<p><strong>ಹುಬ್ಬಳ್ಳಿ:</strong> ಕೊಳಚೆ ಪ್ರದೇಶಗಳಲ್ಲಿ ಭೂ ಮಾಲೀಕರು ಬಹುತೇಕ ನಿವಾಸಿಗಳಿಗೆ ಕಿರುಕುಳ ದೌರ್ಜನ್ಯ ನೀಡುತ್ತಿರುವುದರಿಂದ ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಮುಂದಿನ ದಿನಗಳಲ್ಲಿ ಹೋರಾಟ ಮಾಡುವುದು ಅನಿವಾರ್ಯ ಎಂದು ಧಾರವಾಡ ಜಿಲ್ಲೆ ಕೊಳಚೆ ಪ್ರದೇಶ ನಿವಾಸಿಗಳ ಅಸೋಸಿಯೇಶನ್ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ನಿರ್ಣಯಿಸಲಾಯಿತು.</p>.<p>ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಮೀದಸಾಬ ಕೊಪ್ಪದ, ‘ ಸರ್ಕಾರದ ಗಮನ ಸೆಳೆದು ಕೊಳಚೆ ಪ್ರದೇಶಗಳಲ್ಲಿ ವಾಸಿಸುವ ಬಡವರ, ಅಲ್ಪಸಂಖ್ಯಾತ, ಹಿಂದುಳಿದ ವರ್ಗದ, ಜನರಿಗೆ ನ್ಯಾಯ ದೊರಕಿಸಿ ಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ’ ಎಂದರು.</p>.<p>ಪ್ರಧಾನ ಕಾರ್ಯದರ್ಶಿ ನವೀನಕುಮಾರ ಮಾತನಾಡಿ, ‘ಕೊಳಚೆ ಪ್ರದೇಶದಲ್ಲಿ ಭೂಮಾಲೀಕರು ಅನ್ಯಾಯ ಮಾಡುತ್ತಾ ಬಂದಿದ್ದಾರೆ. ಅದನ್ನು ಸಹಿಸುವುದಿಲ್ಲ. ಈ ಅನ್ಯಾಯದ ವಿರುದ್ಧ ಹೋರಾಡಲು ಸನ್ನದ್ಧರಾಗಿರಬೇಕು’ ಎಂದರು.</p>.<p>ಕೆಲ ಅಧಿಕಾರಿಗಳು ಭೂಮಾಲೀಕರ ಜೊತೆಗೂಡಿ, ದೌರ್ಜನ್ಯ ಎಸಗಲು ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆರೋಪಿಸಿದರು.</p>.<p>ಈ ಸಂದರ್ಭದಲ್ಲಿ ಅಸೋಸಿಯೇಶನ್ ಉಪಾಧ್ಯಕ್ಷ ಅಲ್ಲಾಭಕ್ಷ ಕಿಲ್ಲೆದಾರ, ಅಲ್ಲಾಭಕ್ಷ ಜಕಾತಿ, ಜಾನ ಪವಾರ್, ಜಾಂಗಿರಸಾಬ ಯರಗಟ್ಟಿ, ಗುಲ್ಮಹಮ್ಮದ ಕಿಲ್ಲೆದಾರ, ಇಮಾಮಹುಸೇನ ಧಾರವಾಡ, ಹಾಗೂ ಅಸೋಸಿಯೇಶನ್ ಮುಖಂಡರು ಬಾರಾಕೋಟ್ರಿ ಪ್ರದೇಶದ ನಿವಾಸಿಗಳು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ:</strong> ಕೊಳಚೆ ಪ್ರದೇಶಗಳಲ್ಲಿ ಭೂ ಮಾಲೀಕರು ಬಹುತೇಕ ನಿವಾಸಿಗಳಿಗೆ ಕಿರುಕುಳ ದೌರ್ಜನ್ಯ ನೀಡುತ್ತಿರುವುದರಿಂದ ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಮುಂದಿನ ದಿನಗಳಲ್ಲಿ ಹೋರಾಟ ಮಾಡುವುದು ಅನಿವಾರ್ಯ ಎಂದು ಧಾರವಾಡ ಜಿಲ್ಲೆ ಕೊಳಚೆ ಪ್ರದೇಶ ನಿವಾಸಿಗಳ ಅಸೋಸಿಯೇಶನ್ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ನಿರ್ಣಯಿಸಲಾಯಿತು.</p>.<p>ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಮೀದಸಾಬ ಕೊಪ್ಪದ, ‘ ಸರ್ಕಾರದ ಗಮನ ಸೆಳೆದು ಕೊಳಚೆ ಪ್ರದೇಶಗಳಲ್ಲಿ ವಾಸಿಸುವ ಬಡವರ, ಅಲ್ಪಸಂಖ್ಯಾತ, ಹಿಂದುಳಿದ ವರ್ಗದ, ಜನರಿಗೆ ನ್ಯಾಯ ದೊರಕಿಸಿ ಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ’ ಎಂದರು.</p>.<p>ಪ್ರಧಾನ ಕಾರ್ಯದರ್ಶಿ ನವೀನಕುಮಾರ ಮಾತನಾಡಿ, ‘ಕೊಳಚೆ ಪ್ರದೇಶದಲ್ಲಿ ಭೂಮಾಲೀಕರು ಅನ್ಯಾಯ ಮಾಡುತ್ತಾ ಬಂದಿದ್ದಾರೆ. ಅದನ್ನು ಸಹಿಸುವುದಿಲ್ಲ. ಈ ಅನ್ಯಾಯದ ವಿರುದ್ಧ ಹೋರಾಡಲು ಸನ್ನದ್ಧರಾಗಿರಬೇಕು’ ಎಂದರು.</p>.<p>ಕೆಲ ಅಧಿಕಾರಿಗಳು ಭೂಮಾಲೀಕರ ಜೊತೆಗೂಡಿ, ದೌರ್ಜನ್ಯ ಎಸಗಲು ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆರೋಪಿಸಿದರು.</p>.<p>ಈ ಸಂದರ್ಭದಲ್ಲಿ ಅಸೋಸಿಯೇಶನ್ ಉಪಾಧ್ಯಕ್ಷ ಅಲ್ಲಾಭಕ್ಷ ಕಿಲ್ಲೆದಾರ, ಅಲ್ಲಾಭಕ್ಷ ಜಕಾತಿ, ಜಾನ ಪವಾರ್, ಜಾಂಗಿರಸಾಬ ಯರಗಟ್ಟಿ, ಗುಲ್ಮಹಮ್ಮದ ಕಿಲ್ಲೆದಾರ, ಇಮಾಮಹುಸೇನ ಧಾರವಾಡ, ಹಾಗೂ ಅಸೋಸಿಯೇಶನ್ ಮುಖಂಡರು ಬಾರಾಕೋಟ್ರಿ ಪ್ರದೇಶದ ನಿವಾಸಿಗಳು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>