ಪಾಲಿಕೆ ಆಯುಕ್ತರಿಗೆ ಶುಕ್ರವಾರ ಮನವಿ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಗಣೇಶಮೂರ್ತಿ ಪ್ರತಿಷ್ಠಾಪನೆ ನಮ್ಮ ಹಕ್ಕು. ಅದಕ್ಕೆ ಅಡ್ಡಿಪಡಿಸಲು ನೀವ್ಯಾರು? ಅಡ್ಡಿಪಡಿಸಿದ್ದೇ ಆದರೆ, ನಾವು ಸಹ ಅವರು ಪ್ರಾರ್ಥನೆ ಮಾಡುವಾಗ ಅಡ್ಡಿಪಡಿಸುತ್ತೇವೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಜನಪ್ರತಿನಿಧಿ ವಿರುದ್ಧ ಮತ ಚಲಾಯಿಸುವಂತೆ ಮನೆ–ಮನೆಗೆ ಗಣೇಶಮೂರ್ತಿ ಹಿಡಿದು ಅಭಿಯಾನ ನಡೆಸುತ್ತೇವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.