ಕೊಟಕ್ ಮಹೀಂದ್ರ ಬ್ಯಾಂಕ್ ಅನ್ನು ಐಎನ್ ಜಿ ವೈಶ್ಯ ಬ್ಯಾಂಕಿನೊಂದಿಗೆ ವಿಲೀನ ಮಾಡಿಕೊಳ್ಳುವಾಗ ಬ್ಯಾಂಕಿನ ನೌಕರರ ಸಂಘದೊಂದಿಗೆ ಮಾಡಿಕೊಂಡಿದ್ದ ಒಪ್ಪಂದ ವನ್ನು ಜಾರಿಗೊಳಿಸುತ್ತಿಲ್ಲ. ವರ್ಗಾವಣೆ ನೀತಿ ಒಪ್ಪಂದ ಉಲ್ಲಂಘನೆಯಾದ ಕಾರಣ ಅಧಿಕಾರಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಅರೆಕಾಲಿಕ ಸಿಬ್ಬಂದಿ ಹಾಗೂ ಕ್ಲರ್ಕ್ ಗಳಿಗೆ ಬಡ್ತಿ ನೀಡುತ್ತಿಲ್ಲ ಎಂದು ಅವರು ಹೇಳಿದರು.