ಗುರುವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ದಾಳಿ ಬಗ್ಗೆ ಯಡಿಯೂರಪ್ಪ ಅವರನ್ನೇ ಕೇಳಬೇಕು. ಯಡಿಯೂರಪ್ಪನವರ ಆಪ್ತನ ಮೇಲೆಯೇ ದಾಳಿಯಾಗಿದೆ ಅಂದ್ರೆ ಏನೋ ರಾಜಕೀಯ ಇದ್ದರೂ ಇರಬಹುದು. ಯಡಿಯೂರಪ್ಪ ಆಪ್ತರನ್ನು ಬಿಟ್ಟು ಬಸವರಾಜ ಬೊಮ್ಮಾಯಿ ಅಥವಾ ಸಚಿವರ ಮನೆ ಮೇಲೆ ದಾಳಿ ಮಾಡಲು ಆಗುತ್ತದೆಯೇ?’ ಎಂದು ಪ್ರಶ್ನಿಸಿದರು.