ಜಿಲ್ಲೆಯಲ್ಲಿ ಜುಲೈ 13ರಂದು ಲೋಕ ಅದಾಲತ್ ಜಿಲ್ಲೆಯಲ್ಲಿ ಜುಲೈ 13ರಂದು ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದೆ. ಜಿಲ್ಲೆಯ ಕೋರ್ಟ್ಗಳಲ್ಲಿ ಬಾಕಿ ಇರುವ ಸಿವಿಲ್ ದಾವೆ, ಚೆಕ್ ಬೌನ್ಸ್ ಪ್ರಕರಣ, ಕೌಟುಂಬಿಕ ಪ್ರಕರಣ (ವಿವಾಹ ವಿಚ್ಛೇದನ ಹೊರತುಪಡಿಸಿ), ಅಪಘಾತ ಪ್ರಕರಣ, ಆಸ್ತಿ ಪಾಲು ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಬಹುದು ಎಂದು ತಿಳಿಸಿದರು.