ಧಾರವಾಡ ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್ ಕ್ಷೀರಸಾಗರ ‘ಚಿರತೆ ಕಾಣಿಸಿಕೊಂಡಿದೆ ಎನ್ನುವ ಸುದ್ದಿಯ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲಾಗಿದೆ. ಬೆಳಗಿನ ಜಾವ ಹಾಗೂ ಸಂಜೆಯಾದ ಬಳಿಕ ಬೆಟ್ಟದ ಬಳಿ ಹೋಗಬಾರದು ಎಂದು ತಿಳಿಸಲಾಗಿದೆ. ಕಪ್ಪತಗುಡ್ಡದಿಂದ ಕ್ಯಾಮೆರಾ ಟ್ರ್ಯಾಪ್ಗಳನ್ನು ತಂದು ಇಲ್ಲಿನ ಮರಗಳ ಮೇಲೆ ಅಳವಡಿಸಿ ಚಿರತೆ ಇರುವಿಕೆ ಬಗ್ಗೆ ಖಚಿತಪಡಿಸಿಕೊಳ್ಳಲಾಗುವುದು. ಕ್ಯಾಮೆರಾ ಅಳವಡಿಸಿದರೆ ಒಂದು ದಿನದಲ್ಲಿ ಈ ಕುರಿತು ನಮಗೆ ಖಚಿತತೆ ಸಿಗುತ್ತದೆ. ಇಲ್ಲವಾದರೆ ಬೋನು ಅಳವಡಿಸಲಾಗುವುದು. ನಮ್ಮ ತಂಡ ಮೂರ್ನಾಲ್ಕು ದಿನ ಕಾರ್ಯಾಚರಣೆ ನಡೆಸಲಿದೆ’ ಎಂದು ತಿಳಿಸಿದರು.