<p><strong>ಹುಬ್ಬಳ್ಳಿ:</strong> ನಗರದ ವಿವಿಧೆಡೆ ಭಗವಾನ್ ಮಹಾವೀರ ಜಯಂತಿಯನ್ನು ಗುರುವಾರ ಸಂಭ್ರಮದಿಂದ ಆಚರಿಸಲಾಯಿತು. ಬಸದಿಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆ, ಆರಾಧನೆ ಜರುಗಿತು.</p>.<p>ತಾಲ್ಲೂಕು ಆಡಳಿತ: ಇಲ್ಲಿನ ತಾಲ್ಲೂಕು ಆಡಳಿತಸೌಧದ ತಹಶೀಲ್ದಾರ್ ಕಾರ್ಯಾಲಯದ ಸಭಾಂಗಣದಲ್ಲಿ ಮಹಾವೀರ ಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ, ಪೂಜೆ ಸಲ್ಲಿಸಲಾಯಿತು.</p>.<p>ಕಂದಾಯ ಇಲಾಖೆ ಆಯುಕ್ತ ಪಿ. ಸುನೀಲಕುಮಾರ, ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಹುಬ್ಬಳ್ಳಿ ಶಹರ ತಹಶೀಲ್ದಾರ್ ಕಲಗೌಡ ಪಾಟೀಲ, ಸಮಾಜದ ಮುಖಂಡರಾದ ರಾಜೇಂದ್ರ ಬೆಳಗಿ, ವಿಮಲ್ ತಾಳಿಕೋಟಿ ಹಾಜರಿದ್ದರು.</p>.<p>ಛೇಡಾ ಐ.ಟಿ.ಐ. ಕಾಲೇಜು: ಇಲ್ಲಿನ ರಾಜನಗರದ ಶ್ರೀ ಮಹಾವೀರ ಶಿಕ್ಷಣ ಸಂಸ್ಥೆಯ ಶಾ ಡಿ.ಜೆ. ಛೇಡಾ ಐ.ಟಿ.ಐ ಕಾಲೇಜಿನಲ್ಲಿ ನಡೆದ ಜಯಂತಿ ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಆರ್.ಬಿ. ಸಾಬಣ್ಣವರ ಅವರು, ಮಹಾವೀರ ಸಾರಿದ ಸತ್ಯ, ಅಹಿಂಸೆ ಮತ್ತು ತ್ಯಾಗದ ಮಹತ್ವ ತಿಳಿಸಿದರು. ಪ್ರತಿಯೊಬ್ಬರೂ ಈ ತತ್ವ ಅಳವಡಿಸಿಕೊಳ್ಳಲು ಸಲಹೆ ನೀಡಿದರು.</p>.<p>ವಿಜಯಲಕ್ಷ್ಮಿ ಜೆ.ಎಂ., ಆರ್.ಎನ್. ಕೋಟಿ, ವಿ.ವಿ. ಮೇಲ್ಮುರಿ, ಆರ್.ಎನ್. ಅಪ್ಪಣ್ಣವರ, ಜಿ.ಎಂ. ಬಡಿಗೇರ, ಎಸ್.ಜೆ. ಹಿರೇಮಠ, ಜಾಕೋಬ್ ಡೋಕ್ಕಾ, ಸಿ.ಎಸ್. ಜೈನರ್, ವಿ.ಡಿ. ಧರಣೆಪ್ಪನವರ, ಎಸ್.ಆರ್. ನೀರಾವರಿ, ಎ.ಎಸ್. ನಾವಳ್ಳಿ, ತಿಪ್ಪಣ್ಣ ನರಗುಂದ ಇದ್ದರು.</p>.<p>ಮೆರವಣಿಗೆ: ದಿಗಂಬರ ಜೈನ ಸಮಾಜದಿಂದ ಹಳೇಹುಬ್ಬಳ್ಳಿಯ ಅನಂತನಾಥ ಬಸದಿಯಲ್ಲಿ ಧರ್ಮಧ್ವಜಾರೋಹಣ, ಜಿನಬಿಂಬ ಹಾಗೂ ಮಹಾವೀರ ಚಿತ್ರ ಸಹಿತ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. </p>.<p>ಏಪ್ರಿಲ್ 6ರಿಂದ ಆರಂಭಗೊಂಡಿದ್ದ ಜನ್ಮಕಲ್ಯಾಣಕ ಮಹೋತ್ಸವದಲ್ಲಿ ಆರೋಗ್ಯ ತಪಾಸಣೆ, ಜೈನ ಧ್ವಜ ಮೆರವಣಿಗೆ, ಸಾಮೂಹಿಕ ವಿಶ್ವಶಾಂತಿ ಪ್ರಾರ್ಥನೆ, ಧರ್ಮ ಸಭೆ ಆಯೋಜಿಸಲಾಗಿತ್ತು. </p>.<h2> ‘ಅಹಿಂಸೆ ತತ್ವ ಬೋಧಿಸಿದ ತೀರ್ಥಂಕರ’</h2>.<p> ಹುಬ್ಬಳ್ಳಿಯ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಭಗವಾನ್ ಮಹಾವೀರ ಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ನವೀನಕುಮಾರ ತಿಪ್ಪಾ ‘ಜೈನ ಧರ್ಮದ 24ನೇ ತೀರ್ಥಂಕರ ಭಗವಾನ್ ಮಹಾವೀರ ಅಹಿಂಸೆ ತತ್ವ ಬೋಧಿಸಿದರು. </p><p>ಸಮಾಜದಲ್ಲಿ ಸಮಾನತೆ ಸಂದೇಶ ಸಾರಿದರು’ ಎಂದರು. ವಿರೂಪಾಕ್ಷ ಕಟ್ಟಿಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯಸ್ಥರಾದ ಪಿ.ವೈ. ನಾಯಕ ಪ್ರಸನ್ನಕುಮಾರ ಬಾಳಾನಾಯಕ್ ಎಂ.ಬಿ. ಕಪಲಿ ಸಿಬ್ಬಂದಿ ವಿ.ಎಫ್. ಬಿಜಾಪೂರ ಗಿಣಿಮಾವು ವರ್ಷಾ ಜಾಧವ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ:</strong> ನಗರದ ವಿವಿಧೆಡೆ ಭಗವಾನ್ ಮಹಾವೀರ ಜಯಂತಿಯನ್ನು ಗುರುವಾರ ಸಂಭ್ರಮದಿಂದ ಆಚರಿಸಲಾಯಿತು. ಬಸದಿಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆ, ಆರಾಧನೆ ಜರುಗಿತು.</p>.<p>ತಾಲ್ಲೂಕು ಆಡಳಿತ: ಇಲ್ಲಿನ ತಾಲ್ಲೂಕು ಆಡಳಿತಸೌಧದ ತಹಶೀಲ್ದಾರ್ ಕಾರ್ಯಾಲಯದ ಸಭಾಂಗಣದಲ್ಲಿ ಮಹಾವೀರ ಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ, ಪೂಜೆ ಸಲ್ಲಿಸಲಾಯಿತು.</p>.<p>ಕಂದಾಯ ಇಲಾಖೆ ಆಯುಕ್ತ ಪಿ. ಸುನೀಲಕುಮಾರ, ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಹುಬ್ಬಳ್ಳಿ ಶಹರ ತಹಶೀಲ್ದಾರ್ ಕಲಗೌಡ ಪಾಟೀಲ, ಸಮಾಜದ ಮುಖಂಡರಾದ ರಾಜೇಂದ್ರ ಬೆಳಗಿ, ವಿಮಲ್ ತಾಳಿಕೋಟಿ ಹಾಜರಿದ್ದರು.</p>.<p>ಛೇಡಾ ಐ.ಟಿ.ಐ. ಕಾಲೇಜು: ಇಲ್ಲಿನ ರಾಜನಗರದ ಶ್ರೀ ಮಹಾವೀರ ಶಿಕ್ಷಣ ಸಂಸ್ಥೆಯ ಶಾ ಡಿ.ಜೆ. ಛೇಡಾ ಐ.ಟಿ.ಐ ಕಾಲೇಜಿನಲ್ಲಿ ನಡೆದ ಜಯಂತಿ ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಆರ್.ಬಿ. ಸಾಬಣ್ಣವರ ಅವರು, ಮಹಾವೀರ ಸಾರಿದ ಸತ್ಯ, ಅಹಿಂಸೆ ಮತ್ತು ತ್ಯಾಗದ ಮಹತ್ವ ತಿಳಿಸಿದರು. ಪ್ರತಿಯೊಬ್ಬರೂ ಈ ತತ್ವ ಅಳವಡಿಸಿಕೊಳ್ಳಲು ಸಲಹೆ ನೀಡಿದರು.</p>.<p>ವಿಜಯಲಕ್ಷ್ಮಿ ಜೆ.ಎಂ., ಆರ್.ಎನ್. ಕೋಟಿ, ವಿ.ವಿ. ಮೇಲ್ಮುರಿ, ಆರ್.ಎನ್. ಅಪ್ಪಣ್ಣವರ, ಜಿ.ಎಂ. ಬಡಿಗೇರ, ಎಸ್.ಜೆ. ಹಿರೇಮಠ, ಜಾಕೋಬ್ ಡೋಕ್ಕಾ, ಸಿ.ಎಸ್. ಜೈನರ್, ವಿ.ಡಿ. ಧರಣೆಪ್ಪನವರ, ಎಸ್.ಆರ್. ನೀರಾವರಿ, ಎ.ಎಸ್. ನಾವಳ್ಳಿ, ತಿಪ್ಪಣ್ಣ ನರಗುಂದ ಇದ್ದರು.</p>.<p>ಮೆರವಣಿಗೆ: ದಿಗಂಬರ ಜೈನ ಸಮಾಜದಿಂದ ಹಳೇಹುಬ್ಬಳ್ಳಿಯ ಅನಂತನಾಥ ಬಸದಿಯಲ್ಲಿ ಧರ್ಮಧ್ವಜಾರೋಹಣ, ಜಿನಬಿಂಬ ಹಾಗೂ ಮಹಾವೀರ ಚಿತ್ರ ಸಹಿತ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. </p>.<p>ಏಪ್ರಿಲ್ 6ರಿಂದ ಆರಂಭಗೊಂಡಿದ್ದ ಜನ್ಮಕಲ್ಯಾಣಕ ಮಹೋತ್ಸವದಲ್ಲಿ ಆರೋಗ್ಯ ತಪಾಸಣೆ, ಜೈನ ಧ್ವಜ ಮೆರವಣಿಗೆ, ಸಾಮೂಹಿಕ ವಿಶ್ವಶಾಂತಿ ಪ್ರಾರ್ಥನೆ, ಧರ್ಮ ಸಭೆ ಆಯೋಜಿಸಲಾಗಿತ್ತು. </p>.<h2> ‘ಅಹಿಂಸೆ ತತ್ವ ಬೋಧಿಸಿದ ತೀರ್ಥಂಕರ’</h2>.<p> ಹುಬ್ಬಳ್ಳಿಯ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಭಗವಾನ್ ಮಹಾವೀರ ಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ನವೀನಕುಮಾರ ತಿಪ್ಪಾ ‘ಜೈನ ಧರ್ಮದ 24ನೇ ತೀರ್ಥಂಕರ ಭಗವಾನ್ ಮಹಾವೀರ ಅಹಿಂಸೆ ತತ್ವ ಬೋಧಿಸಿದರು. </p><p>ಸಮಾಜದಲ್ಲಿ ಸಮಾನತೆ ಸಂದೇಶ ಸಾರಿದರು’ ಎಂದರು. ವಿರೂಪಾಕ್ಷ ಕಟ್ಟಿಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯಸ್ಥರಾದ ಪಿ.ವೈ. ನಾಯಕ ಪ್ರಸನ್ನಕುಮಾರ ಬಾಳಾನಾಯಕ್ ಎಂ.ಬಿ. ಕಪಲಿ ಸಿಬ್ಬಂದಿ ವಿ.ಎಫ್. ಬಿಜಾಪೂರ ಗಿಣಿಮಾವು ವರ್ಷಾ ಜಾಧವ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>