‘ನೈರುತ್ಯ ರೈಲ್ವೆ ವ್ಯಾಪ್ತಿಯಲ್ಲಿ ಖಾಲಿ ಇರುವ ಟೆಕ್ನಿಷಿಯನ್ ಹುದ್ದೆಗಳ ವಿವರವನ್ನು ಹತ್ತು ದಿನದೊಳಗೆ ಸಂಗ್ರಹಿಸಲಾಗುವುದು. ನಂತರ, ನೇಮಕಾತಿ ಪತ್ರ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ನೇಮಕಾತಿ ಮತ್ತು ಸಿಬ್ಬಂದಿ ವಿಭಾಗದ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಮಾತಿಗೆ ತಪ್ಪಿದರೆ ಮತ್ತೆ ಪ್ರತಿಭಟನೆ ನಡೆಸಲಾಗುವುದು’ ಎಂದು ಪ್ರತಿಭಟನಾನಿರತರಾದ ವಿಲಾಸ್ ಮೇತ್ರಿ, ಸೌರವ ತಿವಾರಿ, ರೋಹಿತ್ ಕುಮಾರ್, ಸೋನು ಕುಮಾರ್, ನಿತೀಶ್ ಕುಮಾರ್, ಅಶುತೋಷ್ ಕುಮಾರ್ ಉಪಾಧ್ಯಾಯ ಹೇಳಿದರು.