (ಮೇಕೆ) ಖರೀದಿಸಿ, ಸಾಕಾಣಿಕೆ ಆರಂಭಿಸಿದರು. ಅದಕ್ಕೆ ₹20 ಲಕ್ಷ ವೆಚ್ಚದಲ್ಲಿ 100 ಅಡಿ ಉದ್ದದ, 400 ಅಡಿ ಅಗಲದ ಹೈಟೆಕ್ ಶೆಡ್ ನಿರ್ಮಿಸಿಕೊಂಡರು. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ 20X20 ಅಳತೆಯ ಶೆಡ್ಗೆ ₹68 ಸಾವಿರ ನೆರವನ್ನೂ ಪಡೆದರು. </p>.<p>ಉಮೇಶ ಅವರ ಬಳಿ ಜಮುನಾಪುರಿ, ಶಿರೋಹಿ, ಸೊಜತ್ ತಳಿಯ ಗಂಡು ಮೇಕೆಗಳಿವೆ. 150 ಆಡುಗಳಿವೆ. 4 ತಿಂಗಳ ಮರಿಗೆ ₹8 ಸಾವಿರದಿಂದ ₹10 ಸಾವಿರ, 1 ವರ್ಷ ಪ್ರಾಯದ ಆಡಿಗೆ ₹15 ಸಾವಿರದಿಂದ ₹18 ಸಾವಿರ ವರೆಗೆ ದರ ಸಿಗುತ್ತದೆ. ಹಲವರು ತೋಟಕ್ಕೆ ಬಂದು ಖರೀದಿಸುತ್ತಾರೆ.</p>.<p><strong>ಆಡಿನ ಗೊಬ್ಬರಕ್ಕೆ ಬೇಡಿಕೆ</strong>: ‘ತಿಂಗಳಿಗೆ 4 ಟ್ರ್ಯಾಕ್ಟರ್ನಷ್ಟು ಆಡಿನ ಗೊಬ್ಬರ ಉತ್ಪಾದನೆ ಆಗುತ್ತದೆ. ಅಡಿಕೆ ಬೆಳೆಗಾರರಿಂದ ಹೆಚ್ಚಿನ ಬೇಡಿಕೆ ಇದ್ದು, ಒಂದು ಟ್ರ್ಯಾಕ್ಟರ್ಗೆ ₹7 ಸಾವಿರದಂತೆ ಮಾರುತ್ತೇವೆ. ಆಡು ಸಾಕಣೆಯಿಂದ ವರ್ಷಕ್ಕೆ ₹ 5 ಲಕ್ಷ ಆದಾಯ ಪಡೆಯುತ್ತಿದ್ದೇವೆ’ ಎಂದು ಉಮೇಶ ಗುಡ್ಡದ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p><strong>ಕೋಳಿ ಸಾಕಾಣಿಕೆ:</strong> ‘50–100 ಜವಾರಿ ಕೋಳಿಗಳಿಂದ ತಿಂಗಳಿಗೆ 30 ಮೊಟ್ಟೆಗಳು ಸಿಗುತ್ತವೆ. ₹15ಕ್ಕೆ ಒಂದರಂತೆ ಮೊಟ್ಟೆ, ಅಂದಾಜು ₹1,000– 1,200ಕ್ಕೆ ಒಂದರಂತೆ ಕೋಳಿಗಳನ್ನು ಮಾರುತ್ತೇವೆ’ ಎಂದರು.</p>.<p>ಕೂರಿಗೆ, ಟ್ರ್ಯಾಕ್ಟರ್ ಸೇರಿ ಕೃಷಿ ಚಟುವಟಿಕೆಗಳಿಗೆ ಪೂರಕವಾದ ಯಂತ್ರೋಪಕರಣ ಹೊಂದಿದ್ದಾರೆ. 70X100X7 ಅಳತೆಯ ಕೃಷಿ ಹೊಂಡವನ್ನೂ ನಿರ್ಮಿಸಿಕೊಂಡಿದ್ದಾರೆ.</p>.<div><blockquote>ವ್ಯವಹಾರ ಕ್ಷೇತ್ರದಲ್ಲಿ ನಿರೀಕ್ಷಿತ ಪ್ರಗತಿ ಸಾಧ್ಯವಾಗಲಿಲ್ಲ. ಕೃಷಿ ಕ್ಷೇತ್ರವು ದುಡಿಮೆ ಜೊತೆಗೆ ಹತ್ತಾರು ಜನರಿಗೆ ನನ್ನ ಪ್ರಗತಿ ಪರಿಚಯಿಸಿದೆ</blockquote><span class="attribution">ಉಮೇಶ ಗುಡ್ಡದ ಯುವ ರೈತ ಭದ್ರಾಪುರ ಅಣ್ಣಿಗೇರಿ</span></div>. <p><strong>ತರಬೇತಿ ಪ್ರಶಸ್ತಿ</strong></p><p> ರೈತ ಉಮೇಶ ಗುಡ್ಡದ ಅವರು ಕೃಷಿ ಕಾರ್ಯಾಗಾರಗಳಲ್ಲಿ ಉಪನ್ಯಾಸ ನೀಡುತ್ತಾರೆ. ಸಂಪನ್ಮೂಲ ವ್ಯಕ್ತಿಯಾಗಿ ಹೊಸ ಮಾದರಿ ತಂತ್ರಜ್ಞಾನಗಳ ಬಗ್ಗೆ ವಿವರಿಸುತ್ತಾರೆ. ಅವರು ಕೃಷಿ ಇಲಾಖೆಯ ‘ಉದಯೋನ್ಮುಖ ಕೃಷಿಕ’ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>