<p><strong>ಹುಬ್ಬಳ್ಳಿ</strong>: ‘ಮಾತೃ ಭಾಷೆ ಹೆಸರಿನಲ್ಲಿ ಪ್ರಾದೇಶಿಕ ಭಾಷೆಗಳಿಗೆ ಅನ್ಯಾಯವಾಗುತ್ತಿದೆ. ಕನ್ನಡವು ರಾಜ್ಯ ಭಾಷೆಯೇ ಹೊರತು ಮಾತೃ ಭಾಷೆ ಅಲ್ಲ’ ಎಂದು ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.</p>.<p>ಇಲ್ಲಿನ ಸವಾಯಿ ಗಂಧರ್ವ ಕಲಾ ಭವನದಲ್ಲಿ ಶನಿವಾರ ನಡೆದ ಧಾರವಾಡ ಜಿಲ್ಲಾ 15ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪದಲ್ಲಿ ಅವರು, ‘ಪ್ರಾದೇಶಿಕ ಭಾಷೆಗಳು ಕೊನೆಯುಸಿರೆಳೆಯುತ್ತಿರುವ ಸಮಯ ಇದು’ ಎಂದರು.</p>.<p>‘1–7ನೇ ತರಗತಿ ವರೆಗೆ ಪ್ರಥಮ/ದ್ವಿತೀಯ ಭಾಷೆಯಾಗಿ ಕನ್ನಡ ಕಲಿಸುವ ನೀತಿ ಸಮರ್ಪಕವಾಗಿ ಅನುಷ್ಠಾನಕ್ಕೆ ಬರಲೇ ಇಲ್ಲ. ಶಿಕ್ಷಣದ ಖಾಸಗೀಕರಣದಿಂದ ಕನ್ನಡ ಕಳೆದುಹೋಗುತ್ತಿದೆ. ಇದು ಮುಂದುವರಿದರೆ ಕನ್ನಡ ಆಡಳಿತ ಭಾಷೆಯಾಗಿರಲು ಸಾಧ್ಯವಿಲ್ಲ’ ಎಂದರು.</p>.<p class="Subhead">ಎಲ್ಲರನ್ನೂ ಒಳಗೊಳ್ಳಲಿ: ‘ಸಾಹಿತ್ಯವು ಗೆದ್ದೆತ್ತಿನ ಬಾಲ ಹಿಡಿಯಬಾರದು. ಸೋತೆತ್ತಿನ ಕೊಂಬು ಹಿಡಿದು ಮೇಲಕ್ಕೆ ಎತ್ತಬೇಕು. ಕನ್ನಡ ಸಾಹಿತ್ಯ ಪರಿಷತ್ತು ಕೂಡ ಯಾರನ್ನೂ ಹೊರಗಿಡದೆ ಎಲ್ಲರನ್ನೂ ಒಳಗೊಳ್ಳುವಂತಾಗಬೇಕು’ ಎಂದು ಆಶಿಸಿದರು.</p>.<p>ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಪಿ.ಎಲ್. ಪಾಟೀಲ, ‘ಪ್ರಾದೇಶಿಕ ಭಾಷೆಯಲ್ಲಿ ಶಿಕ್ಷಣ ಸಿಕ್ಕರೆ ಉತ್ತಮ ಆಡಳಿತ ನಿರ್ವಹಿಸಲು ಸಾಧ್ಯವಾಗುತ್ತದೆ’ ಎಂದರು.</p>.<p>‘ಕೃಷಿಯ ಎಲ್ಲ ಪಠ್ಯಗಳನ್ನು ಕನ್ನಡೀಕರಣಗೊಳಿಸುವ ಪ್ರಯತ್ನ ನಡೆಯುತ್ತಿದೆ. ಆದರೆ, ಈ ಪಠ್ಯಗಳು ದಕ್ಷಿಣ ಕರ್ನಾಟಕದ ಗ್ರಾಂಥಿಕ ಭಾಷೆಯಲ್ಲಿವೆ. ಇವುಗಳನ್ನು ಉತ್ತರ ಕರ್ನಾಟಕದ ಆಡು ಭಾಷೆಗೆ ಅಳವಡಿಸಲು ಸಾಹಿತಿಗಳು ಮುಂದಾಗಬೇಕು’ ಎಂದು ಕೋರಿದರು.</p>.<p>ಕವಯಿತ್ರಿ ಕಾವ್ಯಾ ಕಡಮೆ ಅವರ ‘ಮಾಕೋನ ಏಕಾಂತ’ ಕೃತಿಗೆ ಕಸಾಪ ಯುವ ಕತೆಗಾರ್ತಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿಯು ₹5 ಸಾವಿರ ನಗದು, ಪ್ರಶಸ್ತಿ ಪತ್ರ ಒಳಗೊಂಡಿದೆ. ಸಮ್ಮೇಳನದ ಅಧ್ಯಕ್ಷ ಧರಣೇಂದ್ರ ಕುರಕುರಿ ಅವರನ್ನು ಸನ್ಮಾನಿಸಲಾಯಿತು.</p>.<p>ಪ್ರಹ್ಲಾದ ಗೆಜ್ಜಿ, ಎಸ್.ಎಫ್. ಸಿದ್ದನಗೌಡರ, ಶಶಿಧರ ಸಾಲಿ, ಎಸ್.ಕೆ. ಆದಪ್ಪನವರ, ಗಂಗಾಧರ ದೊಡವಾಡ, ಜಯಶ್ರೀ ಜಾತಿಕರ್ತ ಇದ್ದರು.</p>.<p class="Subhead">‘ಕನ್ನಡ ಶ್ರೀಮಂತ ಭಾಷೆ’: ‘ಚಿಂತನೆ’ ಗೋಷ್ಠಿಯಲ್ಲಿ ‘ತಮಿಳು-ಕನ್ನಡ ಭಾಷಾ ಮತ್ತು ಸಾಂಸ್ಕೃತಿಕ ಬಾಂಧವ್ಯ’ ಕುರಿತು ಮಾತನಾಡಿದ ತಮಿಳುನಾಡು ಘಟಕದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಡಾ.ತಮಿಳು ಸೆಲ್ವಿ, ‘ಪಂಚದ್ರಾವಿಡ ಭಾಷೆಗಳಿಗೆ ಒಂದೇ ಮೂಲಭಾಷೆ. ತಮಿಳು–ಕನ್ನಡ ಅದರ ಎರಡು ಕವಲುಗಳು’ ಎಂದರು.</p>.<p>‘ಕನ್ನಡ ಜಾನಪದ ಮತ್ತು ಆಧುನಿಕತೆ’ ಕುರಿತು ಮಾತನಾಡಿದ ಕಸಾಪ ಹಾಸನ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಚ್.ಎಲ್.ಮಲ್ಲೇಶಗೌಡ, ‘ಶ್ರಮ ಸಂಸ್ಕೃತಿ ಕಳೆದುಕೊಂಡು ಸುಖದ ಬೆನ್ನು ಬಿದ್ದಿರುವ ಜನರ ಆಧುನಿಕ ಜೀವನವು ನಿಸ್ಸಾರ ಮತ್ತು ನಿಷ್ಕ್ರಿಯವಾಗಿದೆ’ ಎಂದರು.</p>.<p class="Subhead">ಕವಿಗೋಷ್ಠಿ: ‘ಆಯ್ಕೆ ಮಾಡುವ ವಸ್ತು, ಹೇಳುವ ಮತ್ತು ಕವಿತೆ ಕಟ್ಟುವ ಕ್ರಮ, ಸೂಕ್ತ ಶಬ್ದಗಳ ಆಯ್ಕೆ ಕವಿತೆ ರಚನೆಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ’ ಎಂದು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ಎಚ್.ಎಲ್.ಪುಷ್ಪಾ ಹೇಳಿದರು.</p>.<p>‘ಕನ್ನಡ ಅಲ್ಲದೇ ಭಾರತೀಯ ಭಾಷೆಗಳು ಮತ್ತು ಜಗತ್ತಿನ ವಿವಿಧ ದೇಶಗಳ ಉತ್ತಮ ಕವಿಗಳ ಕವಿತೆಗಳನ್ನು ಅಧ್ಯಯನ ಮಾಡಿ’ ಎಂದು ಕಿವಿಮಾತು ಹೇಳಿದರು.</p>.<p>30 ಕವಿಗಳು ಕವನ ವಾಚಿಸಿದರು.</p>.<p>**</p>.<p><strong>‘ಕೆಆರ್ಎಸ್ ಕಟ್ಟಿದ್ದು ವಿಶ್ವೇಶ್ವರಯ್ಯ ಅಲ್ಲ’</strong></p>.<p>‘ಕಾವೇರಿಯನು ಹರಿಯಲು ಬಿಟ್ಟು ವಿಶ್ವೇಶ್ವರಯ್ಯ ಶ್ರಮ ಪಡದಿದ್ದರೆ, ಕನ್ನಂಬಾಡಿಯ ಕಟ್ಟದಿದ್ದರೆ... ಎಂದು ಚಿತ್ರಗೀತೆಯಲ್ಲಿ ಇತಿಹಾಸ ತಿರುಚಲಾಗಿದೆ’ ಎಂದು ಸಾಹಿತಿ ಎಸ್.ಜಿ. ಸಿದ್ದರಾಮಯ್ಯ ಹೇಳಿದರು.</p>.<p>‘ಕನ್ನಂಬಾಡಿ ಕಟ್ಟೆ (ಕೆಆರ್ಎಸ್) ಕಟ್ಟುವ ಟಿಪ್ಪು ಸುಲ್ತಾನನ ಯೋಜನೆಯನ್ನು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಅನುಷ್ಠಾನಕ್ಕೆ ತಂದರು. ಜರ್ಮನಿಯ ಎಂಜಿನಿಯರ್ ಒಬ್ಬರು 1911ರಲ್ಲಿ ನಿರ್ಮಾಣ ಆರಂಭಿಸಿದ್ದರು. ಪ್ರವಾಹದಲ್ಲಿ ಅವರು ಕೊಚ್ಚಿಹೋಗಿ ಮೃತರಾದ ನಂತರ ಸರ್.ಎಂ. ವಿಶ್ವೇಶ್ವರಯ್ಯ ಅವರನ್ನು ಒಡೆಯರ್ ಅವರು ಈ ಕಾರ್ಯಕ್ಕೆ ಎಂಜಿನಿಯರ್ ಆಗಿ 1915ರಲ್ಲಿ ನೇಮಿಸಿದರು. ಅವರ ಕಾರ್ಯಕ್ಷಮತೆಯ ಫಲವಾಗಿ ದಿವಾನ್ ಆಗಿ ನೇಮಕಗೊಂಡರು’ ಎಂದು ಅವರು ಹೇಳಿದರು.</p>.<p>‘ನಂತರ ಒಡೆಯರ್ ಅವರು ಮೀಸಲಾತಿ ಅನುಷ್ಠಾನಕ್ಕೆ ಮುಂದಾದಾಗ ಅದನ್ನು ವಿರೋಧಿಸಿ ವಿಶ್ವೇಶ್ವರಯ್ಯನವರು ದಿವಾನ್ ಹುದ್ದೆಗೆ 1918ರಲ್ಲಿ ರಾಜೀನಾಮೆ ನೀಡಿ ಹೊರಬಂದರು. ಅಣೆಕಟ್ಟು ನಿರ್ಮಾಣ ಪೂರ್ಣಗೊಂಡಿದ್ದು 1932ರಲ್ಲಿ. ವಿಶ್ವೇಶ್ವರಯ್ಯ ಅವರು ಈ ಅಣೆಕಟ್ಟೆ ನಿರ್ಮಾಣ ಪ್ರಕ್ರಿಯೆಯ ಭಾಗವಾಗಿದ್ದು ಕೆಲವೇ ವರ್ಷಗಳು ಮಾತ್ರ’ ಎಂದು ಅವರು ಪ್ರತಿಪಾದಿಸಿದರು.</p>.<p>**</p>.<p><strong>‘ಮಹೇಶ ಜೋಶಿಗೆ ಧಿಕ್ಕಾರ’</strong></p>.<p>‘ಬೆಂಗಳೂರಿನ ಕಸಾಪ ಕೇಂದ್ರ ಕಚೇರಿ ಎದುರಿನ ಪಂಪ ಮಹಾಕವಿ ರಸ್ತೆಯ ಹೆಸರು ಬದಲಿಸಲು ಮುಂದಾಗಿದ್ದ ಕಸಾಪ ಅಧ್ಯಕ್ಷ ಮಹೇಶ ಜೋಶಿ ಅವರಿಗೆ ನನ್ನ ಧಿಕ್ಕಾರ’ ಎಂದು ಸಮ್ಮೇಳನದ ಅಧ್ಯಕ್ಷ ಧರಣೇಂದ್ರ ಕುರಕುರಿ ವೇದಿಕೆಯಲ್ಲೇ ಆಕ್ರೋಶ ವ್ಯಕ್ತಪಡಿಸಿದರು.</p>.<p>‘ಕಸಾಪ ಜಿಲ್ಲಾ ಘಟಕಗಳ ಅಧ್ಯಕ್ಷರುಗಳ ಮೇಲೆ ಮಹೇಶ ಜೋಶಿ ದಬ್ಬಾಳಿಕೆ ನಡೆಸುತ್ತಿರುವುದು ಖಂಡನೀಯ. ಅವರಿಗೆ ನೈತಿಕತೆ ಇಲ್ಲದ್ದರಿಂದ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದಿಲ್ಲ’ ಎಂದರು.</p>.<p>**</p>.<p>ಸಮ್ಮೇಳನದ ನಿರ್ಣಯಗಳು</p>.<p>l ಶಾಲಾ ಹಂತದ ಶಿಕ್ಷಣದಲ್ಲಿ ಮಕ್ಕಳಲ್ಲಿ ಸೌಹಾರ್ದ ಸಂಬಂಧ, ಭಾವೈಕ್ಯ ಮನೋಭಾವ ಬೆಳೆಸುವಂತಹ ಪಠ್ಯ–ಪುಸ್ತಕ ರಚಿಸಬೇಕು</p>.<p>l ಹೊಸ ಶಿಕ್ಷಣ ನೀತಿಯಲ್ಲಿ ಸ್ಥಳೀಯ ಭಾಷೆಗಳ ಅಸ್ತಿತ್ವಕ್ಕೆ ಮಾನ್ಯತೆ ನೀಡುವ ಸಮಗ್ರ ಶಿಕ್ಷಣ ನೀತಿ ಜಾರಿಮಾಡಬೇಕು</p>.<p>l ಗಡಿನಾಡ ಮತ್ತು ಹೊರನಾಡು ಕನ್ನಡಿಗರ ಮಕ್ಕಳಿಗಾಗಿ ಮೂಲಸೌಕರ್ಯ ಒದಗಿಸಿ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಮಾಡಬೇಕು</p>.<p>l ಗಡಿನಾಡು ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಅಭಿವೃದ್ಧಿ ಪ್ರಾಧಿಕಾರಗಳು ಗಡಿನಾಡಿನಲ್ಲಿ ಕನ್ನಡ ಪ್ರಜ್ಞೆಯನ್ನು ಜಾಗೃತಗೊಳಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಗಟ್ಟಿಗೊಳಿಸಬೇಕು</p>.<p>l ಪಂಪ ಪ್ರಶಸ್ತಿಯನ್ನು ಪಂಪನ ಹುಟ್ಟೂರಾದ ಅಣ್ಣಿಗೇರಿಯಲ್ಲೇ ಪ್ರದಾನ ಮಾಡುವಂತಾಗಬೇಕು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ</strong>: ‘ಮಾತೃ ಭಾಷೆ ಹೆಸರಿನಲ್ಲಿ ಪ್ರಾದೇಶಿಕ ಭಾಷೆಗಳಿಗೆ ಅನ್ಯಾಯವಾಗುತ್ತಿದೆ. ಕನ್ನಡವು ರಾಜ್ಯ ಭಾಷೆಯೇ ಹೊರತು ಮಾತೃ ಭಾಷೆ ಅಲ್ಲ’ ಎಂದು ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.</p>.<p>ಇಲ್ಲಿನ ಸವಾಯಿ ಗಂಧರ್ವ ಕಲಾ ಭವನದಲ್ಲಿ ಶನಿವಾರ ನಡೆದ ಧಾರವಾಡ ಜಿಲ್ಲಾ 15ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪದಲ್ಲಿ ಅವರು, ‘ಪ್ರಾದೇಶಿಕ ಭಾಷೆಗಳು ಕೊನೆಯುಸಿರೆಳೆಯುತ್ತಿರುವ ಸಮಯ ಇದು’ ಎಂದರು.</p>.<p>‘1–7ನೇ ತರಗತಿ ವರೆಗೆ ಪ್ರಥಮ/ದ್ವಿತೀಯ ಭಾಷೆಯಾಗಿ ಕನ್ನಡ ಕಲಿಸುವ ನೀತಿ ಸಮರ್ಪಕವಾಗಿ ಅನುಷ್ಠಾನಕ್ಕೆ ಬರಲೇ ಇಲ್ಲ. ಶಿಕ್ಷಣದ ಖಾಸಗೀಕರಣದಿಂದ ಕನ್ನಡ ಕಳೆದುಹೋಗುತ್ತಿದೆ. ಇದು ಮುಂದುವರಿದರೆ ಕನ್ನಡ ಆಡಳಿತ ಭಾಷೆಯಾಗಿರಲು ಸಾಧ್ಯವಿಲ್ಲ’ ಎಂದರು.</p>.<p class="Subhead">ಎಲ್ಲರನ್ನೂ ಒಳಗೊಳ್ಳಲಿ: ‘ಸಾಹಿತ್ಯವು ಗೆದ್ದೆತ್ತಿನ ಬಾಲ ಹಿಡಿಯಬಾರದು. ಸೋತೆತ್ತಿನ ಕೊಂಬು ಹಿಡಿದು ಮೇಲಕ್ಕೆ ಎತ್ತಬೇಕು. ಕನ್ನಡ ಸಾಹಿತ್ಯ ಪರಿಷತ್ತು ಕೂಡ ಯಾರನ್ನೂ ಹೊರಗಿಡದೆ ಎಲ್ಲರನ್ನೂ ಒಳಗೊಳ್ಳುವಂತಾಗಬೇಕು’ ಎಂದು ಆಶಿಸಿದರು.</p>.<p>ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಪಿ.ಎಲ್. ಪಾಟೀಲ, ‘ಪ್ರಾದೇಶಿಕ ಭಾಷೆಯಲ್ಲಿ ಶಿಕ್ಷಣ ಸಿಕ್ಕರೆ ಉತ್ತಮ ಆಡಳಿತ ನಿರ್ವಹಿಸಲು ಸಾಧ್ಯವಾಗುತ್ತದೆ’ ಎಂದರು.</p>.<p>‘ಕೃಷಿಯ ಎಲ್ಲ ಪಠ್ಯಗಳನ್ನು ಕನ್ನಡೀಕರಣಗೊಳಿಸುವ ಪ್ರಯತ್ನ ನಡೆಯುತ್ತಿದೆ. ಆದರೆ, ಈ ಪಠ್ಯಗಳು ದಕ್ಷಿಣ ಕರ್ನಾಟಕದ ಗ್ರಾಂಥಿಕ ಭಾಷೆಯಲ್ಲಿವೆ. ಇವುಗಳನ್ನು ಉತ್ತರ ಕರ್ನಾಟಕದ ಆಡು ಭಾಷೆಗೆ ಅಳವಡಿಸಲು ಸಾಹಿತಿಗಳು ಮುಂದಾಗಬೇಕು’ ಎಂದು ಕೋರಿದರು.</p>.<p>ಕವಯಿತ್ರಿ ಕಾವ್ಯಾ ಕಡಮೆ ಅವರ ‘ಮಾಕೋನ ಏಕಾಂತ’ ಕೃತಿಗೆ ಕಸಾಪ ಯುವ ಕತೆಗಾರ್ತಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿಯು ₹5 ಸಾವಿರ ನಗದು, ಪ್ರಶಸ್ತಿ ಪತ್ರ ಒಳಗೊಂಡಿದೆ. ಸಮ್ಮೇಳನದ ಅಧ್ಯಕ್ಷ ಧರಣೇಂದ್ರ ಕುರಕುರಿ ಅವರನ್ನು ಸನ್ಮಾನಿಸಲಾಯಿತು.</p>.<p>ಪ್ರಹ್ಲಾದ ಗೆಜ್ಜಿ, ಎಸ್.ಎಫ್. ಸಿದ್ದನಗೌಡರ, ಶಶಿಧರ ಸಾಲಿ, ಎಸ್.ಕೆ. ಆದಪ್ಪನವರ, ಗಂಗಾಧರ ದೊಡವಾಡ, ಜಯಶ್ರೀ ಜಾತಿಕರ್ತ ಇದ್ದರು.</p>.<p class="Subhead">‘ಕನ್ನಡ ಶ್ರೀಮಂತ ಭಾಷೆ’: ‘ಚಿಂತನೆ’ ಗೋಷ್ಠಿಯಲ್ಲಿ ‘ತಮಿಳು-ಕನ್ನಡ ಭಾಷಾ ಮತ್ತು ಸಾಂಸ್ಕೃತಿಕ ಬಾಂಧವ್ಯ’ ಕುರಿತು ಮಾತನಾಡಿದ ತಮಿಳುನಾಡು ಘಟಕದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಡಾ.ತಮಿಳು ಸೆಲ್ವಿ, ‘ಪಂಚದ್ರಾವಿಡ ಭಾಷೆಗಳಿಗೆ ಒಂದೇ ಮೂಲಭಾಷೆ. ತಮಿಳು–ಕನ್ನಡ ಅದರ ಎರಡು ಕವಲುಗಳು’ ಎಂದರು.</p>.<p>‘ಕನ್ನಡ ಜಾನಪದ ಮತ್ತು ಆಧುನಿಕತೆ’ ಕುರಿತು ಮಾತನಾಡಿದ ಕಸಾಪ ಹಾಸನ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಚ್.ಎಲ್.ಮಲ್ಲೇಶಗೌಡ, ‘ಶ್ರಮ ಸಂಸ್ಕೃತಿ ಕಳೆದುಕೊಂಡು ಸುಖದ ಬೆನ್ನು ಬಿದ್ದಿರುವ ಜನರ ಆಧುನಿಕ ಜೀವನವು ನಿಸ್ಸಾರ ಮತ್ತು ನಿಷ್ಕ್ರಿಯವಾಗಿದೆ’ ಎಂದರು.</p>.<p class="Subhead">ಕವಿಗೋಷ್ಠಿ: ‘ಆಯ್ಕೆ ಮಾಡುವ ವಸ್ತು, ಹೇಳುವ ಮತ್ತು ಕವಿತೆ ಕಟ್ಟುವ ಕ್ರಮ, ಸೂಕ್ತ ಶಬ್ದಗಳ ಆಯ್ಕೆ ಕವಿತೆ ರಚನೆಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ’ ಎಂದು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ಎಚ್.ಎಲ್.ಪುಷ್ಪಾ ಹೇಳಿದರು.</p>.<p>‘ಕನ್ನಡ ಅಲ್ಲದೇ ಭಾರತೀಯ ಭಾಷೆಗಳು ಮತ್ತು ಜಗತ್ತಿನ ವಿವಿಧ ದೇಶಗಳ ಉತ್ತಮ ಕವಿಗಳ ಕವಿತೆಗಳನ್ನು ಅಧ್ಯಯನ ಮಾಡಿ’ ಎಂದು ಕಿವಿಮಾತು ಹೇಳಿದರು.</p>.<p>30 ಕವಿಗಳು ಕವನ ವಾಚಿಸಿದರು.</p>.<p>**</p>.<p><strong>‘ಕೆಆರ್ಎಸ್ ಕಟ್ಟಿದ್ದು ವಿಶ್ವೇಶ್ವರಯ್ಯ ಅಲ್ಲ’</strong></p>.<p>‘ಕಾವೇರಿಯನು ಹರಿಯಲು ಬಿಟ್ಟು ವಿಶ್ವೇಶ್ವರಯ್ಯ ಶ್ರಮ ಪಡದಿದ್ದರೆ, ಕನ್ನಂಬಾಡಿಯ ಕಟ್ಟದಿದ್ದರೆ... ಎಂದು ಚಿತ್ರಗೀತೆಯಲ್ಲಿ ಇತಿಹಾಸ ತಿರುಚಲಾಗಿದೆ’ ಎಂದು ಸಾಹಿತಿ ಎಸ್.ಜಿ. ಸಿದ್ದರಾಮಯ್ಯ ಹೇಳಿದರು.</p>.<p>‘ಕನ್ನಂಬಾಡಿ ಕಟ್ಟೆ (ಕೆಆರ್ಎಸ್) ಕಟ್ಟುವ ಟಿಪ್ಪು ಸುಲ್ತಾನನ ಯೋಜನೆಯನ್ನು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಅನುಷ್ಠಾನಕ್ಕೆ ತಂದರು. ಜರ್ಮನಿಯ ಎಂಜಿನಿಯರ್ ಒಬ್ಬರು 1911ರಲ್ಲಿ ನಿರ್ಮಾಣ ಆರಂಭಿಸಿದ್ದರು. ಪ್ರವಾಹದಲ್ಲಿ ಅವರು ಕೊಚ್ಚಿಹೋಗಿ ಮೃತರಾದ ನಂತರ ಸರ್.ಎಂ. ವಿಶ್ವೇಶ್ವರಯ್ಯ ಅವರನ್ನು ಒಡೆಯರ್ ಅವರು ಈ ಕಾರ್ಯಕ್ಕೆ ಎಂಜಿನಿಯರ್ ಆಗಿ 1915ರಲ್ಲಿ ನೇಮಿಸಿದರು. ಅವರ ಕಾರ್ಯಕ್ಷಮತೆಯ ಫಲವಾಗಿ ದಿವಾನ್ ಆಗಿ ನೇಮಕಗೊಂಡರು’ ಎಂದು ಅವರು ಹೇಳಿದರು.</p>.<p>‘ನಂತರ ಒಡೆಯರ್ ಅವರು ಮೀಸಲಾತಿ ಅನುಷ್ಠಾನಕ್ಕೆ ಮುಂದಾದಾಗ ಅದನ್ನು ವಿರೋಧಿಸಿ ವಿಶ್ವೇಶ್ವರಯ್ಯನವರು ದಿವಾನ್ ಹುದ್ದೆಗೆ 1918ರಲ್ಲಿ ರಾಜೀನಾಮೆ ನೀಡಿ ಹೊರಬಂದರು. ಅಣೆಕಟ್ಟು ನಿರ್ಮಾಣ ಪೂರ್ಣಗೊಂಡಿದ್ದು 1932ರಲ್ಲಿ. ವಿಶ್ವೇಶ್ವರಯ್ಯ ಅವರು ಈ ಅಣೆಕಟ್ಟೆ ನಿರ್ಮಾಣ ಪ್ರಕ್ರಿಯೆಯ ಭಾಗವಾಗಿದ್ದು ಕೆಲವೇ ವರ್ಷಗಳು ಮಾತ್ರ’ ಎಂದು ಅವರು ಪ್ರತಿಪಾದಿಸಿದರು.</p>.<p>**</p>.<p><strong>‘ಮಹೇಶ ಜೋಶಿಗೆ ಧಿಕ್ಕಾರ’</strong></p>.<p>‘ಬೆಂಗಳೂರಿನ ಕಸಾಪ ಕೇಂದ್ರ ಕಚೇರಿ ಎದುರಿನ ಪಂಪ ಮಹಾಕವಿ ರಸ್ತೆಯ ಹೆಸರು ಬದಲಿಸಲು ಮುಂದಾಗಿದ್ದ ಕಸಾಪ ಅಧ್ಯಕ್ಷ ಮಹೇಶ ಜೋಶಿ ಅವರಿಗೆ ನನ್ನ ಧಿಕ್ಕಾರ’ ಎಂದು ಸಮ್ಮೇಳನದ ಅಧ್ಯಕ್ಷ ಧರಣೇಂದ್ರ ಕುರಕುರಿ ವೇದಿಕೆಯಲ್ಲೇ ಆಕ್ರೋಶ ವ್ಯಕ್ತಪಡಿಸಿದರು.</p>.<p>‘ಕಸಾಪ ಜಿಲ್ಲಾ ಘಟಕಗಳ ಅಧ್ಯಕ್ಷರುಗಳ ಮೇಲೆ ಮಹೇಶ ಜೋಶಿ ದಬ್ಬಾಳಿಕೆ ನಡೆಸುತ್ತಿರುವುದು ಖಂಡನೀಯ. ಅವರಿಗೆ ನೈತಿಕತೆ ಇಲ್ಲದ್ದರಿಂದ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದಿಲ್ಲ’ ಎಂದರು.</p>.<p>**</p>.<p>ಸಮ್ಮೇಳನದ ನಿರ್ಣಯಗಳು</p>.<p>l ಶಾಲಾ ಹಂತದ ಶಿಕ್ಷಣದಲ್ಲಿ ಮಕ್ಕಳಲ್ಲಿ ಸೌಹಾರ್ದ ಸಂಬಂಧ, ಭಾವೈಕ್ಯ ಮನೋಭಾವ ಬೆಳೆಸುವಂತಹ ಪಠ್ಯ–ಪುಸ್ತಕ ರಚಿಸಬೇಕು</p>.<p>l ಹೊಸ ಶಿಕ್ಷಣ ನೀತಿಯಲ್ಲಿ ಸ್ಥಳೀಯ ಭಾಷೆಗಳ ಅಸ್ತಿತ್ವಕ್ಕೆ ಮಾನ್ಯತೆ ನೀಡುವ ಸಮಗ್ರ ಶಿಕ್ಷಣ ನೀತಿ ಜಾರಿಮಾಡಬೇಕು</p>.<p>l ಗಡಿನಾಡ ಮತ್ತು ಹೊರನಾಡು ಕನ್ನಡಿಗರ ಮಕ್ಕಳಿಗಾಗಿ ಮೂಲಸೌಕರ್ಯ ಒದಗಿಸಿ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಮಾಡಬೇಕು</p>.<p>l ಗಡಿನಾಡು ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಅಭಿವೃದ್ಧಿ ಪ್ರಾಧಿಕಾರಗಳು ಗಡಿನಾಡಿನಲ್ಲಿ ಕನ್ನಡ ಪ್ರಜ್ಞೆಯನ್ನು ಜಾಗೃತಗೊಳಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಗಟ್ಟಿಗೊಳಿಸಬೇಕು</p>.<p>l ಪಂಪ ಪ್ರಶಸ್ತಿಯನ್ನು ಪಂಪನ ಹುಟ್ಟೂರಾದ ಅಣ್ಣಿಗೇರಿಯಲ್ಲೇ ಪ್ರದಾನ ಮಾಡುವಂತಾಗಬೇಕು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>