<p><strong>ಹುಬ್ಬಳ್ಳಿ</strong>: ಹುಬ್ಬಳ್ಳಿಯ ಏಕೈಕ ಸಮುದಾಯ ಬಾನುಲಿ ಕೇಂದ್ರ ಕೆಎಲ್ಇ ಧ್ವನಿಯ ಇಂಟರ್ನೆಟ್ ಪ್ರಸಾರ ಸೇವೆ ಸೋಮವಾರ ಆರಂಭಗೊಂಡಿತು.</p>.<p>ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಪ್ರಕಾಶ ತೇವರಿ ಅವರು ಕೆಎಲ್ಇ ಧ್ವನಿಯ ಸಿಗ್ನೇಚರ್ ಟ್ಯೂನ್ನ್ನು ಪ್ರಸಾರ ಮಾಡುವ ಮೂಲಕ ಲೋಕಾರ್ಪಣೆಗೊಳಿಸಿದರು.</p>.<p>ಪ್ರಕಾಶ ತೇವರಿ ಮಾತನಾಡಿ, ‘ಕೆಎಲ್ಇ ಧ್ವನಿಯು ಕಳೆದ 11 ವರ್ಷಗಳಲ್ಲಿ ಶಿಕ್ಷಣ, ಆರೋಗ್ಯ, ಸಮುದಾಯದ ಅಭಿವೃದ್ಧಿ ಸೇರಿ ವಿವಿಧ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತ ಹುಬ್ಬಳ್ಳಿಯ ಜನಮನದ ಧ್ವನಿಯಾಗಿದೆ. ಕೇವಲ ಹುಬ್ಬಳ್ಳಿಗಷ್ಟೇ ಸೀಮಿತವಾಗಿದ್ದ ಕೆಎಲ್ಇ ಧ್ವನಿ-ಬಿವಿಬಿ 90.4 ಈಗ ಜಗತ್ತಿನಾದ್ಯಂತ ಪ್ರಸಾರವಾಗಲಿದೆ’ ಎಂದು ಹೇಳಿದರು.</p>.<p>ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಕುಲಸಚಿವ ಬಸವರಾಜ ಅನಾಮಿ, ‘ಮೊಬೈಲ್ ಆ್ಯಪ್ ಮೂಲಕ ದೇಶ-ವಿದೇಶಗಳಲ್ಲಿ ಇಂಟರ್ನೆಟ್ ರೇಡಿಯೊ ಮೂಲಕ ಕೆಎಲ್ಇ ಧ್ವನಿಯು ಕೇಳಿಸಲಿದೆ’ ಎಂದು ಹೇಳಿದರು.</p>.<p>ಕೆಎಲ್ಇ ಧ್ವನಿಯ ನಿಲಯ ನಿರ್ದೇಶಕ ಗೋಪಾಲಕೃಷ್ಣ ಹೆಗಡೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.</p>.<p>ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಎಕ್ಸಿಕ್ಯೂಟಿವ್ ಡೀನ್ ಪ್ರೊ. ಬಿ.ಎಲ್. ದೇಸಾಯಿ, ಡೀನ್ ಸಂಜಯ ಕೊಟಬಾಗಿ, ಬಾಬಾ ಭೂಸದ, ಹಿರಿಯ ರಂಗಕರ್ಮಿ ಶಶಿಧರ ನರೇಂದ್ರ, ಎಂ.ಎಸ್. ಕೋಲ್ಹಾರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ</strong>: ಹುಬ್ಬಳ್ಳಿಯ ಏಕೈಕ ಸಮುದಾಯ ಬಾನುಲಿ ಕೇಂದ್ರ ಕೆಎಲ್ಇ ಧ್ವನಿಯ ಇಂಟರ್ನೆಟ್ ಪ್ರಸಾರ ಸೇವೆ ಸೋಮವಾರ ಆರಂಭಗೊಂಡಿತು.</p>.<p>ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಪ್ರಕಾಶ ತೇವರಿ ಅವರು ಕೆಎಲ್ಇ ಧ್ವನಿಯ ಸಿಗ್ನೇಚರ್ ಟ್ಯೂನ್ನ್ನು ಪ್ರಸಾರ ಮಾಡುವ ಮೂಲಕ ಲೋಕಾರ್ಪಣೆಗೊಳಿಸಿದರು.</p>.<p>ಪ್ರಕಾಶ ತೇವರಿ ಮಾತನಾಡಿ, ‘ಕೆಎಲ್ಇ ಧ್ವನಿಯು ಕಳೆದ 11 ವರ್ಷಗಳಲ್ಲಿ ಶಿಕ್ಷಣ, ಆರೋಗ್ಯ, ಸಮುದಾಯದ ಅಭಿವೃದ್ಧಿ ಸೇರಿ ವಿವಿಧ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತ ಹುಬ್ಬಳ್ಳಿಯ ಜನಮನದ ಧ್ವನಿಯಾಗಿದೆ. ಕೇವಲ ಹುಬ್ಬಳ್ಳಿಗಷ್ಟೇ ಸೀಮಿತವಾಗಿದ್ದ ಕೆಎಲ್ಇ ಧ್ವನಿ-ಬಿವಿಬಿ 90.4 ಈಗ ಜಗತ್ತಿನಾದ್ಯಂತ ಪ್ರಸಾರವಾಗಲಿದೆ’ ಎಂದು ಹೇಳಿದರು.</p>.<p>ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಕುಲಸಚಿವ ಬಸವರಾಜ ಅನಾಮಿ, ‘ಮೊಬೈಲ್ ಆ್ಯಪ್ ಮೂಲಕ ದೇಶ-ವಿದೇಶಗಳಲ್ಲಿ ಇಂಟರ್ನೆಟ್ ರೇಡಿಯೊ ಮೂಲಕ ಕೆಎಲ್ಇ ಧ್ವನಿಯು ಕೇಳಿಸಲಿದೆ’ ಎಂದು ಹೇಳಿದರು.</p>.<p>ಕೆಎಲ್ಇ ಧ್ವನಿಯ ನಿಲಯ ನಿರ್ದೇಶಕ ಗೋಪಾಲಕೃಷ್ಣ ಹೆಗಡೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.</p>.<p>ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಎಕ್ಸಿಕ್ಯೂಟಿವ್ ಡೀನ್ ಪ್ರೊ. ಬಿ.ಎಲ್. ದೇಸಾಯಿ, ಡೀನ್ ಸಂಜಯ ಕೊಟಬಾಗಿ, ಬಾಬಾ ಭೂಸದ, ಹಿರಿಯ ರಂಗಕರ್ಮಿ ಶಶಿಧರ ನರೇಂದ್ರ, ಎಂ.ಎಸ್. ಕೋಲ್ಹಾರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>