ಹುಬ್ಬಳ್ಳಿ: ತಾಲ್ಲೂಕಿನ ನೂಲ್ವಿ ಗ್ರಾಮದಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಶಾಸಕ ಸಿ.ಎಸ್. ಶಿವಳ್ಳಿ ಶನಿವಾರ ಚಾಲನೆ ನೀಡಿದರು. ಜಿಲ್ಲಾಧಿಕಾರಿ ದೀಪಾ ಚೋಳನ್, ಜಿಲ್ಲಾ ಪಂಚಾಯತಿ ಸಿಇಒ ಸ್ನೇಹಲ್ ಹಾಗೂ ಶಾಸಕರು ಕಸ ಗುಡಿಸುವ ಮೂಲಕ ಊರಿನಲ್ಕಿ ಸ್ವಚ್ಛತೆ ಕಾಪಾಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಅಪೌಷ್ಟಿಕತೆ ಬಗ್ಗೆಯೂ ಜನರಲ್ಲಿ ಜಾಗೃತಿ ಮೂಡಿಸಲಾಯಿತು.
ಆ ನಂತರ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಜನರು ಅಹವಾಲು ಸಲ್ಲಿಸಿದರು.
ಶೌಚಾಲಯ ಬೇಕೆಂದು ಡಿಸಿ ಎದುರು ಕಣ್ಣೀರು ಹಾಕಿದ ಯುವತಿ
ಹುಬ್ಬಳ್ಳಿ: ಶೌಚಾಲಯ ನಿರ್ಮಿಸಿಕೊಡುವಂತೆ ನೂಲ್ವಿ ಗ್ರಾಮದ ಯುವತಿಯೊಬ್ಬರು ಜಿಲ್ಲಾಧಿಕಾರಿ ಎದುರು ಕಣ್ಣೀರು ಹಾಕಿದರು.
ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗವಹಿಸಲುಗ್ರಾಮಕ್ಕೆ ಆಗಮಿಸಿದ್ದ ಜಿ ಲ್ಲಾಧಿಕಾರಿ ಅವರು ಮನೆಯ ಮುಂದೆ ನಿಂತಿದ್ದ ಅಶ್ವಿನಿ ಅವರನ್ನು ಮಾತನಾಡಿಸಿದರು. ಆಗ ಶೌಚಾಲಯ ಇಲ್ಲದೆ ತೊಂದರೆ ಅನುಭವಿಸುತ್ತಿರುವ ವಿಷಯ ಹೇಳಿ ಕಣ್ಣೀರು ಹಾಕಿದರು. ಶೌಚಾಲಯ ನಿರ್ಮಿಸಿ ಕೊಡುವ ಭರವಸೆ ನೀಡಿದರು.
ಅಶ್ವಿನಿಕುಟುಂಬಕ್ಕೆ ಈಗಾಗಲೇ ಒಂದು ಶೌಚಾಲಯ ಮಂಜೂರು ಮಾಡಲಾಗಿದೆ. ಹೊಅ ಮನೆಯಲ್ಲಿ ಅದನ್ನು ನಿರ್ಮಿಸಲಾಗಿದೆ. ಆದರೆ ಅವರು ತೀರಿ ಹೋದ ನಂತರ ಕುಟುಂಬ ಹಳೆಯ ಮನೆಯಲ್ಲಿ ವಾಸಬಿದೆ. ಅಲ್ಲಿ ಶೌಚಾಲಯ ಇಲ್ಲ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದರು.