<p><strong>ಗುಡಗೇರಿ:</strong> ‘ಭೋಗ ಸುಖವು ಶಾಶ್ವತವಲ್ಲ, ಪ್ರತಿಯೊಬ್ಬರು ಆತ್ಮಕಲ್ಯಾಣದ ಕಡೆಗೆ ಸಾಗಬೇಕು’ ಎಂದು 108 ಶ್ರೀ ಪುಣ್ಯಸಾಗರ ಮುನಿ ಮಹಾರಾಜ ಹೇಳಿದರು.</p>.<p>ಗ್ರಾಮದಲ್ಲಿ 1008 ಶ್ರೀ ಶಾಂತಿನಾಥ ತೀರ್ಥಂಕರರ ಪಂಚ ಕಲ್ಯಾಣ ಮಹೋತ್ಸವದ ಅಂಗವಾಗಿ ಗುರುವಾರ ನಡೆದ ಕೇವಲಜ್ಞಾನ ಕಲ್ಯಾಣ ಕಾರ್ಯಕ್ರಮದಲ್ಲಿ ಸಮವಸರಣ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.</p>.<p>‘ಇಂದು ಸಣ್ಣ ವಿಚಾರಕ್ಕೂ ವಿರಸ ಮಾಡಿಕೊಂಡು ಪಾಪ ಬಂಧನಕ್ಕೆ ಒಳಗಾಗುತ್ತಿದ್ದು, ಧರ್ಮದ ಮಾರ್ಗದಲ್ಲಿ ಸಾಗಿ ಆತ್ಮಕಲ್ಯಾಣ ಮಾಡಿಕೊಳ್ಳಬೇಕು’ ಎಂದು ಹೇಳಿದರು.</p>.<p>ಶಾಸಕ ಎಂ.ಆರ್. ಪಾಟೀಲ್ ಮಾತನಾಡಿ, ‘ಜೈನ ಸಮುದಾಯದವರು ದುಡಿಮೆಯ ಒಂದು ಭಾಗವನ್ನು ಪರೋಪಕಾರಕ್ಕೆ ನೀಡುತ್ತಿರುವುದು ಎಲ್ಲರಿಗೂ ಮಾದರಿ. ಸಮಾಜದ ಅಭಿವೃದ್ಧಿಗೆ ಸದಾ ನೆರವು ನೀಡಲಾಗುವುದು’ ಎಂದು ಹೇಳಿದರು.</p>.<p>ಸಿಂಹನಗದ್ದೆ ಲಕ್ಷ್ಮೀಸೇನ ಭಟ್ಟಾರಕರಿಂದ ಕೇವಲಜ್ಞಾನ ಕಲ್ಯಾಣ ನಡೆಯಿತು. ಜೈನ ಸಮಾಜದ ಮುಖಂಡ ಸಂಜಯ್ ಪಾಟೀಲ್, ಮಾಜಿ ಶಾಸಕ ಎಂ.ಎಸ್. ಅಕ್ಕಿ, ಕಾಂಗ್ರೆಸ್ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಚಂದ್ರಶೇಖರ ಜುಟ್ಟಲ್ ಮಾತನಾಡಿದರು.</p>.<p>ವಕೀಲ ಆರ್.ಎಂ. ಕಮತದ, ಮಾಲತೇಶ ಸಾಗೋಟಿ, ಬಸನಗೌಡ ಕರೆಹೊಳಲಪ್ಪನವರ, ಅಪ್ಪಣ್ಣ ಉಂಡೇಕಾರ ಅವರನ್ನು ಸನ್ಮಾನಿಸಲಾಯಿತು.</p>
<p><strong>ಗುಡಗೇರಿ:</strong> ‘ಭೋಗ ಸುಖವು ಶಾಶ್ವತವಲ್ಲ, ಪ್ರತಿಯೊಬ್ಬರು ಆತ್ಮಕಲ್ಯಾಣದ ಕಡೆಗೆ ಸಾಗಬೇಕು’ ಎಂದು 108 ಶ್ರೀ ಪುಣ್ಯಸಾಗರ ಮುನಿ ಮಹಾರಾಜ ಹೇಳಿದರು.</p>.<p>ಗ್ರಾಮದಲ್ಲಿ 1008 ಶ್ರೀ ಶಾಂತಿನಾಥ ತೀರ್ಥಂಕರರ ಪಂಚ ಕಲ್ಯಾಣ ಮಹೋತ್ಸವದ ಅಂಗವಾಗಿ ಗುರುವಾರ ನಡೆದ ಕೇವಲಜ್ಞಾನ ಕಲ್ಯಾಣ ಕಾರ್ಯಕ್ರಮದಲ್ಲಿ ಸಮವಸರಣ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.</p>.<p>‘ಇಂದು ಸಣ್ಣ ವಿಚಾರಕ್ಕೂ ವಿರಸ ಮಾಡಿಕೊಂಡು ಪಾಪ ಬಂಧನಕ್ಕೆ ಒಳಗಾಗುತ್ತಿದ್ದು, ಧರ್ಮದ ಮಾರ್ಗದಲ್ಲಿ ಸಾಗಿ ಆತ್ಮಕಲ್ಯಾಣ ಮಾಡಿಕೊಳ್ಳಬೇಕು’ ಎಂದು ಹೇಳಿದರು.</p>.<p>ಶಾಸಕ ಎಂ.ಆರ್. ಪಾಟೀಲ್ ಮಾತನಾಡಿ, ‘ಜೈನ ಸಮುದಾಯದವರು ದುಡಿಮೆಯ ಒಂದು ಭಾಗವನ್ನು ಪರೋಪಕಾರಕ್ಕೆ ನೀಡುತ್ತಿರುವುದು ಎಲ್ಲರಿಗೂ ಮಾದರಿ. ಸಮಾಜದ ಅಭಿವೃದ್ಧಿಗೆ ಸದಾ ನೆರವು ನೀಡಲಾಗುವುದು’ ಎಂದು ಹೇಳಿದರು.</p>.<p>ಸಿಂಹನಗದ್ದೆ ಲಕ್ಷ್ಮೀಸೇನ ಭಟ್ಟಾರಕರಿಂದ ಕೇವಲಜ್ಞಾನ ಕಲ್ಯಾಣ ನಡೆಯಿತು. ಜೈನ ಸಮಾಜದ ಮುಖಂಡ ಸಂಜಯ್ ಪಾಟೀಲ್, ಮಾಜಿ ಶಾಸಕ ಎಂ.ಎಸ್. ಅಕ್ಕಿ, ಕಾಂಗ್ರೆಸ್ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಚಂದ್ರಶೇಖರ ಜುಟ್ಟಲ್ ಮಾತನಾಡಿದರು.</p>.<p>ವಕೀಲ ಆರ್.ಎಂ. ಕಮತದ, ಮಾಲತೇಶ ಸಾಗೋಟಿ, ಬಸನಗೌಡ ಕರೆಹೊಳಲಪ್ಪನವರ, ಅಪ್ಪಣ್ಣ ಉಂಡೇಕಾರ ಅವರನ್ನು ಸನ್ಮಾನಿಸಲಾಯಿತು.</p>