ಹುಬ್ಬಳ್ಳಿಯಲ್ಲಿ ಜಿಟಿ, ಜಿಟಿ ಮಳೆ

ಹುಬ್ಬಳ್ಳಿ: ನಗರದಲ್ಲಿ ಶುಕ್ರವಾರ ಬೆಳಿಗ್ಗೆಯಿಂದ ಮೋಡಕವಿದ ವಾತಾವರಣವಿದ್ದು, ಮಧ್ಯಾಹ್ನ ಕೆಲ ಹೊತ್ತು ಜಿಟಿ ಜಿಟಿ ಮಳೆ ಸುರಿಯಿತು.
ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು ರೈತರು ಮುಂಗಾರು ಹಂಗಾಮಿಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ರಸಗೊಬ್ಬರ ಖರೀದಿಗಾಗಿ ಕಾಟನ್ ಮಾರ್ಕೆಟ್ನಲ್ಲಿ ಅಂಗಡಿಗಳ ಮುಂದೆ ಸರತಿ ಸಾಲಿನಲ್ಲಿ ನಿಂತಿದ್ದ ಚಿತ್ರಣ ಕಂಡುಬಂತು. ಗೊಬ್ಬರ ತರಲು ಹುಬ್ಬಳ್ಳಿ ತಾಲ್ಲೂಕಿನ ಸುತ್ತಮುತ್ತಲ ಗ್ರಾಮಗಳಿಂದ ಬಂದಿದ್ದ ರೈತರು, ಆಸ್ಪತ್ರೆಗೆ ಹೋಗುವವರು, ಅಗತ್ಯ ಸೇವೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರು ಮಳೆಯಲ್ಲಿ ತೋಯ್ದುಕೊಂಡೇ ಹೋದರು.
ಅಂತರ ಮರೆತರು: ಗೊಬ್ಬರ ಖರೀದಿಸಲು ಬಂದಿದ್ದ ರೈತರಲ್ಲಿ ಬಹಳಷ್ಟು ಜನರಲ್ಲಿ ಮಾಸ್ಕ್ ಇದ್ದರೂ ಅದನ್ನು ಸರಿಯಾಗಿ ಧರಿಸಿರಲಿಲ್ಲ. ಸರತಿ ಸಾಲಿನಲ್ಲಿ ನಿಂತಾಗ ಮಾಸ್ಕ್ ಧರಿಸದೇ ಸುಮ್ಮನಿದ್ದವರು; ತಮ್ಮ ಸರತಿ ಬರುತ್ತಿದ್ದಂತೆ ಮೂಗು ಹಾಗೂ ಬಾಯಿ ಪೂರ್ಣವಾಗಿ ಮುಚ್ಚುವಂತೆ ಮಾಸ್ಕ್ ಹಾಕುತ್ತಿದ್ದರು.
ಟೆಂಟ್ ಸೇರಿದರು: ಲಾಕ್ಡೌನ್ ಸಮಯದಲ್ಲಿ ಅನಗತ್ಯವಾಗಿ ಓಡಾಡುವವರನ್ನು ನಿಯಂತ್ರಣ ಮಾಡಲು ನಗರದ ಕಿತ್ತೂರು ರಾಣಿ ಚನ್ನಮ್ಮ ವೃತ್ತ, ಕೇಶ್ವಾಪುರ ವೃತ್ತ, ವಿದ್ಯಾನಗರ ಪೊಲೀಸ್ ಠಾಣೆ ಸಮೀಪ ಬ್ಯಾರಿಕೇಡ್ ಹಾಗೂ ಟೆಂಟ್ಗಳನ್ನು ಹಾಕಲಾಗಿದೆ. ಮಳೆಯಿಂದಾಗಿ ಪೊಲೀಸರು ಟೆಂಟ್ ಒಳಗೆ ಆಶ್ರಯ ಪಡೆದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.