ಇದೊಂದು ಪೂರ್ವ ನಿಯೋಜಿತ ಕೃತ್ಯ. ರಜಾಕ್ ಅಕಾಡೆಮಿ ಮತ್ತು ರೀಬಿಲ್ಟ್ ಬಾಬರ್ ಮಸೀದಿ ಸಂಘಟನೆ ಮಾಡಿಕೊಂಡಿದ್ದಾರೆ. ನಗರದ ಎಲ್ಲ ಭಾಗಗಳಿಂದ ಜನರು ಗಲಭೆಗೆ ಬಂದಿದ್ದಾರೆ. ಒಂದು ಗಲಾಟೆಗೆ ಎಲ್ಲರೂ ಹೆದರುವುದು ಏಕೆ. ಗಲಭೆಯಲ್ಲಿದ್ದ ಸಾವಿರಕ್ಕೂ ಹೆಚ್ಚು ಜನರ ಬಂಧನ ಆಗಬೇಕು. ಬೇಕಿದ್ದರೆ ನಾವೇ ಹೆಸರು ಕೊಡುತ್ತೇವೆ. ಪೊಲೀಸರು ರಿಸ್ಕ್ ತೆಗೆದುಕೊಂಡು ಕಂಟ್ರೋಲ್ ಮಾಡಿದ್ದಾರೆ. ಅವರಿಗೆ ಅಭಿನಂದನೆಗಳು. ಮತ್ತೊಂದು ಕೆ.ಜಿ., ಡಿ.ಜಿ. ಹಳ್ಳಿ ರೀತಿಯ ಗಲಭೆಯನ್ನು ಪೊಲೀಸರು ತಪ್ಪಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.