<p><strong>ಹುಬ್ಬಳ್ಳಿ</strong>: ‘ಮೂರುಸಾವಿರ ಮಠದ ಗೌರವ ಕಾಪಾಡಿದ್ದೇನೆ.ಸಮಾಜಕ್ಕೆ ವಂಚನೆ ಮಾಡಿಲ್ಲ. ಆದರೂ, ಮಠ ಹಾಗೂ ನನ್ನ ಬಗೆಗೆ ಇಲ್ಲ–ಸಲ್ಲದ ಅಪಪ್ರಚಾರ ಮಾಡುತ್ತಾರೆ. ಇದರಿಂದ ಮನಸ್ಸಿಗೆ ನೋವಾಗಿದೆ’ ಎಂದು ಮೂರುಸಾವಿರ ಮಠದ ಪೀಠಾಧಿಪತಿ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಭಾವುಕರಾಗಿ ಹೇಳಿದರು.</p>.<p>ಇಲ್ಲಿ ಗುರುವಾರ ನಡೆದ ಕೆಎಲ್ಇ ಸಂಸ್ಥೆಯ ಜಗದ್ಗುರು ಗಂಗಾಧರ ಸ್ವಾಮೀಜಿ ಮೂರುಸಾವಿರ ಮಠ ಮಹಾವಿದ್ಯಾಲಯ ಮತ್ತು ಕೆಎಲ್ಇ ಆಸ್ಪತ್ರೆಯ ಶಂಕುಸ್ಥಾಪನೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.</p>.<p>‘ಕೆಲವರು ಆಸ್ತಿ ಮಾರಾಟ ಮಾಡಿದ್ದೇವೆ ಎಂದು ಆರೋಪ ಮಾಡುತ್ತಿದ್ದಾರೆ. ಎಲ್ಲಿ ಮಾರಾಟ ಮಾಡಿದ್ದೇವೆ? ಮಠಕ್ಕೆ ಸಮಸ್ಯೆ ಎದುರಾದಾಗ ಭಕ್ತರು ಮಠದ ಪರವಾಗಿ ನಿಲ್ಲುತ್ತಿಲ್ಲ’ ಎಂದು ಭಕ್ತರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.</p>.<p>‘ಮಠಕ್ಕಾಗಿ ಸಮಾಜದಿಂದ ಪಡೆಯುವ, ಸಮಾಜದ ಒಳ್ಳೆಯದಕ್ಕಾಗಿ ಮಠದ ಆಸ್ತಿ ನೀಡುವ ಹಕ್ಕು ಮಠಾಧೀಶರಿಗಿದೆ. ಸತ್ಯ, ಪ್ರಾಮಾಣಿಕತೆಯಿಂದ ನಡೆದಿದ್ದೇವೆ. ಮಠಕ್ಕೆ ಅನ್ಯಾಯ ಮಾಡಿಲ್ಲ. ನ್ಯಾಯ ಒದಗಿಸಿದ್ದೇವೆ’ ಎಂದರು.</p>.<p>‘ಸಮಾಜದ ಒಳ್ಳೆಯದಕ್ಕಾಗಿ ಕೆಎಲ್ ಇ ಸಂಸ್ಥೆಗೆ ಭೂಮಿ ನೀಡಿದ್ದೇವೆ. ಯಾವುದೇ ವ್ಯಕ್ತಿಗಲ್ಲ. ಗುರುಗಳಾದ ಗಂಗಾಧರ ಸ್ವಾಮೀಜಿ ಭೂಮಿ ನೀಡಿದ್ದಾರೆ. ಶಿಷ್ಯರಾಗಿ ಅವರ ಸಂಕಲ್ಪ ಈಡೇರಿಸಿದ್ದೇವೆ. ಬೇರೆ ಯಾವ ಮಠವೂ ಜಾಗ ನೀಡಿಲ್ಲವೇ’ ಎಂದು ಪ್ರಶ್ನಿಸಿದರು.</p>.<p><strong>ಭೂ ಪರಿವರ್ತನೆಗೆ ಆರು ವರ್ಷ</strong><br /><strong>ಹುಬ್ಬಳ್ಳಿ:</strong> ಕಾಲೇಜು ನಿರ್ಮಾಣಕ್ಕಾಗಿ ಭೂ ಪರಿವರ್ತನೆ ಮಾಡಿಸಿಕೊಳ್ಳಲು ಏಳೆಂಟು ವರ್ಷ ಹಿಡಿದಿದೆ. ಕೆಎಲ್ಇ ಅಂತಹ ದೊಡ್ಡ ಸಂಸ್ಥೆಗೆ ಹೀಗಾದರೆ, ಜನ ಸಾಮಾನ್ಯರ ಸ್ಥಿತಿ ಹೇಗಿರಬೇಡ? ಅಧಿಕಾರಿಗಳು ಸದಾ ಅಡ್ಡಗಾಲು ಹಾಕುತ್ತಿರುತ್ತಾರೆ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.</p>.<p>ಸಚಿವರು, ಜನಪ್ರತಿನಿಧಿಗಳು ಹೇಳಿದ ಮೇಲೂ ಇಷ್ಟು ವರ್ಷ ಹಿಡಿದಿದೆ. ಅಭಿವೃದ್ಧಿ ಕಾರ್ಯಗಳಿಗೆ ಅಧಿಕಾರಿಗಳು, ಸರ್ಕಾರ ತ್ವರಿತವಾಗಿ ಸ್ಪಂದಿಸಬೇಕು ಎಂದರು.</p>.<p>ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ಕಾಲೇಜು ಕಟ್ಟಡ ನಿರ್ಮಾಣ ಆರಂಭಿಸಲು ಎಂಟು ವರ್ಷ ಅಲೆದಾಡಬೇಕಾಯಿತು. ಸರ್ಕಾರ ಯಾವ ಪಕ್ಷದ್ದೆಂದು ಟೀಕಿಸುವುದಿಲ್ಲ. ಸರ್ಕಾರಿ ವ್ಯವಸ್ಥೆ ಹೇಗಿದೆ ಎಂಬುದಕ್ಕೆ ಇದು ಉದಾಹರಣೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ</strong>: ‘ಮೂರುಸಾವಿರ ಮಠದ ಗೌರವ ಕಾಪಾಡಿದ್ದೇನೆ.ಸಮಾಜಕ್ಕೆ ವಂಚನೆ ಮಾಡಿಲ್ಲ. ಆದರೂ, ಮಠ ಹಾಗೂ ನನ್ನ ಬಗೆಗೆ ಇಲ್ಲ–ಸಲ್ಲದ ಅಪಪ್ರಚಾರ ಮಾಡುತ್ತಾರೆ. ಇದರಿಂದ ಮನಸ್ಸಿಗೆ ನೋವಾಗಿದೆ’ ಎಂದು ಮೂರುಸಾವಿರ ಮಠದ ಪೀಠಾಧಿಪತಿ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಭಾವುಕರಾಗಿ ಹೇಳಿದರು.</p>.<p>ಇಲ್ಲಿ ಗುರುವಾರ ನಡೆದ ಕೆಎಲ್ಇ ಸಂಸ್ಥೆಯ ಜಗದ್ಗುರು ಗಂಗಾಧರ ಸ್ವಾಮೀಜಿ ಮೂರುಸಾವಿರ ಮಠ ಮಹಾವಿದ್ಯಾಲಯ ಮತ್ತು ಕೆಎಲ್ಇ ಆಸ್ಪತ್ರೆಯ ಶಂಕುಸ್ಥಾಪನೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.</p>.<p>‘ಕೆಲವರು ಆಸ್ತಿ ಮಾರಾಟ ಮಾಡಿದ್ದೇವೆ ಎಂದು ಆರೋಪ ಮಾಡುತ್ತಿದ್ದಾರೆ. ಎಲ್ಲಿ ಮಾರಾಟ ಮಾಡಿದ್ದೇವೆ? ಮಠಕ್ಕೆ ಸಮಸ್ಯೆ ಎದುರಾದಾಗ ಭಕ್ತರು ಮಠದ ಪರವಾಗಿ ನಿಲ್ಲುತ್ತಿಲ್ಲ’ ಎಂದು ಭಕ್ತರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.</p>.<p>‘ಮಠಕ್ಕಾಗಿ ಸಮಾಜದಿಂದ ಪಡೆಯುವ, ಸಮಾಜದ ಒಳ್ಳೆಯದಕ್ಕಾಗಿ ಮಠದ ಆಸ್ತಿ ನೀಡುವ ಹಕ್ಕು ಮಠಾಧೀಶರಿಗಿದೆ. ಸತ್ಯ, ಪ್ರಾಮಾಣಿಕತೆಯಿಂದ ನಡೆದಿದ್ದೇವೆ. ಮಠಕ್ಕೆ ಅನ್ಯಾಯ ಮಾಡಿಲ್ಲ. ನ್ಯಾಯ ಒದಗಿಸಿದ್ದೇವೆ’ ಎಂದರು.</p>.<p>‘ಸಮಾಜದ ಒಳ್ಳೆಯದಕ್ಕಾಗಿ ಕೆಎಲ್ ಇ ಸಂಸ್ಥೆಗೆ ಭೂಮಿ ನೀಡಿದ್ದೇವೆ. ಯಾವುದೇ ವ್ಯಕ್ತಿಗಲ್ಲ. ಗುರುಗಳಾದ ಗಂಗಾಧರ ಸ್ವಾಮೀಜಿ ಭೂಮಿ ನೀಡಿದ್ದಾರೆ. ಶಿಷ್ಯರಾಗಿ ಅವರ ಸಂಕಲ್ಪ ಈಡೇರಿಸಿದ್ದೇವೆ. ಬೇರೆ ಯಾವ ಮಠವೂ ಜಾಗ ನೀಡಿಲ್ಲವೇ’ ಎಂದು ಪ್ರಶ್ನಿಸಿದರು.</p>.<p><strong>ಭೂ ಪರಿವರ್ತನೆಗೆ ಆರು ವರ್ಷ</strong><br /><strong>ಹುಬ್ಬಳ್ಳಿ:</strong> ಕಾಲೇಜು ನಿರ್ಮಾಣಕ್ಕಾಗಿ ಭೂ ಪರಿವರ್ತನೆ ಮಾಡಿಸಿಕೊಳ್ಳಲು ಏಳೆಂಟು ವರ್ಷ ಹಿಡಿದಿದೆ. ಕೆಎಲ್ಇ ಅಂತಹ ದೊಡ್ಡ ಸಂಸ್ಥೆಗೆ ಹೀಗಾದರೆ, ಜನ ಸಾಮಾನ್ಯರ ಸ್ಥಿತಿ ಹೇಗಿರಬೇಡ? ಅಧಿಕಾರಿಗಳು ಸದಾ ಅಡ್ಡಗಾಲು ಹಾಕುತ್ತಿರುತ್ತಾರೆ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.</p>.<p>ಸಚಿವರು, ಜನಪ್ರತಿನಿಧಿಗಳು ಹೇಳಿದ ಮೇಲೂ ಇಷ್ಟು ವರ್ಷ ಹಿಡಿದಿದೆ. ಅಭಿವೃದ್ಧಿ ಕಾರ್ಯಗಳಿಗೆ ಅಧಿಕಾರಿಗಳು, ಸರ್ಕಾರ ತ್ವರಿತವಾಗಿ ಸ್ಪಂದಿಸಬೇಕು ಎಂದರು.</p>.<p>ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ಕಾಲೇಜು ಕಟ್ಟಡ ನಿರ್ಮಾಣ ಆರಂಭಿಸಲು ಎಂಟು ವರ್ಷ ಅಲೆದಾಡಬೇಕಾಯಿತು. ಸರ್ಕಾರ ಯಾವ ಪಕ್ಷದ್ದೆಂದು ಟೀಕಿಸುವುದಿಲ್ಲ. ಸರ್ಕಾರಿ ವ್ಯವಸ್ಥೆ ಹೇಗಿದೆ ಎಂಬುದಕ್ಕೆ ಇದು ಉದಾಹರಣೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>