<p><strong>ಹುಬ್ಬಳ್ಳಿ: </strong>ಉತ್ತರ ಕರ್ನಾಟಕದ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ಮತ್ತು ರಸ್ತೆಗಳನ್ನು ಮೇಲ್ದರ್ಜೆಗೆ ಏರಿಸಲು₹21 ಸಾವಿರ ಕೋಟಿ ಅನುದಾನ ನೀಡಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಘೋಷಿಸಿದರು.</p>.<p>ನಗರದ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಫ್ಲೈ ಓವರ್ ನಿರ್ಮಾಣ ಮತ್ತು ಕಲಘಟಗಿ ತಾಲ್ಲೂಕಿನ ದಾಸ್ತಿಕೊಪ್ಪದ ರಾಷ್ಟ್ರೀಯ ಹೆದ್ದಾರಿ 63ರ ಮೇಲೆ ಚತುಷ್ಪಥ ರಸ್ತೆ ಮತ್ತು ಸಣ್ಣ ಸೇತುವೆ ನಿರ್ಮಾಣ ಕಾಮಗಾರಿಗಳಿಗೆ ವರ್ಚುವಲ್ ಮೂಲಕ ಅವರು ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.</p>.<p>’ಹುಬ್ಬಳ್ಳಿ–ಧಾರವಾಡ ಚತುಷ್ಪಥ ಬೈ ಪಾಸ್ ಕಾಮಗಾರಿಗೆ ₹1,200 ಕೋಟಿ, ಬೆಳಗಾವಿ ರಿಂಗ್ ರೋಡ್ (₹2,800 ಕೋಟಿ), ಬೆಳಗಾವಿ–ಹುನಗುಂದ–ರಾಯಚೂರುಚತುಷ್ಪಥ ರಸ್ತೆಗೆ (₹12,500 ಕೋಟಿ), ಹಾವೇರಿಯಿಂದ ಶಿರಸಿ ಮೂಲಕ ಯಾಕುಂಬಿ ದ್ವಿಪಥ ಮಾರ್ಗಕ್ಕೆ (₹2,000 ಕೋಟಿ), ಅಮೀನಗಡ–ಭಾನಾಪುರ ದ್ವಿಪಥ ಕಾಮಗಾರಿಗೆ (₹400 ಕೋಟಿ), ನಿಪ್ಪಾಣಿಯಿಂದ ಚಿಕ್ಕೋಡಿಗೆ ದ್ವಿಪಥ(₹145 ಕೋಟಿ), ಬೀದರ್ನಿಂದ ತೆಲಂಗಾಣ ಗಡಿತನಕ ದ್ವಿಪಥ (₹120 ಕೋಟಿ), ಸಂಕೇಶ್ವರದಿಂದ ಮುರ್ಗುಂಡಿ (₹550 ಕೋಟಿ) ಸೇರಿದಂತೆ ಒಟ್ಟು 13 ಯೋಜನೆಗಳಿಗೆ ಅನುದಾನ ನೀಡಲಾಗಿದೆ. 874 ಕಿ.ಮೀ. ರಸ್ತೆ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು. ಸಂಚಾರ ದಟ್ಟಣೆ ಕಡಿಮೆ ಮಾಡಲು ಬೆಂಗಳೂರಿನಲ್ಲಿ ಇನ್ನೊಂದು ರಿಂಗ್ ರೋಡ್ ನಿರ್ಮಿಸಲಾಗುವುದು ಎಂದೂ ಹೇಳಿದರು.</p>.<p>ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯಗಳಿಗೆ ಸುಲಭವಾಗಿ ಸಂಪರ್ಕ ಕಲ್ಪಿಸಲು ಈ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ: </strong>ಉತ್ತರ ಕರ್ನಾಟಕದ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ಮತ್ತು ರಸ್ತೆಗಳನ್ನು ಮೇಲ್ದರ್ಜೆಗೆ ಏರಿಸಲು₹21 ಸಾವಿರ ಕೋಟಿ ಅನುದಾನ ನೀಡಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಘೋಷಿಸಿದರು.</p>.<p>ನಗರದ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಫ್ಲೈ ಓವರ್ ನಿರ್ಮಾಣ ಮತ್ತು ಕಲಘಟಗಿ ತಾಲ್ಲೂಕಿನ ದಾಸ್ತಿಕೊಪ್ಪದ ರಾಷ್ಟ್ರೀಯ ಹೆದ್ದಾರಿ 63ರ ಮೇಲೆ ಚತುಷ್ಪಥ ರಸ್ತೆ ಮತ್ತು ಸಣ್ಣ ಸೇತುವೆ ನಿರ್ಮಾಣ ಕಾಮಗಾರಿಗಳಿಗೆ ವರ್ಚುವಲ್ ಮೂಲಕ ಅವರು ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.</p>.<p>’ಹುಬ್ಬಳ್ಳಿ–ಧಾರವಾಡ ಚತುಷ್ಪಥ ಬೈ ಪಾಸ್ ಕಾಮಗಾರಿಗೆ ₹1,200 ಕೋಟಿ, ಬೆಳಗಾವಿ ರಿಂಗ್ ರೋಡ್ (₹2,800 ಕೋಟಿ), ಬೆಳಗಾವಿ–ಹುನಗುಂದ–ರಾಯಚೂರುಚತುಷ್ಪಥ ರಸ್ತೆಗೆ (₹12,500 ಕೋಟಿ), ಹಾವೇರಿಯಿಂದ ಶಿರಸಿ ಮೂಲಕ ಯಾಕುಂಬಿ ದ್ವಿಪಥ ಮಾರ್ಗಕ್ಕೆ (₹2,000 ಕೋಟಿ), ಅಮೀನಗಡ–ಭಾನಾಪುರ ದ್ವಿಪಥ ಕಾಮಗಾರಿಗೆ (₹400 ಕೋಟಿ), ನಿಪ್ಪಾಣಿಯಿಂದ ಚಿಕ್ಕೋಡಿಗೆ ದ್ವಿಪಥ(₹145 ಕೋಟಿ), ಬೀದರ್ನಿಂದ ತೆಲಂಗಾಣ ಗಡಿತನಕ ದ್ವಿಪಥ (₹120 ಕೋಟಿ), ಸಂಕೇಶ್ವರದಿಂದ ಮುರ್ಗುಂಡಿ (₹550 ಕೋಟಿ) ಸೇರಿದಂತೆ ಒಟ್ಟು 13 ಯೋಜನೆಗಳಿಗೆ ಅನುದಾನ ನೀಡಲಾಗಿದೆ. 874 ಕಿ.ಮೀ. ರಸ್ತೆ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು. ಸಂಚಾರ ದಟ್ಟಣೆ ಕಡಿಮೆ ಮಾಡಲು ಬೆಂಗಳೂರಿನಲ್ಲಿ ಇನ್ನೊಂದು ರಿಂಗ್ ರೋಡ್ ನಿರ್ಮಿಸಲಾಗುವುದು ಎಂದೂ ಹೇಳಿದರು.</p>.<p>ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯಗಳಿಗೆ ಸುಲಭವಾಗಿ ಸಂಪರ್ಕ ಕಲ್ಪಿಸಲು ಈ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>