<p><strong>ಧಾರವಾಡ:</strong> ಕ್ರೀಡಾ ತರಬೇತಿ ಶಿಬಿರದ (ಕೋಚಿಂಗ್ ಕ್ಯಾಂಪ್) ಅವಧಿಯಲ್ಲಿ ಕ್ರೀಡಾಪಟುಗಳಿಗೆ ನೀಡುವ ದಿನಭತ್ಯೆಗೆ ಕರ್ನಾಟಕ ವಿಶ್ವವಿದ್ಯಾಲಯ ಕತ್ತರಿ ಹಾಕಿದೆ. ವಿಶ್ವವಿದ್ಯಾಲಯದ ಈ ನಡೆಗೆ ಆಕ್ಷೇಪ ವ್ಯಕ್ತವಾಗಿದೆ.</p>.<p>ವಿವಿಧ ಕ್ರೀಡೆಗಳ ತರಬೇತಿ ಶಿಬಿರ ಅವಧಿಯಲ್ಲಿ ಕ್ರೀಡಾಪಟುಗಳಿಗೆ ತಲಾ ₹250 ದಿನಭತ್ಯೆ ನೀಡಲಾಗುತ್ತಿತ್ತು. ವಿಶ್ವವಿದ್ಯಾಲಯದಲ್ಲಿ ಈಗ ಫುಟ್ಬಾಲ್, ಬ್ಯಾಡ್ಮಿಂಟನ್ (ಮಹಿಳಾ) ತರಬೇತಿ ಶಿಬಿರಗಳು ನಡೆಯುತ್ತಿವೆ. ಉತ್ತರ ಕನ್ನಡ, ಧಾರವಾಡ, ಹಾವೇರಿ ಸಹಿತ ವಿವಿಧ ಜಿಲ್ಲೆಗಳ ವಿವಿಧ ಪದವಿ ಕಾಲೇಜುಗಳ ಕ್ರೀಡಾಪಟುಗಳು ತರಬೇತಿ ಶಿಬಿರಗಳಲ್ಲಿ ಪಾಲ್ಗೊಂಡಿದ್ದಾರೆ.</p>.<p>ಎರಡು ದಿನಗಳ ಹಿಂದೆ ಕುಸ್ತಿ ಶಿಬಿರ ಮುಗಿದಿದೆ. ಕುಸ್ತಿ ಕ್ರೀಡಾಪಟುಗಳು ಅಂತರ ವಿಶ್ವವಿದ್ಯಾಲಯ ಕುಸ್ತಿ ಸ್ಪರ್ಧೆಗೆ ಪಂಜಾಬ್ಗೆ ತೆರಳಿದ್ದಾರೆ. ಈ ತಂಡಕ್ಕೆ ದಿನಭತ್ಯೆ ನೀಡಿಲ್ಲ.</p>.<p>‘ಪದವಿ ಕೋರ್ಸ್ನ ಪ್ರತಿ ವಿದ್ಯಾರ್ಥಿಯು ವಾರ್ಷಿಕ ₹370 ಕ್ರೀಡಾ ಶುಲ್ಕ (ಕ್ರೀಡಾ ನಿಧಿ) ಪಾವತಿಸಿರುತ್ತಾರೆ. ಕ್ರೀಡಾಪಟುಗಳ ದಿನಭತ್ಯೆಗೆ ಕತ್ತರಿ ಹಾಕಿರುವುದು ಸರಿಯಲ್ಲ. ತರಬೇತಿ ಶಿಬಿರದ ಅವಧಿಯಲ್ಲಿ ಕ್ರೀಡಾಪಟುಗಳ ಊಟ, ಉಪಾಹಾರಕ್ಕಾಗಿ ಈ ಭತ್ಯೆ ನೀಡಲಾಗುತ್ತದೆ’ ಎಂದು ಹುಬ್ಬಳ್ಳಿಯ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಶ್ರೀಪಾಲ ಕುರಕುರಿ ತಿಳಿಸಿದರು.</p>.<p>‘ಈ ಹಿಂದೆ 10 ದಿನ ಶಿಬಿರ ನಡೆಯುತ್ತಿದ್ದವು. ಈಗ ಐದು ದಿನ ನಡೆಯುತ್ತಿವೆ. ಸಿದ್ಧತೆ, ತಂಡ ಸಮನ್ವಯ ನಿಟ್ಟಿನಲ್ಲಿ ಶಿಬಿರದ ಅವಧಿಯನ್ನು ಹಿಂದಿನಂತೆ 10 ದಿನಕ್ಕೆ ನಿಗದಿಪಡಿಸಬೇಕು’ ಎಂದು ಕೋಚ್ವೊಬ್ಬರು ಮನವಿ ಮಾಡಿದರು.</p>.<p>ಪುಟ್ಬಾಲ್ ತರಬೇತಿ ಶಿಬಿರದಲ್ಲಿ ಭಾಗವಹಿಸಿರುವ ಕ್ರೀಡಾಪಟುಗಳು ಅಂತರ ವಿಶ್ವವಿದ್ಯಾಲಯ ಸ್ಪರ್ಧೆಗೆ ತೆಲಂಗಾಣಕ್ಕೆ ತೆರಳಲು, ಬ್ಯಾಡ್ಮಿಂಟನ್ ತರಬೇತಿ ಶಿಬಿರದ ವಿದ್ಯಾರ್ಥಿನಿಯರು ಹೈದರಾಬಾದ್ನಲ್ಲಿ ನಡೆಯುವ ಟೂರ್ನಿಗೆ ತೆರಳಲು ಸಿದ್ಧತೆ ನಡೆಸಿದ್ದಾರೆ.</p>.<div><blockquote>ಕೋಚಿಂಗ್ ಕ್ಯಾಂಪ್ಗೆ ಬಹಳಷ್ಟು ಕ್ರೀಡಾಪಟುಗಳು ಹೊರ ಊರುಗಳಿಂದ ಬರುತ್ತಾರೆ. ವಿಶ್ವವಿದ್ಯಾಲಯದವರು ದಿನಭತ್ಯೆ ಕೊಟ್ಟರೆ ಅನುಕೂಲವಾಗುತ್ತದೆ </blockquote><span class="attribution">-ಶರತ್ ಕಲ್ಲಕುಂಟ್ಲ, ಫುಟ್ಬಾಲ್ ಕ್ರೀಡಾಪಟು</span></div>.<div><blockquote>ಕೆಲ ಗೊಂದಲದಿಂದಾಗಿ ಸಮಸ್ಯೆಯಾಗಿದೆ. ಕ್ರೀಡಾಪಟುಗಳಿಗೆ ದಿನಭತ್ಯೆ ನೀಡುವಂತೆ ಹಣಕಾಸು ಅಧಿಕಾರಿಗೆ ತಿಳಿಸಿದ್ದೇನೆ. ಅವರು ಒಪ್ಪಿಕೊಂಡಿದ್ದಾರೆ. </blockquote><span class="attribution">-ಪ್ರೊ.ಎ.ಎಂ.ಖಾನ್, ಕುಲಪತಿ ಕರ್ನಾಟಕ ವಿಶ್ವವಿದ್ಯಾಲಯ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಧಾರವಾಡ:</strong> ಕ್ರೀಡಾ ತರಬೇತಿ ಶಿಬಿರದ (ಕೋಚಿಂಗ್ ಕ್ಯಾಂಪ್) ಅವಧಿಯಲ್ಲಿ ಕ್ರೀಡಾಪಟುಗಳಿಗೆ ನೀಡುವ ದಿನಭತ್ಯೆಗೆ ಕರ್ನಾಟಕ ವಿಶ್ವವಿದ್ಯಾಲಯ ಕತ್ತರಿ ಹಾಕಿದೆ. ವಿಶ್ವವಿದ್ಯಾಲಯದ ಈ ನಡೆಗೆ ಆಕ್ಷೇಪ ವ್ಯಕ್ತವಾಗಿದೆ.</p>.<p>ವಿವಿಧ ಕ್ರೀಡೆಗಳ ತರಬೇತಿ ಶಿಬಿರ ಅವಧಿಯಲ್ಲಿ ಕ್ರೀಡಾಪಟುಗಳಿಗೆ ತಲಾ ₹250 ದಿನಭತ್ಯೆ ನೀಡಲಾಗುತ್ತಿತ್ತು. ವಿಶ್ವವಿದ್ಯಾಲಯದಲ್ಲಿ ಈಗ ಫುಟ್ಬಾಲ್, ಬ್ಯಾಡ್ಮಿಂಟನ್ (ಮಹಿಳಾ) ತರಬೇತಿ ಶಿಬಿರಗಳು ನಡೆಯುತ್ತಿವೆ. ಉತ್ತರ ಕನ್ನಡ, ಧಾರವಾಡ, ಹಾವೇರಿ ಸಹಿತ ವಿವಿಧ ಜಿಲ್ಲೆಗಳ ವಿವಿಧ ಪದವಿ ಕಾಲೇಜುಗಳ ಕ್ರೀಡಾಪಟುಗಳು ತರಬೇತಿ ಶಿಬಿರಗಳಲ್ಲಿ ಪಾಲ್ಗೊಂಡಿದ್ದಾರೆ.</p>.<p>ಎರಡು ದಿನಗಳ ಹಿಂದೆ ಕುಸ್ತಿ ಶಿಬಿರ ಮುಗಿದಿದೆ. ಕುಸ್ತಿ ಕ್ರೀಡಾಪಟುಗಳು ಅಂತರ ವಿಶ್ವವಿದ್ಯಾಲಯ ಕುಸ್ತಿ ಸ್ಪರ್ಧೆಗೆ ಪಂಜಾಬ್ಗೆ ತೆರಳಿದ್ದಾರೆ. ಈ ತಂಡಕ್ಕೆ ದಿನಭತ್ಯೆ ನೀಡಿಲ್ಲ.</p>.<p>‘ಪದವಿ ಕೋರ್ಸ್ನ ಪ್ರತಿ ವಿದ್ಯಾರ್ಥಿಯು ವಾರ್ಷಿಕ ₹370 ಕ್ರೀಡಾ ಶುಲ್ಕ (ಕ್ರೀಡಾ ನಿಧಿ) ಪಾವತಿಸಿರುತ್ತಾರೆ. ಕ್ರೀಡಾಪಟುಗಳ ದಿನಭತ್ಯೆಗೆ ಕತ್ತರಿ ಹಾಕಿರುವುದು ಸರಿಯಲ್ಲ. ತರಬೇತಿ ಶಿಬಿರದ ಅವಧಿಯಲ್ಲಿ ಕ್ರೀಡಾಪಟುಗಳ ಊಟ, ಉಪಾಹಾರಕ್ಕಾಗಿ ಈ ಭತ್ಯೆ ನೀಡಲಾಗುತ್ತದೆ’ ಎಂದು ಹುಬ್ಬಳ್ಳಿಯ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಶ್ರೀಪಾಲ ಕುರಕುರಿ ತಿಳಿಸಿದರು.</p>.<p>‘ಈ ಹಿಂದೆ 10 ದಿನ ಶಿಬಿರ ನಡೆಯುತ್ತಿದ್ದವು. ಈಗ ಐದು ದಿನ ನಡೆಯುತ್ತಿವೆ. ಸಿದ್ಧತೆ, ತಂಡ ಸಮನ್ವಯ ನಿಟ್ಟಿನಲ್ಲಿ ಶಿಬಿರದ ಅವಧಿಯನ್ನು ಹಿಂದಿನಂತೆ 10 ದಿನಕ್ಕೆ ನಿಗದಿಪಡಿಸಬೇಕು’ ಎಂದು ಕೋಚ್ವೊಬ್ಬರು ಮನವಿ ಮಾಡಿದರು.</p>.<p>ಪುಟ್ಬಾಲ್ ತರಬೇತಿ ಶಿಬಿರದಲ್ಲಿ ಭಾಗವಹಿಸಿರುವ ಕ್ರೀಡಾಪಟುಗಳು ಅಂತರ ವಿಶ್ವವಿದ್ಯಾಲಯ ಸ್ಪರ್ಧೆಗೆ ತೆಲಂಗಾಣಕ್ಕೆ ತೆರಳಲು, ಬ್ಯಾಡ್ಮಿಂಟನ್ ತರಬೇತಿ ಶಿಬಿರದ ವಿದ್ಯಾರ್ಥಿನಿಯರು ಹೈದರಾಬಾದ್ನಲ್ಲಿ ನಡೆಯುವ ಟೂರ್ನಿಗೆ ತೆರಳಲು ಸಿದ್ಧತೆ ನಡೆಸಿದ್ದಾರೆ.</p>.<div><blockquote>ಕೋಚಿಂಗ್ ಕ್ಯಾಂಪ್ಗೆ ಬಹಳಷ್ಟು ಕ್ರೀಡಾಪಟುಗಳು ಹೊರ ಊರುಗಳಿಂದ ಬರುತ್ತಾರೆ. ವಿಶ್ವವಿದ್ಯಾಲಯದವರು ದಿನಭತ್ಯೆ ಕೊಟ್ಟರೆ ಅನುಕೂಲವಾಗುತ್ತದೆ </blockquote><span class="attribution">-ಶರತ್ ಕಲ್ಲಕುಂಟ್ಲ, ಫುಟ್ಬಾಲ್ ಕ್ರೀಡಾಪಟು</span></div>.<div><blockquote>ಕೆಲ ಗೊಂದಲದಿಂದಾಗಿ ಸಮಸ್ಯೆಯಾಗಿದೆ. ಕ್ರೀಡಾಪಟುಗಳಿಗೆ ದಿನಭತ್ಯೆ ನೀಡುವಂತೆ ಹಣಕಾಸು ಅಧಿಕಾರಿಗೆ ತಿಳಿಸಿದ್ದೇನೆ. ಅವರು ಒಪ್ಪಿಕೊಂಡಿದ್ದಾರೆ. </blockquote><span class="attribution">-ಪ್ರೊ.ಎ.ಎಂ.ಖಾನ್, ಕುಲಪತಿ ಕರ್ನಾಟಕ ವಿಶ್ವವಿದ್ಯಾಲಯ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>