<p><strong>ಹುಬ್ಬಳ್ಳಿ</strong>: ‘ತೆಲಂಗಾಣದ ವಾರಂಗಲ್ನಲ್ಲಿ 2012ರಲ್ಲಿ ಆರಂಭವಾದ ಮಾಂಗಳ್ಯ ಶಾಪಿಂಗ್ ಮಾಲ್ ತನ್ನ ವಹಿವಾಟನ್ನು ವಿಸ್ತರಿಸುತ್ತ ಇದೀಗ ಹುಬ್ಬಳ್ಳಿಯಲ್ಲಿ ನೂತನ ಮಳಿಗೆಯನ್ನು ಆರಂಭಿಸಿದೆ. ಶೀಘ್ರದಲ್ಲೇ ಬೆಳಗಾವಿಯಲ್ಲಿಯೂ ಶಾಖೆ ಆರಂಭಗೊಳ್ಳಲಿದೆ’ ಎಂದು ಮಾಲ್ನ ನಿರ್ದೇಶಕ ಕಾಸಂ ನಮಃಶಿವಾಯ ಹೇಳಿದರು.</p>.<p>ಇಲ್ಲಿನ ಗೋಕುಲ ರಸ್ತೆಯ ಹೊಸ ಬಸ್ ನಿಲ್ದಾಣದ ಬಳಿ ನಿರ್ಮಾಣಗೊಂಡ ಮಾಲ್ನ ಉದ್ಘಾಟನಾ ಸಮಾರಂಭದಲ್ಲಿ ಗುರುವಾರ ಅವರು ಮಾತನಾಡಿದರು.</p>.<p>‘ಮಾಲ್ನಲ್ಲಿ ಮಹಿಳೆಯರು, ಪುರುಷರು, ಯುವಜನರು ಹಾಗೂ ಮಕ್ಕಳ ಅಭಿರುಚಿಗೆ ತಕ್ಕಂತೆ ಆಧುನಿಕ ವಸ್ತ್ರ ಸಂಗ್ರಹ, ಮದುವೆ ಮತ್ತು ಶುಭಕಾರ್ಯಗಳಿಗೆ ವಿಶೇಷ ಸಂಗ್ರಹ ಇದೆ. ಸ್ಥಳೀಯ 250 ಜನರಿಗೆ ಉದ್ಯೋಗ ನೀಡಿದ್ದು, ಒಟ್ಟಾರೆ 10 ಸಾವಿರ ಉದ್ಯೋಗ ಸೃಷ್ಟಿಸಲಾಗಿದೆ’ ಎಂದರು.</p>.<p>ಮಳಿಗೆ ಉದ್ಘಾಟಿಸಿದ ನಟಿ ರುಕ್ಮಿಣಿ ವಸಂತ್, ‘ಶಾಂಪಿಗ್ ಪ್ರಿಯರಿಗೆ ‘ಮಾಂಗಳ್ಯ’ ಹೇಳಿ ಮಾಡಿಸಿದಂತಿದೆ. ಕಡಿಮೆ ದರದಲ್ಲಿ ಗುಣಮಟ್ಟದ ಬಟ್ಟೆಗಳು ಲಭ್ಯವಿವೆ’ ಎಂದರು. ಬಳಿಕ, ಮಳಿಗೆಯನ್ನು ವೀಕ್ಷಿಸಿ, ಅಭಿಮಾನಿಗಳೊಂದಿಗೆ ಸಂಭ್ರಮಿಸಿದರು.</p>.<p>‘ಹುಬ್ಬಳ್ಳಿಯ ಜನತೆ ಎಲ್ಲರನ್ನೂ ಬರಮಾಡಿಕೊಳ್ಳುತ್ತಾರೆ. ಬಟ್ಟೆ– ಆಭರಣ ಖರೀದಿಗೆ ವಿಶೇಷ ಸಂದರ್ಭ ಬೇಕಿಲ್ಲ. ಹೀಗಾಗಿ ಜನರು ಮಾಂಗಳ್ಯ ಶಾಪಿಂಗ್ ಮಳಿಗೆಗೆ ಭೇಟಿ ನೀಡಬೇಕು’ ಎಂದು ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗಿಂದ್ರ ಸ್ವಾಮೀಜಿ ಹೇಳಿದರು.</p>.<p>ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್, ಡಿಸಿಪಿ ಮಹಾನಿಂಗ ನಂದಗಾವಿ, ಉದ್ಯಮಿ ವಸಂತ ಲದ್ವಾ, ಕಾಂಗ್ರೆಸ್ ಮುಖಂಡ ರಾಜಶೇಖರ ಮೆಣಸಿನಕಾಯಿ, ಬಾಬಾಜಾನ್ ಮುಧೋಳ, ಮಾಲ್ನ ನಿರ್ದೇಶಕರಾದ ಪುಲ್ಲೂರು ನರಸಿಂಹಮೂರ್ತಿ, ಕಾಸಂ ಮಲ್ಲಿಕಾರ್ಜುನ, ಕಾಸಂ ಕೇದಾರನಾಥ್, ಕಾಸಂ ಶಿವಪ್ರಸಾದ್, ಪುಲ್ಲೂರು ಅರುಣ ಕುಮಾರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ</strong>: ‘ತೆಲಂಗಾಣದ ವಾರಂಗಲ್ನಲ್ಲಿ 2012ರಲ್ಲಿ ಆರಂಭವಾದ ಮಾಂಗಳ್ಯ ಶಾಪಿಂಗ್ ಮಾಲ್ ತನ್ನ ವಹಿವಾಟನ್ನು ವಿಸ್ತರಿಸುತ್ತ ಇದೀಗ ಹುಬ್ಬಳ್ಳಿಯಲ್ಲಿ ನೂತನ ಮಳಿಗೆಯನ್ನು ಆರಂಭಿಸಿದೆ. ಶೀಘ್ರದಲ್ಲೇ ಬೆಳಗಾವಿಯಲ್ಲಿಯೂ ಶಾಖೆ ಆರಂಭಗೊಳ್ಳಲಿದೆ’ ಎಂದು ಮಾಲ್ನ ನಿರ್ದೇಶಕ ಕಾಸಂ ನಮಃಶಿವಾಯ ಹೇಳಿದರು.</p>.<p>ಇಲ್ಲಿನ ಗೋಕುಲ ರಸ್ತೆಯ ಹೊಸ ಬಸ್ ನಿಲ್ದಾಣದ ಬಳಿ ನಿರ್ಮಾಣಗೊಂಡ ಮಾಲ್ನ ಉದ್ಘಾಟನಾ ಸಮಾರಂಭದಲ್ಲಿ ಗುರುವಾರ ಅವರು ಮಾತನಾಡಿದರು.</p>.<p>‘ಮಾಲ್ನಲ್ಲಿ ಮಹಿಳೆಯರು, ಪುರುಷರು, ಯುವಜನರು ಹಾಗೂ ಮಕ್ಕಳ ಅಭಿರುಚಿಗೆ ತಕ್ಕಂತೆ ಆಧುನಿಕ ವಸ್ತ್ರ ಸಂಗ್ರಹ, ಮದುವೆ ಮತ್ತು ಶುಭಕಾರ್ಯಗಳಿಗೆ ವಿಶೇಷ ಸಂಗ್ರಹ ಇದೆ. ಸ್ಥಳೀಯ 250 ಜನರಿಗೆ ಉದ್ಯೋಗ ನೀಡಿದ್ದು, ಒಟ್ಟಾರೆ 10 ಸಾವಿರ ಉದ್ಯೋಗ ಸೃಷ್ಟಿಸಲಾಗಿದೆ’ ಎಂದರು.</p>.<p>ಮಳಿಗೆ ಉದ್ಘಾಟಿಸಿದ ನಟಿ ರುಕ್ಮಿಣಿ ವಸಂತ್, ‘ಶಾಂಪಿಗ್ ಪ್ರಿಯರಿಗೆ ‘ಮಾಂಗಳ್ಯ’ ಹೇಳಿ ಮಾಡಿಸಿದಂತಿದೆ. ಕಡಿಮೆ ದರದಲ್ಲಿ ಗುಣಮಟ್ಟದ ಬಟ್ಟೆಗಳು ಲಭ್ಯವಿವೆ’ ಎಂದರು. ಬಳಿಕ, ಮಳಿಗೆಯನ್ನು ವೀಕ್ಷಿಸಿ, ಅಭಿಮಾನಿಗಳೊಂದಿಗೆ ಸಂಭ್ರಮಿಸಿದರು.</p>.<p>‘ಹುಬ್ಬಳ್ಳಿಯ ಜನತೆ ಎಲ್ಲರನ್ನೂ ಬರಮಾಡಿಕೊಳ್ಳುತ್ತಾರೆ. ಬಟ್ಟೆ– ಆಭರಣ ಖರೀದಿಗೆ ವಿಶೇಷ ಸಂದರ್ಭ ಬೇಕಿಲ್ಲ. ಹೀಗಾಗಿ ಜನರು ಮಾಂಗಳ್ಯ ಶಾಪಿಂಗ್ ಮಳಿಗೆಗೆ ಭೇಟಿ ನೀಡಬೇಕು’ ಎಂದು ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗಿಂದ್ರ ಸ್ವಾಮೀಜಿ ಹೇಳಿದರು.</p>.<p>ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್, ಡಿಸಿಪಿ ಮಹಾನಿಂಗ ನಂದಗಾವಿ, ಉದ್ಯಮಿ ವಸಂತ ಲದ್ವಾ, ಕಾಂಗ್ರೆಸ್ ಮುಖಂಡ ರಾಜಶೇಖರ ಮೆಣಸಿನಕಾಯಿ, ಬಾಬಾಜಾನ್ ಮುಧೋಳ, ಮಾಲ್ನ ನಿರ್ದೇಶಕರಾದ ಪುಲ್ಲೂರು ನರಸಿಂಹಮೂರ್ತಿ, ಕಾಸಂ ಮಲ್ಲಿಕಾರ್ಜುನ, ಕಾಸಂ ಕೇದಾರನಾಥ್, ಕಾಸಂ ಶಿವಪ್ರಸಾದ್, ಪುಲ್ಲೂರು ಅರುಣ ಕುಮಾರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>