ಧಾರವಾಡ: ‘ಪ್ರಜಾವಾಣಿ’ ಅಮೃತ ಮಹೋತ್ಸವದ ಸಂದರ್ಭದಲ್ಲಿ ಸ್ವರಭಾಸ್ಕರ ಪಂಡಿತ್ ಭೀಮಸೇನ ಜೋಶಿ ಅವರ ಪುಣ್ಯತಿಥಿ ಅಂಗವಾಗಿ ಆಯೋಜಿಸಿರುವ 'ಸ್ವರ ಗಂಧರ್ವ' ಕಾರ್ಯಕ್ರಮದಲ್ಲಿ ವಿದುಷಿ ಸಾವನಿ ಶೇಂಡೆ ಗಾಯನ ಜನಮನ ಸೂರೆಗೊಂಡಿತು.
ನಗರದ ಸೃಜನಾ ರಂಗಮಂದಿರದಲ್ಲಿ ಭಾರತೀಯ ಸಂಗೀತ ವಿದ್ಯಾಲಯವು 'ಪ್ರಜಾವಾಣಿ' ಹುಬ್ಬಳ್ಳಿಯ ಬಿಡಿಕೆ ಸ್ಟೀಮ್ಸ್ ಲಿಮಿಟೆಡ್, ಸ್ವರ್ಣಾ ಗ್ರೂಪ್, ಎಂ.ಎಂ. ಜೋಶಿ ನೇತ್ರ ಸಂಸ್ಥೆ, ಪ್ರಶಾಂತ ನರ್ಸಿಂಗ್ ಹೋಂ, ಕೆವಿಜಿ ಬ್ಯಾಂಕ್ ಸಹಯೋಗದಲ್ಲಿ ಈ ಕಾರ್ಯಕ್ರಮ ಆಯೋಜಿಸಿದೆ.