<p><strong>ಧಾರವಾಡ:</strong> ‘ಕಿತ್ತೂರು ಚನ್ನಮ್ಮ ಅವರನ್ನು ಬಂಧಿಸಿಟ್ಟ ಧಾರವಾಡದ ಜಿಲ್ಲಾಧಿಕಾರಿ ಕಚೇರಿಯನ್ನು ರಾಷ್ಟ್ರೀಯ ಸ್ಮಾರಕ ಸ್ಥಳವನ್ನಾಗಿ ಅಭಿವೃದ್ಧಿಪಡಿಸಬೇಕು’ ಎಂದು ಬೈಲೂರು ತೋಂಟದಾರ್ಯ ಮಠದ ನಿಜಗುಣಾನಂದ ಸ್ವಾಮೀಜಿ ಹೇಳಿದರು.</p>.<p>ಧಾರವಾಡ ರಂಗಾಯಣ ಸಿದ್ಧಪಡಿಸಿರುವ ವೀರರಾಣಿ ಕಿತ್ತೂರು ಚನ್ನಮ್ಮ ನಾಟಕದ 2ನೇ ದಿನದ ಪ್ರದರ್ಶನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.</p>.<p>‘ಸತ್ಯ ಹರಿಶ್ಚಂದ್ರ ನಾಟಕ ನೋಡಿದ ಗಾಂಧೀಜಿ ಅವರ ಬದುಕಿನ ದೃಷ್ಟಿಕೋನವೇ ಬದಲಾಯಿತು. ಹಾಗೆಯೇ ಚನ್ನಮ್ಮ ಅವರ ನಾಟಕವನ್ನು ನೋಡುವ ಮೂಲಕ ನಮ್ಮ ಯುವ ಸಮುದಾಯದ ಆದರ್ಶಗಳು ಇನ್ನಷ್ಟು ಬಲವಾಗಬೇಕು. ಎಲ್ಲರಲ್ಲೂ ದೇಶಾಭಿಮಾನದ ಛಲ ಮೂಡಬೇಕು’ ಎಂದರು.</p>.<p>‘ಇಂದಿನ ಅತ್ಯಾಧುನಿಕ ಯುಗದ ಎಲ್ಲಾ ತಂತ್ರಜ್ಞಾನಗಳನ್ನು ಬಳಸಿಕೊಂಡು ಈ ನಾಟಕ ಸಿದ್ಧಪಡಿಸಲಾಗಿದೆ. ಇದನ್ನು ಇತರ ಭಾಷೆಗಳಿಗೂ ಭಾಷಾಂತರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಬೇಕು. ಆ ಮೂಲಕ ಚನ್ನಮ್ಮ ಅವರ ಇತಿಹಾಸ ಇಡೀ ವಿಶ್ವವೇ ನೋಡುವಂತಾಗಬೇಕು’ ಎಂದರು.</p>.<p>ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಯಬಸವ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ‘ಛತ್ರಪತಿ ಶಿವಾಜಿ ಹಾಗೂ ಚನ್ನಮ್ಮರ ನಾಟಕಗಳು ಅಂದು ಸ್ವಾತಂತ್ರ್ಯ ಚಳವಳಿಗೆ ಯುವಕರನ್ನು ಪ್ರೇರೇಪಿಸಿದವು. ಇಂದು ರಂಗಾಯಣದ ಈ ಚನ್ನಮ್ಮ ನಾಟಕದ ಮೂಲಕ ನವಭಾರತದ ನಿರ್ಮಾಣ ಸಾಧ್ಯವಾಗಲಿದೆ’ ಎಂದರು.</p>.<p>‘ಚನ್ಮಮ್ಮ ಅವರ ಹೋರಾಟ ಇಡೀ ದೇಶಕ್ಕೇ ಮಾದರಿಯಾದರೂ, ಅವರ ಇತಿಹಾಸ ಹೆಚ್ಚು ಪ್ರಚಾರವಾಗದಂತೆ ವ್ಯವಸ್ಥಿತ ಸಂಚನ್ನು ಕೆಲವರು ರೂಪಿಸಿದರು. ಚನ್ನಮ್ಮನ ಇತಿಹಾಸ ಅರಿತರೆ ಕನ್ನಡಿಗರು ಸ್ವಾಭಿಮಾನಿಗಳಾಗುವ ಸಾಧ್ಯತೆ ಇದೆ ಎಂಬ ಆತಂಕ ಅವರಲ್ಲಿ ಕಾಡುತ್ತಿದೆ. ಹೀಗಾಗಿ ಈ ನಾಟಕವನ್ನು ಹೆಚ್ಚು ಪ್ರದರ್ಶಿಸುವ ಮೂಲಕ ಎಲ್ಲೆಡೆ ಚನ್ನಮ್ಮ ಅವರ ಹೋರಾಟದ ಇತಿಹಾಸವನ್ನು ಅರಿಯಲು ಸಾಧ್ಯ’ ಎಂದರು.</p>.<p>ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕ ಅರವಿಂದ ಬೆಲ್ಲದ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಧಾರವಾಡ:</strong> ‘ಕಿತ್ತೂರು ಚನ್ನಮ್ಮ ಅವರನ್ನು ಬಂಧಿಸಿಟ್ಟ ಧಾರವಾಡದ ಜಿಲ್ಲಾಧಿಕಾರಿ ಕಚೇರಿಯನ್ನು ರಾಷ್ಟ್ರೀಯ ಸ್ಮಾರಕ ಸ್ಥಳವನ್ನಾಗಿ ಅಭಿವೃದ್ಧಿಪಡಿಸಬೇಕು’ ಎಂದು ಬೈಲೂರು ತೋಂಟದಾರ್ಯ ಮಠದ ನಿಜಗುಣಾನಂದ ಸ್ವಾಮೀಜಿ ಹೇಳಿದರು.</p>.<p>ಧಾರವಾಡ ರಂಗಾಯಣ ಸಿದ್ಧಪಡಿಸಿರುವ ವೀರರಾಣಿ ಕಿತ್ತೂರು ಚನ್ನಮ್ಮ ನಾಟಕದ 2ನೇ ದಿನದ ಪ್ರದರ್ಶನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.</p>.<p>‘ಸತ್ಯ ಹರಿಶ್ಚಂದ್ರ ನಾಟಕ ನೋಡಿದ ಗಾಂಧೀಜಿ ಅವರ ಬದುಕಿನ ದೃಷ್ಟಿಕೋನವೇ ಬದಲಾಯಿತು. ಹಾಗೆಯೇ ಚನ್ನಮ್ಮ ಅವರ ನಾಟಕವನ್ನು ನೋಡುವ ಮೂಲಕ ನಮ್ಮ ಯುವ ಸಮುದಾಯದ ಆದರ್ಶಗಳು ಇನ್ನಷ್ಟು ಬಲವಾಗಬೇಕು. ಎಲ್ಲರಲ್ಲೂ ದೇಶಾಭಿಮಾನದ ಛಲ ಮೂಡಬೇಕು’ ಎಂದರು.</p>.<p>‘ಇಂದಿನ ಅತ್ಯಾಧುನಿಕ ಯುಗದ ಎಲ್ಲಾ ತಂತ್ರಜ್ಞಾನಗಳನ್ನು ಬಳಸಿಕೊಂಡು ಈ ನಾಟಕ ಸಿದ್ಧಪಡಿಸಲಾಗಿದೆ. ಇದನ್ನು ಇತರ ಭಾಷೆಗಳಿಗೂ ಭಾಷಾಂತರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಬೇಕು. ಆ ಮೂಲಕ ಚನ್ನಮ್ಮ ಅವರ ಇತಿಹಾಸ ಇಡೀ ವಿಶ್ವವೇ ನೋಡುವಂತಾಗಬೇಕು’ ಎಂದರು.</p>.<p>ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಯಬಸವ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ‘ಛತ್ರಪತಿ ಶಿವಾಜಿ ಹಾಗೂ ಚನ್ನಮ್ಮರ ನಾಟಕಗಳು ಅಂದು ಸ್ವಾತಂತ್ರ್ಯ ಚಳವಳಿಗೆ ಯುವಕರನ್ನು ಪ್ರೇರೇಪಿಸಿದವು. ಇಂದು ರಂಗಾಯಣದ ಈ ಚನ್ನಮ್ಮ ನಾಟಕದ ಮೂಲಕ ನವಭಾರತದ ನಿರ್ಮಾಣ ಸಾಧ್ಯವಾಗಲಿದೆ’ ಎಂದರು.</p>.<p>‘ಚನ್ಮಮ್ಮ ಅವರ ಹೋರಾಟ ಇಡೀ ದೇಶಕ್ಕೇ ಮಾದರಿಯಾದರೂ, ಅವರ ಇತಿಹಾಸ ಹೆಚ್ಚು ಪ್ರಚಾರವಾಗದಂತೆ ವ್ಯವಸ್ಥಿತ ಸಂಚನ್ನು ಕೆಲವರು ರೂಪಿಸಿದರು. ಚನ್ನಮ್ಮನ ಇತಿಹಾಸ ಅರಿತರೆ ಕನ್ನಡಿಗರು ಸ್ವಾಭಿಮಾನಿಗಳಾಗುವ ಸಾಧ್ಯತೆ ಇದೆ ಎಂಬ ಆತಂಕ ಅವರಲ್ಲಿ ಕಾಡುತ್ತಿದೆ. ಹೀಗಾಗಿ ಈ ನಾಟಕವನ್ನು ಹೆಚ್ಚು ಪ್ರದರ್ಶಿಸುವ ಮೂಲಕ ಎಲ್ಲೆಡೆ ಚನ್ನಮ್ಮ ಅವರ ಹೋರಾಟದ ಇತಿಹಾಸವನ್ನು ಅರಿಯಲು ಸಾಧ್ಯ’ ಎಂದರು.</p>.<p>ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕ ಅರವಿಂದ ಬೆಲ್ಲದ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>