<p><strong>ನವಲಗುಂದ:</strong> ಇಂದಿಗೂ ಎಲ್ಲರ ಮನಸ್ಸಿನಲ್ಲಿ ಉಳಿದಿರುವ ಅದ್ಭುತ ನಟ, ನಿರ್ದೇಶಕನಾಗಿದ್ದ ಶಂಕರನಾಗ ಅವರು ರಂಗಭೂಮಿಯಲ್ಲಿ ಬೆರಗು ಮೂಡಿಸುವ ಅನೇಕ ಪ್ರಯೋಗಗಳನ್ನು ಮಾಡಿದ್ದಾರೆ. ಅವರು ಸದಾ ಚೈತನ್ಯ ಚಿಲುಮೆಯಾಗಿದ್ದರು ಎಂದು ನವಲಗುಂದ ಪಿಎಸ್ಐ ಜನಾರ್ದನ ಭಟ್ರಳ್ಳಿ ಹೇಳಿದರು.</p>.<p>ಕನ್ನಡ ರಾಜ್ಯೋತ್ಸವ ಮತ್ತು ನಟ ಶಂಕರನಾಗ ಅವರ ಜನ್ಮದಿನದ ಅಂಗವಾಗಿ ಶ್ರೀ ಶಂಕರನಾಗ ಆಟೊ ಚಾಲಕರ ಕ್ಷೇಮಾಭಿವೃದ್ಧಿ ಸಂಘದಿಂದ ಪಟ್ಟಣದ ನೀಲಮ್ಮನ ಜಲಾಶಯ ಬಳಿ ಆಟೊ ರಿಕ್ಷಾ ಮೆರವಣಿಗೆಗೆ ಭಾನುವಾರ ಚಾಲನೆ ನೀಡಿ ಮಾತನಾಡಿದರು.</p>.<p>‘ಶಂಕರನಾಗ ಅವರಿಗೆ ಅಷ್ಟೇ ಆಯುಷ್ಯವನ್ನು ಭಗವಂತ ಕಲ್ಪಿಸಿದ್ದ. ಆದರೆ ಜನರಿಂದ ಅವರಿಗೆ ಸಿಕ್ಕ ಪ್ರೀತಿ, ಅಭಿಮಾನವನ್ನು ನೀವೆಲ್ಲರೂ ಇಂದೂ ನೋಡುತ್ತಿದ್ದೀರಿ’ ಎಂದರು</p>.<p>ಪಟ್ಟಣದ ಪ್ರಮುಖ ಬೀದಿಗಳಲ್ಲಿ ಆಟೊ ಮೆರವಣಿಗೆ ಸಂಚರಿಸಿ ಬಸ್ ನಿಲ್ದಾಣ ತಲುಪಿತು. ಬಸ್ ನಿಲ್ದಾಣದಲ್ಲಿ ಹುಬ್ಬಳ್ಳಿಯ ಕಣ್ಣಿನ ಆಸ್ಪತ್ರೆ ಸಿಬ್ಬಂದಿಯಾದ ಪವನ ಚಲವಾದಿ, ಉಷಾ ಆರ್.ಜೆ , ವಿನೋದ ನಾಗರಳ್ಳಿ ಅವರಿಂದ 107 ಜನರ ಉಚಿತ ಕಣ್ಣಿನ ತಪಾಸಣೆ ಜರುಗಿತು.</p>.<p>ಆಟೊ ಚಾಲಕ ಸಂಘದ ಅಧ್ಯಕ್ಷ ರವಿ ಹುಣಸೀಮರದ, ಉಪಾಧ್ಯಕ್ಷ ಮಂಜುನಾಥ ಸುಣಗಾರ, ಮುನ್ನಾ ಕಲಕುಟ್ರಿ , ಶರಣಪ್ಪ ದೊಡ್ಡಮನಿ, ಮಹೆಬೂಬಸಾಬ್ ಬುಕ್ಕಿಟಗಾರ, ರವಿ ಭೋವಿ, ನಿಂಗಪ್ಪ ಈಟಿ, ರಿಯಾಜ ಪಾಗಾ, ಸುರೇಶ ಈಟಿ, ಹನುಮಂತ ತೆಗ್ಗಿ, ರಿಯಾಜ ಕೊಟ್ಟೂರು, ಆನಂದ ಬೆಂಡಿಗೇರಿ, ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವಲಗುಂದ:</strong> ಇಂದಿಗೂ ಎಲ್ಲರ ಮನಸ್ಸಿನಲ್ಲಿ ಉಳಿದಿರುವ ಅದ್ಭುತ ನಟ, ನಿರ್ದೇಶಕನಾಗಿದ್ದ ಶಂಕರನಾಗ ಅವರು ರಂಗಭೂಮಿಯಲ್ಲಿ ಬೆರಗು ಮೂಡಿಸುವ ಅನೇಕ ಪ್ರಯೋಗಗಳನ್ನು ಮಾಡಿದ್ದಾರೆ. ಅವರು ಸದಾ ಚೈತನ್ಯ ಚಿಲುಮೆಯಾಗಿದ್ದರು ಎಂದು ನವಲಗುಂದ ಪಿಎಸ್ಐ ಜನಾರ್ದನ ಭಟ್ರಳ್ಳಿ ಹೇಳಿದರು.</p>.<p>ಕನ್ನಡ ರಾಜ್ಯೋತ್ಸವ ಮತ್ತು ನಟ ಶಂಕರನಾಗ ಅವರ ಜನ್ಮದಿನದ ಅಂಗವಾಗಿ ಶ್ರೀ ಶಂಕರನಾಗ ಆಟೊ ಚಾಲಕರ ಕ್ಷೇಮಾಭಿವೃದ್ಧಿ ಸಂಘದಿಂದ ಪಟ್ಟಣದ ನೀಲಮ್ಮನ ಜಲಾಶಯ ಬಳಿ ಆಟೊ ರಿಕ್ಷಾ ಮೆರವಣಿಗೆಗೆ ಭಾನುವಾರ ಚಾಲನೆ ನೀಡಿ ಮಾತನಾಡಿದರು.</p>.<p>‘ಶಂಕರನಾಗ ಅವರಿಗೆ ಅಷ್ಟೇ ಆಯುಷ್ಯವನ್ನು ಭಗವಂತ ಕಲ್ಪಿಸಿದ್ದ. ಆದರೆ ಜನರಿಂದ ಅವರಿಗೆ ಸಿಕ್ಕ ಪ್ರೀತಿ, ಅಭಿಮಾನವನ್ನು ನೀವೆಲ್ಲರೂ ಇಂದೂ ನೋಡುತ್ತಿದ್ದೀರಿ’ ಎಂದರು</p>.<p>ಪಟ್ಟಣದ ಪ್ರಮುಖ ಬೀದಿಗಳಲ್ಲಿ ಆಟೊ ಮೆರವಣಿಗೆ ಸಂಚರಿಸಿ ಬಸ್ ನಿಲ್ದಾಣ ತಲುಪಿತು. ಬಸ್ ನಿಲ್ದಾಣದಲ್ಲಿ ಹುಬ್ಬಳ್ಳಿಯ ಕಣ್ಣಿನ ಆಸ್ಪತ್ರೆ ಸಿಬ್ಬಂದಿಯಾದ ಪವನ ಚಲವಾದಿ, ಉಷಾ ಆರ್.ಜೆ , ವಿನೋದ ನಾಗರಳ್ಳಿ ಅವರಿಂದ 107 ಜನರ ಉಚಿತ ಕಣ್ಣಿನ ತಪಾಸಣೆ ಜರುಗಿತು.</p>.<p>ಆಟೊ ಚಾಲಕ ಸಂಘದ ಅಧ್ಯಕ್ಷ ರವಿ ಹುಣಸೀಮರದ, ಉಪಾಧ್ಯಕ್ಷ ಮಂಜುನಾಥ ಸುಣಗಾರ, ಮುನ್ನಾ ಕಲಕುಟ್ರಿ , ಶರಣಪ್ಪ ದೊಡ್ಡಮನಿ, ಮಹೆಬೂಬಸಾಬ್ ಬುಕ್ಕಿಟಗಾರ, ರವಿ ಭೋವಿ, ನಿಂಗಪ್ಪ ಈಟಿ, ರಿಯಾಜ ಪಾಗಾ, ಸುರೇಶ ಈಟಿ, ಹನುಮಂತ ತೆಗ್ಗಿ, ರಿಯಾಜ ಕೊಟ್ಟೂರು, ಆನಂದ ಬೆಂಡಿಗೇರಿ, ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>