<p><strong>ಧಾರವಾಡ:</strong> ತಾಲ್ಲೂಕಿನ ಕೋಟೂರ, ದುಬ್ಬನಮರಡಿ, ಅಗಸನಹಳ್ಳಿ ಹಾಗೂ ತಡಕೋಡ ಸಂಪರ್ಕ ರಸ್ತೆ ಹದೆಗೆಟ್ಟಿದೆ. ಗುಂಡಿಮಯ ರಸ್ತೆಯಿಂದಾಗಿ ಸಾರ್ವಜನಿಕರು ಸಂಚರಿಸಲು ತೊಂದರೆ ಅನುಭವಿಸುತ್ತಿದ್ದಾರೆ. </p>.<p>ರಸ್ತೆ ಹಾಳಾಗಿ ಹಲವು ತಿಂಗಳಾಗಿದೆ. ಕೆಲವೆಡೆ ಚಿಕ್ಕ ಮತ್ತು ಕೆಲವೆಡೆ ದೊಡ್ಡ ಗುಂಡಿಗಳಾಗಿ, ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಜಲ್ಲಿಕಲ್ಲು, ಮಣ್ಣಿನ ಸುಮಾರು 5 ಕಿ.ಮೀ ಕಚ್ಚಾ ರಸ್ತೆಯನ್ನು ಕ್ರಮಿಸಲು 20 ರಿಂದ 30 ನಿಮಿಷ ಹಿಡಿಯತ್ತಿದೆ. </p>.<p>ಕಾರು, ಟ್ರ್ಯಾಕ್ಟರ್, ಟಿಪ್ಪರ್, ಬೈಕ್, ಚಕ್ಕಡಿ ಸೇರಿದಂತೆ ಇತರ ವಾಹಗಳು ಈ ರಸ್ತೆಯಲ್ಲಿ ಸಂಚರಿಸುತ್ತವೆ. ಈಚೆಗೆ ಸುರಿದ ಮಳೆಗೆ ರಸ್ತೆಯ ಡಾಂಬರು ಕಿತ್ತುಹೋಗಿದೆ. ಮಳೆಯಾದಾಗ ರಸ್ತೆಯ ಗುಂಡಿಗಳಲ್ಲಿ ನೀರು ನಿಲ್ಲುತ್ತದೆ. ಚಾಲಕರು, ವಾಹನ ಸವಾರರು ಅಪಾಯ ಭೀತಿಯಲ್ಲಿ ಸಂಚರಿಸುವಂತಾಗಿದೆ. </p>.<p>ಬೆಳವಡಿ, ಬುಡರಕಟ್ಟಿ, ಖಾನಾಪುರ, ತಡಕೋಡ, ದುಬ್ಬನಮರಡಿ, ಅಗಸನಹಳ್ಳಿ, ಗರಗ ಸಹಿತ ಈ ಭಾಗದ ವಿವಿಧ ಹಳ್ಳಿಗಳ ಜನರು ಬೇಲೂರು ಕೈಗಾರಿಕಾ ಪ್ರದೇಶದ ಕಂಪನಿಗಳಿಗೆ ಇದೇ ರಸ್ತೆ ಮಾರ್ಗವಾಗಿ ಸಂಚರಿಸುತ್ತಾರೆ. ಕೆಲವರು ರಾತ್ರಿ ವೇಳೆಯಲ್ಲಿ ಓಡಾಡುವಾಗ ರಸ್ತೆಯಲ್ಲಿ ಬಿದ್ದು ಗಾಯಗೊಂಡ ನಿದರ್ಶನಗಳು ಇವೆ. ಜಲ್ಲಿಕಲ್ಲಿನ ಈ ರಸ್ತೆಯಲ್ಲಿ ಎತ್ತಿನ ಚಕ್ಕಡಿಯಲ್ಲಿ ಸಾಗುವಾಗ ಎತ್ತುಗಳು ಪ್ರಯಾಸಪಡುತ್ತವೆ. </p>.<p>‘ಈಚೆಗೆ ನಿರಂತರವಾಗಿ ಮಳೆ ಸುರಿದಿದೆ. ಗುಂಡಿಗಳಲ್ಲಿ ನೀರು ನಿಂತಿದೆ. ರಸ್ತೆ ಡಾಂಬರೀಕರಣಕ್ಕೆ ಒತ್ತಾಯಿಸಿದರೂ ಕ್ರಮ ವಹಿಸಿಲ್ಲ. ಪ್ರತಿ ಬಾರಿ ಗುಂಡಿಗಳಿಗೆ ಕಲ್ಲುಮಣ್ಣು ಹಾಕಿ ತೇಪೆ ಹೆಚ್ಚುವ ಕೆಲಸ ಮಾಡುತ್ತಾರೆ. ಮಳೆಗಾಲದಲ್ಲಿ ಮಳೆಗಾಲದಲ್ಲಿ ತೇಪೆ ಹಾಳಾಗುತ್ತದೆ' ಎಂದು ರೈತ ಬಸಪ್ಪ ದೂರಿದರು. </p>.<p>ಪ್ರತಿ ವರ್ಷವೂ ಮಳೆಗಾಲದ ಸಂದರ್ಭದಲ್ಲಿ ಹೆಚ್ಚಾಗುವ ಗುಂಡಿಗಳನ್ನು ತಾತ್ಕಾಲಿಕವಾಗಿ ಕಲ್ಲುಮಣ್ಣು ಹಾಕಿ ಮುಚ್ಚದೆ ರಸ್ತೆ ಡಾಂಬರೀಕರಣಕ್ಕೆ ಕ್ರಮ ವಹಿಸಿ ಜನರಿಗೆ ಅನುಕೂಲ ಕಲ್ಪಿಸಬೇಕು ಎಂದು ಜನರು ಆಗ್ರಹಿಸುತ್ತಾರೆ. </p>.<div><blockquote>ರಸ್ತೆ ಹದಗೆಟ್ಟಿದ್ದು ಸಂಚಾರ ದುಸ್ತರವಾಗಿದೆ. ಇದರಿಂದ ಅಪಘಾತಗಳು ಸಂಭವಿಸುತ್ತಿವೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ರಸ್ತೆ ಅಭಿವೃದ್ಧಿಗೆ ಕ್ರಮವಹಿಸಬೇಕು</blockquote><span class="attribution"> ಮಹಮ್ಮದ್ ಸಲೀಂ ನನ್ನೆಸಾಬನವರ ರೈತ ಕೋಟೂರ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಧಾರವಾಡ:</strong> ತಾಲ್ಲೂಕಿನ ಕೋಟೂರ, ದುಬ್ಬನಮರಡಿ, ಅಗಸನಹಳ್ಳಿ ಹಾಗೂ ತಡಕೋಡ ಸಂಪರ್ಕ ರಸ್ತೆ ಹದೆಗೆಟ್ಟಿದೆ. ಗುಂಡಿಮಯ ರಸ್ತೆಯಿಂದಾಗಿ ಸಾರ್ವಜನಿಕರು ಸಂಚರಿಸಲು ತೊಂದರೆ ಅನುಭವಿಸುತ್ತಿದ್ದಾರೆ. </p>.<p>ರಸ್ತೆ ಹಾಳಾಗಿ ಹಲವು ತಿಂಗಳಾಗಿದೆ. ಕೆಲವೆಡೆ ಚಿಕ್ಕ ಮತ್ತು ಕೆಲವೆಡೆ ದೊಡ್ಡ ಗುಂಡಿಗಳಾಗಿ, ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಜಲ್ಲಿಕಲ್ಲು, ಮಣ್ಣಿನ ಸುಮಾರು 5 ಕಿ.ಮೀ ಕಚ್ಚಾ ರಸ್ತೆಯನ್ನು ಕ್ರಮಿಸಲು 20 ರಿಂದ 30 ನಿಮಿಷ ಹಿಡಿಯತ್ತಿದೆ. </p>.<p>ಕಾರು, ಟ್ರ್ಯಾಕ್ಟರ್, ಟಿಪ್ಪರ್, ಬೈಕ್, ಚಕ್ಕಡಿ ಸೇರಿದಂತೆ ಇತರ ವಾಹಗಳು ಈ ರಸ್ತೆಯಲ್ಲಿ ಸಂಚರಿಸುತ್ತವೆ. ಈಚೆಗೆ ಸುರಿದ ಮಳೆಗೆ ರಸ್ತೆಯ ಡಾಂಬರು ಕಿತ್ತುಹೋಗಿದೆ. ಮಳೆಯಾದಾಗ ರಸ್ತೆಯ ಗುಂಡಿಗಳಲ್ಲಿ ನೀರು ನಿಲ್ಲುತ್ತದೆ. ಚಾಲಕರು, ವಾಹನ ಸವಾರರು ಅಪಾಯ ಭೀತಿಯಲ್ಲಿ ಸಂಚರಿಸುವಂತಾಗಿದೆ. </p>.<p>ಬೆಳವಡಿ, ಬುಡರಕಟ್ಟಿ, ಖಾನಾಪುರ, ತಡಕೋಡ, ದುಬ್ಬನಮರಡಿ, ಅಗಸನಹಳ್ಳಿ, ಗರಗ ಸಹಿತ ಈ ಭಾಗದ ವಿವಿಧ ಹಳ್ಳಿಗಳ ಜನರು ಬೇಲೂರು ಕೈಗಾರಿಕಾ ಪ್ರದೇಶದ ಕಂಪನಿಗಳಿಗೆ ಇದೇ ರಸ್ತೆ ಮಾರ್ಗವಾಗಿ ಸಂಚರಿಸುತ್ತಾರೆ. ಕೆಲವರು ರಾತ್ರಿ ವೇಳೆಯಲ್ಲಿ ಓಡಾಡುವಾಗ ರಸ್ತೆಯಲ್ಲಿ ಬಿದ್ದು ಗಾಯಗೊಂಡ ನಿದರ್ಶನಗಳು ಇವೆ. ಜಲ್ಲಿಕಲ್ಲಿನ ಈ ರಸ್ತೆಯಲ್ಲಿ ಎತ್ತಿನ ಚಕ್ಕಡಿಯಲ್ಲಿ ಸಾಗುವಾಗ ಎತ್ತುಗಳು ಪ್ರಯಾಸಪಡುತ್ತವೆ. </p>.<p>‘ಈಚೆಗೆ ನಿರಂತರವಾಗಿ ಮಳೆ ಸುರಿದಿದೆ. ಗುಂಡಿಗಳಲ್ಲಿ ನೀರು ನಿಂತಿದೆ. ರಸ್ತೆ ಡಾಂಬರೀಕರಣಕ್ಕೆ ಒತ್ತಾಯಿಸಿದರೂ ಕ್ರಮ ವಹಿಸಿಲ್ಲ. ಪ್ರತಿ ಬಾರಿ ಗುಂಡಿಗಳಿಗೆ ಕಲ್ಲುಮಣ್ಣು ಹಾಕಿ ತೇಪೆ ಹೆಚ್ಚುವ ಕೆಲಸ ಮಾಡುತ್ತಾರೆ. ಮಳೆಗಾಲದಲ್ಲಿ ಮಳೆಗಾಲದಲ್ಲಿ ತೇಪೆ ಹಾಳಾಗುತ್ತದೆ' ಎಂದು ರೈತ ಬಸಪ್ಪ ದೂರಿದರು. </p>.<p>ಪ್ರತಿ ವರ್ಷವೂ ಮಳೆಗಾಲದ ಸಂದರ್ಭದಲ್ಲಿ ಹೆಚ್ಚಾಗುವ ಗುಂಡಿಗಳನ್ನು ತಾತ್ಕಾಲಿಕವಾಗಿ ಕಲ್ಲುಮಣ್ಣು ಹಾಕಿ ಮುಚ್ಚದೆ ರಸ್ತೆ ಡಾಂಬರೀಕರಣಕ್ಕೆ ಕ್ರಮ ವಹಿಸಿ ಜನರಿಗೆ ಅನುಕೂಲ ಕಲ್ಪಿಸಬೇಕು ಎಂದು ಜನರು ಆಗ್ರಹಿಸುತ್ತಾರೆ. </p>.<div><blockquote>ರಸ್ತೆ ಹದಗೆಟ್ಟಿದ್ದು ಸಂಚಾರ ದುಸ್ತರವಾಗಿದೆ. ಇದರಿಂದ ಅಪಘಾತಗಳು ಸಂಭವಿಸುತ್ತಿವೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ರಸ್ತೆ ಅಭಿವೃದ್ಧಿಗೆ ಕ್ರಮವಹಿಸಬೇಕು</blockquote><span class="attribution"> ಮಹಮ್ಮದ್ ಸಲೀಂ ನನ್ನೆಸಾಬನವರ ರೈತ ಕೋಟೂರ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>