ಶುಕ್ರವರ ನಡೆದಿದ್ದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಮಾತನಡಿದ್ದ ಜಿಲ್ಲಾಧಿಕಾರಿ ಡಾ. ಎಸ್.ಬಿ. ಬೊಮ್ಮನಹಳ್ಳಿ ಓಲಾ ಹಾಗೂ ಊಬರ್ ಕ್ಯಾಬ್ಗಳು ಒಂದು ವಾರದಲ್ಲಿ ಲಾಂಭನ ತೆರವುಗೊಳಿಸಬೇಕು. ಒಪ್ಪಂದದ ಮೇರೆಗೆ ಮಾತ್ರ ಹೊರಗಿನ ಸ್ಥಳಗಳಿಗೆ ಸಂಚರಿಸಬಹುದು ಎಂದು ಹೇಳಿದ್ದರು. ಈ ಬಗ್ಗೆ ನಗರದಲ್ಲಿ ತುರ್ತು ಸಭೆ ನಡೆಸಿದ ಕ್ಯಾಬ್ ಚಾಲಕರು, ಮಾಲೀಕರು ತೀವ್ರ ಆತಂಕ ವ್ಯಕ್ತಪಡಿಸಿದರು. ಕಳೆದ ನಾಲ್ಕು ವರ್ಷಗಳಿಂದ ಕ್ಯಾಬ್ ಸೇವೆ ನೀಡುತ್ತಿದ್ದೇವೆ. ಆದರೆ ಈಗ ದಿಢೀರ್ ಎಂದು ನಿರ್ಬಂಧ ವಿಧಿಸಿರುವುದು ಆಘಾತ ಉಂಟು ಮಾಡಿದೆ ಎಂದರು.