<p>ಹುಬ್ಬಳ್ಳಿ: ‘ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮುನ್ನ ಇಲಾಖೆಗಳ ಮಧ್ಯೆ ಸಮನ್ವಯ ಸಾಧಿಸಿದರೆ ಸರ್ಕಾರಿ ಯೋಜನೆಗಳು ಜನರಿಗೆ ಸಮರ್ಪಕವಾಗಿ ತಲುಪಲು ಸಾಧ್ಯ’ ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.</p>.<p>ಹಳೇ ಹುಬ್ಬಳಿಯ ವಾರ್ಡ್ ಸಂಖ್ಯೆ 72ರ ಕಟಗರ ಓಣಿ ಹಾಗೂ ಕರ್ಜಗಿ ಓಣಿಯಲ್ಲಿ 15ನೇ ಹಣಕಾಸು ಯೋಜನೆಯ ಅನುದಾನದಲ್ಲಿ ಒಳರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.</p>.<p>‘ಇಲಾಖೆಗಳ ಮಧ್ಯೆ ಸಮನ್ವಯದ ಕೊರತೆಯಿಂದ ಅಭಿವೃದ್ಧಿ ಕಾರ್ಯಗಳು ಗುಣಮಟ್ಟ ಕಳೆದುಕೊಳ್ಳುತ್ತಿವೆ. ಅದರಲ್ಲೂ ಸಿ.ಸಿ. ರಸ್ತೆ, ಒಳಚರಂಡಿ, ಪೈಪ್ಲೈನ್ ಕಾಮಗಾರಿ ಕೈಗೊಳ್ಳುವ ಮುನ್ನ ಪೂರ್ವಸಿದ್ಧತೆ, ಸಮನ್ವಯ ಅತ್ಯಗತ್ಯ’ ಎಂದು ಹೇಳಿದರು.</p>.<p>‘24/7 ನೀರು ಸರಬರಾಜು ಯೋಜನೆಗಾಗಿ ರಸ್ತೆಗಳನ್ನು ಎಲೆಂದರಲ್ಲಿ ಅಗೆದು ಕ್ಷೇತ್ರದಲ್ಲಿ ರಸ್ತೆಗಳ ಗುಣಮಟ್ಟ ಕೆಟ್ಟಿದೆ. ಈ ರೀತಿ ಮುಂದುವರಿದರೆ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದು ಅಧಿಕಾರಿಗಳನ್ನು ಎಚ್ಚರಿಸಿದರು.</p>.<p>‘ಒಳಚರಂಡಿ ಕಾಮಗಾರಿಗೆ ₹40 ಕೋಟಿ ಹಾಗೂ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ₹100 ಕೋಟಿ ಅನುದಾನ ಶೀಘ್ರ ಮಂಜೂರು ಆಗಲಿದೆ’ ಎಂದರು.</p>.<p>ಮಹಾನಗರ ಪಾಲಿಕೆ ಸದಸ್ಯ ಲೋಕೇಕ್ ಗುಂಜಾಳ, ಆರೀಫ್ ದೊಡ್ಡಮನಿ, ಮುಖಂಡರಾದ ಖಾದರಅಲಿ ಜಮಾದಾರ, ಬಾಬಾ ಧಾರವಾಡ, ಸೈಯ್ಯದಅಲಿ ಮುಲ್ಲಾ, ಮುಸ್ತಾಕ ಅತ್ತಾರ, ಅಧಿಕಾರಿಗಳಾದ ಬ್ರಹ್ಮಲಿಂಗೇಶ್ವರ, ಹುಳಿಗಾಶಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹುಬ್ಬಳ್ಳಿ: ‘ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮುನ್ನ ಇಲಾಖೆಗಳ ಮಧ್ಯೆ ಸಮನ್ವಯ ಸಾಧಿಸಿದರೆ ಸರ್ಕಾರಿ ಯೋಜನೆಗಳು ಜನರಿಗೆ ಸಮರ್ಪಕವಾಗಿ ತಲುಪಲು ಸಾಧ್ಯ’ ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.</p>.<p>ಹಳೇ ಹುಬ್ಬಳಿಯ ವಾರ್ಡ್ ಸಂಖ್ಯೆ 72ರ ಕಟಗರ ಓಣಿ ಹಾಗೂ ಕರ್ಜಗಿ ಓಣಿಯಲ್ಲಿ 15ನೇ ಹಣಕಾಸು ಯೋಜನೆಯ ಅನುದಾನದಲ್ಲಿ ಒಳರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.</p>.<p>‘ಇಲಾಖೆಗಳ ಮಧ್ಯೆ ಸಮನ್ವಯದ ಕೊರತೆಯಿಂದ ಅಭಿವೃದ್ಧಿ ಕಾರ್ಯಗಳು ಗುಣಮಟ್ಟ ಕಳೆದುಕೊಳ್ಳುತ್ತಿವೆ. ಅದರಲ್ಲೂ ಸಿ.ಸಿ. ರಸ್ತೆ, ಒಳಚರಂಡಿ, ಪೈಪ್ಲೈನ್ ಕಾಮಗಾರಿ ಕೈಗೊಳ್ಳುವ ಮುನ್ನ ಪೂರ್ವಸಿದ್ಧತೆ, ಸಮನ್ವಯ ಅತ್ಯಗತ್ಯ’ ಎಂದು ಹೇಳಿದರು.</p>.<p>‘24/7 ನೀರು ಸರಬರಾಜು ಯೋಜನೆಗಾಗಿ ರಸ್ತೆಗಳನ್ನು ಎಲೆಂದರಲ್ಲಿ ಅಗೆದು ಕ್ಷೇತ್ರದಲ್ಲಿ ರಸ್ತೆಗಳ ಗುಣಮಟ್ಟ ಕೆಟ್ಟಿದೆ. ಈ ರೀತಿ ಮುಂದುವರಿದರೆ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದು ಅಧಿಕಾರಿಗಳನ್ನು ಎಚ್ಚರಿಸಿದರು.</p>.<p>‘ಒಳಚರಂಡಿ ಕಾಮಗಾರಿಗೆ ₹40 ಕೋಟಿ ಹಾಗೂ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ₹100 ಕೋಟಿ ಅನುದಾನ ಶೀಘ್ರ ಮಂಜೂರು ಆಗಲಿದೆ’ ಎಂದರು.</p>.<p>ಮಹಾನಗರ ಪಾಲಿಕೆ ಸದಸ್ಯ ಲೋಕೇಕ್ ಗುಂಜಾಳ, ಆರೀಫ್ ದೊಡ್ಡಮನಿ, ಮುಖಂಡರಾದ ಖಾದರಅಲಿ ಜಮಾದಾರ, ಬಾಬಾ ಧಾರವಾಡ, ಸೈಯ್ಯದಅಲಿ ಮುಲ್ಲಾ, ಮುಸ್ತಾಕ ಅತ್ತಾರ, ಅಧಿಕಾರಿಗಳಾದ ಬ್ರಹ್ಮಲಿಂಗೇಶ್ವರ, ಹುಳಿಗಾಶಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>