‘ಅನ್ಯೂರಿಸಮ್ ಲಕ್ಷಣಗಳು ಹೇಗಿರುತ್ತವೆ ಎನ್ನುವುದು ಆರಂಭದಲ್ಲಿ ಗೊತ್ತಾಗುವುದಿಲ್ಲ. ಭಾವಸಾಹೇಬ್ ಅಂತಿಮ ಹಂತದಲ್ಲಿದ್ದಾಗ ನಮ್ಮ ಆಸ್ಪತ್ರೆಗ ಬಂದಿದ್ದರು. ತಜ್ಞ ವೈದ್ಯರು ತುರ್ತಾಗಿ ಸ್ಪಂದಿಸಿದ್ದರಿಂದ ಅವರ ಜೀವ ಉಳಿಯಿತು. ರೋಗಿಯ ಎಡಭಾಗದ ಮೂತ್ರಪಿಂಡದ ರಕ್ತನಾಳ ತೀವ್ರ ಒತ್ತಡದಲ್ಲಿತ್ತು. ರಕ್ತದ ಒತ್ತಡ ಏರುಪೇರು ಆಗದಂತೆ ಅರಿವಳಿಕೆ ತಜ್ಞ ರಮೇಶ ಠಿಕಾರಿ ಶಸ್ತ್ರಚಿಕಿತ್ಸೆ ಮೂಲಕ ತಡೆದರು’ ಎಂದು ತಿಳಿಸಿದರು. ಶರಣ ಹಳ್ಳದ, ಷಣ್ಮುಖ ಹಿರೇಮಠ, ಶ್ರೀಶೈಲ್ ಚಿನಿವಾಲರ ಮತ್ತು ಮೂತ್ರಪಿಂಡ ತಜ್ಞ ಚೇತನ ಮುದ್ರಬೆಟ್ಟು ಅವರನ್ನು ಒಳಗೊಂಡ ವೈದ್ಯರ ತಂಡ ಶಸ್ತಚಿಕಿತ್ಸೆ ನೆರವೇರಿಸಿದೆ.