‘ಪ್ರತಿಭಟನೆ, ಗಲಾಟೆ ನಿಯಂತ್ರಣ, ಎದುರಾಳಿಗಳ ದಾಳಿ ತಡೆಯುವುದು, ಪ್ರತಿ ದಾಳಿ, ಸಾರ್ವಜನಿಕರೊಂದಿಗೆ ಹೇಗೆ ವರ್ತಿಸಬೇಕು ಹಾಗೂ ತುರ್ತು ಸಂದರ್ಭಗಳನ್ನು ನಿಭಾಯಿಸುವುದು ಸೇರಿದಂತೆ ಹಲವು ರೀತಿಯಲ್ಲಿ ತರಬೇತಿ ನೀಡಲಾಗುತ್ತಿದೆ. ಪೊಲೀಸ್ ಕಮಿಷನರ್ ಆರ್. ದಿಲೀಪ್ ಅವರ ಸಲಹೆ ಮೇರೆಗೆ ಮೊದಲ ಹಂತದಲ್ಲಿ 30 ಮಂದಿಗೆ ತರಬೇತಿ ನೀಡಲಾಗುತ್ತಿದೆ. ಎಲ್ಲರೂ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದು, ಜ. 24ರಂದು ತರಬೇತಿ ಅಂತ್ಯಗೊಳ್ಳಲಿದೆ’ ಎಂದು ‘ಎವೋಲ್ವ್ ಲೈವ್ಸ್ ಫೌಂಡೇಷನ್’ ಎನ್ಜಿಒ ಸಂಸ್ಥಾಪಕಿ ಒಟ್ಟಿಲೆ ಅನ್ಬನ್ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.