ಧಾರವಾಡ: ಐಐಟಿ ಧಾರವಾಡದ ಮೊದಲ ಹಾಗೂ ಎರಡನೇ ಘಟಿಕೋತ್ಸವದಲ್ಲಿ ಗಣಕವಿಜ್ಞಾನ ವಿಭಾಗದಲ್ಲಿ ಉತ್ತಮ ಸಾಧನೆ ಮಾಡಿದ ಚಾರು ಅಗರ್ವಾಲ್ ಹಾಗೂ ಪ್ರತೀಕ್ ಜೈನ್ ಅವರಿಗೆ ಬಿಟೆಕ್ ಪದವಿಯೊಂದಿಗೆ ರಾಷ್ಟ್ರಪತಿ ಪದಕವನ್ನು ಬುಧವಾರ ಪ್ರದಾನ ಮಾಡಲಾಯಿತು.
2016ರಲ್ಲಿ ಅರಂಭವಾದ ಐಐಟಿ ಧಾರವಾಡದ ಮೊದಲ ಘಟಿಕೋತ್ಸವ ಕೋವಿಡ್ ಕಾರಣದಿಂದ ಮುಂದೂಡಲಾಗಿತ್ತು. ಈ ಬಾರಿ ಎರಡೂಘಟಿಕೋತ್ಸವಗಳನ್ನು ಆನ್ಲೈನ್ ವೇದಿಕೆಯಲ್ಲಿ ನೆರವೇರಿದವು.