<p><strong>ಹುಬ್ಬಳ್ಳಿ</strong>: ‘ರಫ್ತು ವ್ಯವಹಾರದ ವಿಧಾನಗಳು, ಬೇಡಿಕೆಯಿರುವ ಉತ್ಪನ್ನಗಳ ಆಯ್ಕೆ, ಗುಣಮಟ್ಟ ಹಾಗೂ ಉತ್ತಮ ಪ್ಯಾಕೇಜಿಂಗ್ ನೀತಿ ಅಳವಡಿಸಿಕೊಂಡಲ್ಲಿ ಯಶಸ್ವಿ ರಫ್ತುದಾರರಾಗಲು ಸಾಧ್ಯ’ ಎಂದು ವಿಟಿಪಿಸಿ ಸಂಸ್ಥೆ ಬೆಂಗಳೂರು ಜಂಟಿ ನಿರ್ದೇಶಕ ಬಾಬು ನಾಗೇಶ ತಿಳಿಸಿದರು.</p>.<p>ಭಾವಿ ರಫ್ತುದಾರರಿಗಾಗಿ ಇಲ್ಲಿನ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಆರು ದಿನಗಳ ರಫ್ತು ನಿರ್ವಹಣಾ ತರಬೇತಿ ಕಾರ್ಯಾಗಾರವನ್ನು ಸೋಮವಾರ ಉದ್ಘಾಟಿಸಿದ ಅವರು, ‘ರಫ್ತು ವ್ಯವಹಾರ ಲಾಭದ ಜತೆಗೆ ದೇಶದ ಆರ್ಥಿಕತೆಯ ಅಭಿವೃದ್ಧಿಯಲ್ಲಿ ಪಾಲುದಾರರಾಗಲು ಅವಕಾಶ ನೀಡುತ್ತದೆ’ ಎಂದರು.</p>.<p>‘2024–25ನೇ ಸಾಲಿನಲ್ಲಿ ಸೇವಾ ವಲಯ, ಅಂದರೆ ಸಾಫ್ಟ್ವೇರ್ ಕ್ಷೇತ್ರದ ರಫ್ತಿನಲ್ಲಿ ಕರ್ನಾಟಕವು ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಕರ್ನಾಟಕದ ಎಲ್ಲ 31 ಜಿಲ್ಲೆಯಿಂದ ರಫ್ತು ಕೈಗೊಳ್ಳುತ್ತಿರುವುದು ವಿಶೇಷ’ ಎಂದು ತಿಳಿಸಿದರು.</p>.<p>ವಿಟಿಪಿಸಿ ಧಾರವಾಡದ ಉಪ ನಿರ್ದೇಶಕ ಟಿ.ಎಸ್. ಮಲ್ಲಿಕಾರ್ಜುನ, ‘ರಫ್ತು ವಿಧಾನಗಳು, ಮಾರುಕಟ್ಟೆ, ಪ್ಯಾಕೇಜಿಂಗ್, ಕ್ರೆಡಿಟ್ ಸೌಲಭ್ಯ, ಕಸ್ಟಮ್ಸ್ ವಿಧಾನಗಳು, ಸಾಗಾಟ ಮತ್ತು ಇ–ಕಾಮರ್ಸ್ ವೇದಿಕೆಯಿಂದ ಸಣ್ಣ ಉದ್ದಿಮೆಗಳಿಗೆ ರಫ್ತಿನಲ್ಲಿ ಇರುವ ಅವಕಾಶಗಳ ಕುರಿತು ಪರಿಣತರಿಂದ ಮಾಹಿತಿ ನೀಡುವುದು ಕಾರ್ಯಾಗಾರದ ಉದ್ದೇಶ’ ಎಂದರು.</p>.<p>ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯದಿಂದ 28 ಭಾವಿ ರಫ್ತುದಾರರು ಪಾಲ್ಗೊಂಡಿದ್ದರು. ವಾಣಿಜ್ಯೋದ್ಯಮ ಸಂಸ್ಥೆಯ ಗೌರವ ಕಾರ್ಯದರ್ಶಿ ರವೀಂದ್ರ ಬಳಿಗಾರ, ಸಹಾಯಕ ಕಾರ್ಯದರ್ಶಿ ನಂದೀಶ ಅಣ್ಣಗೇರಿ ಇದ್ದರು.</p>.<div><blockquote>ಕೇಂದ್ರ ಸರ್ಕಾರವು ನವೋದ್ಯಮಿಗಳಿಗೆ ಹಲವು ಸೌಲಭ್ಯ ಹಾಗೂ ರಿಯಾಯಿತಿಗಳನ್ನು ನೀಡುತ್ತಿದೆ. ಅವುಗಳ ಪ್ರಯೋಜನ ಪಡೆದು ಯಶಸ್ವಿ ರಫ್ತು ಉದ್ಯಮಿಗಳಾಗಬೇಕು</blockquote><span class="attribution">ಎಸ್.ಪಿ. ಸಂಶಿಮಠ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ</strong>: ‘ರಫ್ತು ವ್ಯವಹಾರದ ವಿಧಾನಗಳು, ಬೇಡಿಕೆಯಿರುವ ಉತ್ಪನ್ನಗಳ ಆಯ್ಕೆ, ಗುಣಮಟ್ಟ ಹಾಗೂ ಉತ್ತಮ ಪ್ಯಾಕೇಜಿಂಗ್ ನೀತಿ ಅಳವಡಿಸಿಕೊಂಡಲ್ಲಿ ಯಶಸ್ವಿ ರಫ್ತುದಾರರಾಗಲು ಸಾಧ್ಯ’ ಎಂದು ವಿಟಿಪಿಸಿ ಸಂಸ್ಥೆ ಬೆಂಗಳೂರು ಜಂಟಿ ನಿರ್ದೇಶಕ ಬಾಬು ನಾಗೇಶ ತಿಳಿಸಿದರು.</p>.<p>ಭಾವಿ ರಫ್ತುದಾರರಿಗಾಗಿ ಇಲ್ಲಿನ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಆರು ದಿನಗಳ ರಫ್ತು ನಿರ್ವಹಣಾ ತರಬೇತಿ ಕಾರ್ಯಾಗಾರವನ್ನು ಸೋಮವಾರ ಉದ್ಘಾಟಿಸಿದ ಅವರು, ‘ರಫ್ತು ವ್ಯವಹಾರ ಲಾಭದ ಜತೆಗೆ ದೇಶದ ಆರ್ಥಿಕತೆಯ ಅಭಿವೃದ್ಧಿಯಲ್ಲಿ ಪಾಲುದಾರರಾಗಲು ಅವಕಾಶ ನೀಡುತ್ತದೆ’ ಎಂದರು.</p>.<p>‘2024–25ನೇ ಸಾಲಿನಲ್ಲಿ ಸೇವಾ ವಲಯ, ಅಂದರೆ ಸಾಫ್ಟ್ವೇರ್ ಕ್ಷೇತ್ರದ ರಫ್ತಿನಲ್ಲಿ ಕರ್ನಾಟಕವು ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಕರ್ನಾಟಕದ ಎಲ್ಲ 31 ಜಿಲ್ಲೆಯಿಂದ ರಫ್ತು ಕೈಗೊಳ್ಳುತ್ತಿರುವುದು ವಿಶೇಷ’ ಎಂದು ತಿಳಿಸಿದರು.</p>.<p>ವಿಟಿಪಿಸಿ ಧಾರವಾಡದ ಉಪ ನಿರ್ದೇಶಕ ಟಿ.ಎಸ್. ಮಲ್ಲಿಕಾರ್ಜುನ, ‘ರಫ್ತು ವಿಧಾನಗಳು, ಮಾರುಕಟ್ಟೆ, ಪ್ಯಾಕೇಜಿಂಗ್, ಕ್ರೆಡಿಟ್ ಸೌಲಭ್ಯ, ಕಸ್ಟಮ್ಸ್ ವಿಧಾನಗಳು, ಸಾಗಾಟ ಮತ್ತು ಇ–ಕಾಮರ್ಸ್ ವೇದಿಕೆಯಿಂದ ಸಣ್ಣ ಉದ್ದಿಮೆಗಳಿಗೆ ರಫ್ತಿನಲ್ಲಿ ಇರುವ ಅವಕಾಶಗಳ ಕುರಿತು ಪರಿಣತರಿಂದ ಮಾಹಿತಿ ನೀಡುವುದು ಕಾರ್ಯಾಗಾರದ ಉದ್ದೇಶ’ ಎಂದರು.</p>.<p>ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯದಿಂದ 28 ಭಾವಿ ರಫ್ತುದಾರರು ಪಾಲ್ಗೊಂಡಿದ್ದರು. ವಾಣಿಜ್ಯೋದ್ಯಮ ಸಂಸ್ಥೆಯ ಗೌರವ ಕಾರ್ಯದರ್ಶಿ ರವೀಂದ್ರ ಬಳಿಗಾರ, ಸಹಾಯಕ ಕಾರ್ಯದರ್ಶಿ ನಂದೀಶ ಅಣ್ಣಗೇರಿ ಇದ್ದರು.</p>.<div><blockquote>ಕೇಂದ್ರ ಸರ್ಕಾರವು ನವೋದ್ಯಮಿಗಳಿಗೆ ಹಲವು ಸೌಲಭ್ಯ ಹಾಗೂ ರಿಯಾಯಿತಿಗಳನ್ನು ನೀಡುತ್ತಿದೆ. ಅವುಗಳ ಪ್ರಯೋಜನ ಪಡೆದು ಯಶಸ್ವಿ ರಫ್ತು ಉದ್ಯಮಿಗಳಾಗಬೇಕು</blockquote><span class="attribution">ಎಸ್.ಪಿ. ಸಂಶಿಮಠ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>