<p><strong>ಹುಬ್ಬಳ್ಳಿ:</strong> ಹಳೇ ಬಸ್ ನಿಲ್ದಾಣ ಮುಂದೆ ನಿರ್ಮಾಣ ಮಾಡುತ್ತಿರುವ ಬಿಆರ್ಟಿಎಸ್ ಬಸ್ ನಿಲ್ದಾಣ ಕಾಮಗಾರಿಯಿಂದಾಗಿ ವಾಹನ ಸವಾರರು ಹಾಗೂ ಪಾದಚಾರಿಗಳು ಪರದಾಡುವಂತಾಗಿವೆ.</p>.<p>ವಾಹನಗಳ ದಟ್ಟಣೆ ತಗ್ಗಿಸಲು ಪೊಲೀಸರು, ಲಾರಿ, ಬಸ್ಗಳನ್ನು ಬಸವ ವನ ಕಡೆಯಿಂದ ಚನ್ನಮ್ಮ ವೃತ್ತಕ್ಕೆ ಬರುವುದನ್ನು ನಿಷೇಧಿಸಲಾಗಿದ್ದರೂ, ದಟ್ಟಣೆ ತಪ್ಪಿಲ್ಲ. ಆಗಾಗ ವಾಹನಗಳ ನಡುವೆ ಅಪಘಾತಗಳು ಆಗುತ್ತಲೇ ಇವೆ. ಇದರಿಂದಾಗಿ ಮಾಲೀಕರುಗಳ ನಡುವೆ ವಾಗ್ವಾದ ಸಾಮಾನ್ಯ ಎನ್ನುವಂತಾಗಿದೆ.</p>.<p>ಅಲ್ಲಿ ರಸ್ತೆ ತಗ್ಗಾಗಿರುವುದರ ಜತೆಗೆ ಹಾಳಾಗಿ ಹೋಗಿದೆ. ಹಾಗಾಗಿ, ಸ್ವಲ್ಪ ಮಳೆಯಾದರೂ ಸಾಕು ಗುಂಡಿಗಳಲ್ಲಿ ನೀರು ನಿಲ್ಲುತ್ತದೆ. ಸಂಚರಿಸುವ ವಾಹನಗಳ ಸಂಖ್ಯೆ ಹೆಚ್ಚಿರುವುದರಿಂದ ಕೆಸರು ಮೈಮೇಲೆ ಬೀಳುತ್ತದೆ. ರಸ್ತೆ ಪಕ್ಕದ ಚರಂಡಿ ಮುಚ್ಚಿ ಹೋಗಿದೆ.</p>.<p>ಬಸ್ ನಿಲ್ದಾಣ ಎದುರಗಡೆ ಕೆಲವು ಮಳಿಗೆಗಳ ಮುಂದೆ ಪಾದಚಾರಿ ಮಾರ್ಗದಲ್ಲಿ ದ್ವಿಚಕ್ರ ವಾಹನಗಳನ್ನು ನಿಲ್ಲಿಸಲಾಗುತ್ತದೆ. ಜತೆಗೆ ಹೋಟೆಲ್ಗಳ ಮುಂದೆ ರಸ್ತೆಯಲ್ಲಿಯೇ ವಾಹನಗಳು ನಿಂತಿರುತ್ತವೆ. ಹಾಗಾಗಿ, ವಾಹನಗಳು ಮುಂದೆ ಸಾಗುವುದೇ ಇಲ್ಲ.</p>.<p>ಬಸ್ ನಿಲ್ದಾಣದ ಮುಂದೆ ಆಟೊಗಳ ನಿಲುಗಡೆಗೆ ನಿಲ್ದಾಣವಿದೆ. ಆದರೂ, ಕೆಲವೊಮ್ಮೆ ಆಟೊಗಳು ರಸ್ತೆಯಲ್ಲಿಯೂ ನಿಂತಿರುತ್ತವೆ. ಜತೆಗೆ ನಿಲ್ದಾಣಕ್ಕೆ ಸಾರ್ವಜನಿಕರನ್ನು ಕಳುಹಿಸಲು, ಕರೆದುಕೊಂಡು ಹೋಗಲು ಬರುವವರೂ ವಾಹನಗಳನ್ನು ನಿಲ್ಲಿಸಿರುತ್ತಾರೆ. ಪಾದಚಾರಿಗಳು ಹೋಗಲು ಮಾರ್ಗವೇ ಇಲ್ಲದಂತಾಗಿದೆ ಎಂದು ದೂರುತ್ತಾರೆ ಸಾರ್ವಜನಿಕರು.</p>.<p>ನಿಲ್ದಾಣಕ್ಕೆ ಕೂಗಳತೆ ದೂರದಲ್ಲಿರುವ ಚನ್ನಮ್ಮ ವೃತ್ತದಲ್ಲಿನ ಟ್ರಾಫಿಕ್ ಸಿಗ್ನಲ್ಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ನೀಲಿಜಿನ್ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಅಳವಡಿಸಿರುವ ಟ್ರಾಫಿಕ್ ಸಿಗ್ನಲ್ ಬಂದ್ ಆಗಿದೆ. ಬಸವ ವನ ಬಳಿ ಇರುವ ಟ್ರಾಫಿಕ್ ಸಿಗ್ನಲ್ ಕೂಡ ಕಾರ್ಯ ನಿರ್ವಹಿಸುತ್ತಿಲ್ಲ.</p>.<p>ಸಾರ್ವಜನಿಕರು ಮತ್ತು ಪಾದಚಾರಿಗಳು ರಸ್ತೆ ದಾಟಲು ಹಳೇ ಬಸ್ ನಿಲ್ದಾಣದ ಎದುರಿಗೆ ಮೇಲ್ಸೇತುವೆ ಇತ್ತು. ಬಸ್ ನಿಲ್ದಾಣ ಸಂದರ್ಭದಲ್ಲಿ ಅದನ್ನು ಕೆಡವಲಾಗಿದೆ. ಪರ್ಯಾಯ ವ್ಯವಸ್ಥೆ ಮಾಡಿಲ್ಲ. ಹಾಗಾಗಿ ರಸ್ತೆ ದಾಟುವವರು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ದಾಟಬೇಕಾಗಿದೆ.</p>.<p>ಬಿಆರ್ಟಿಎಸ್ ನಿಲ್ದಾಣ ಕಾಮಗಾರಿಯನ್ನು ಶೀಘ್ರವೇ ಮುಗಿಸಬೇಕು. ಅಲ್ಲಿಯವರೆಗೆ ಸಂಚಾರ ದಟ್ಟಣೆಯನ್ನು ನಿಭಾಯಿಸಬೇಕು ಎಂಬುದು ಜನರ ಆಗ್ರಹ</p>.<p>ಬಸ್ ಸಂಚಾರ ಹೆಚ್ಚಿರುವುದರಿಂದ ದೂಳು ಜಾಸ್ತಿಯಾಗಿದೆ. ಪಾದಚಾರಿ ಮಾರ್ಗದಲ್ಲಿ ವಾಹನಗಳನ್ನು ನಿಲ್ಲಿಸುವುದರಿಂದ ಜನರಿಗೆ ತೊಂದರೆಯಾಗುತ್ತಿದೆ. ಕಾಮಗಾರಿ ಬೇಗನೆ ಪೂರ್ಣಗೊಳಿಸಬೇಕು.<br />-<strong> ಶಂಕರ, ವ್ಯಾಪಾರಿ</strong></p>.<p>ಬಿಆರ್ಟಿಎಸ್ ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿಯಿಂದ ತೊಂದರೆಯಾಗುತ್ತಿದೆ. ಜನರ ತೊಂದರೆ ನಿವಾರಿಸಲು ಕ್ರಮಕೈಗೊಳ್ಳಬೇಕು<br />- <strong>ಧರ್ಮರಾಜ ಗಡಗಿ, ವ್ಯಾಪಾರಿ.</strong></p>.<p><strong>ನಾಗಪ್ಪ.ಕೆ.ಎಂ.</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ:</strong> ಹಳೇ ಬಸ್ ನಿಲ್ದಾಣ ಮುಂದೆ ನಿರ್ಮಾಣ ಮಾಡುತ್ತಿರುವ ಬಿಆರ್ಟಿಎಸ್ ಬಸ್ ನಿಲ್ದಾಣ ಕಾಮಗಾರಿಯಿಂದಾಗಿ ವಾಹನ ಸವಾರರು ಹಾಗೂ ಪಾದಚಾರಿಗಳು ಪರದಾಡುವಂತಾಗಿವೆ.</p>.<p>ವಾಹನಗಳ ದಟ್ಟಣೆ ತಗ್ಗಿಸಲು ಪೊಲೀಸರು, ಲಾರಿ, ಬಸ್ಗಳನ್ನು ಬಸವ ವನ ಕಡೆಯಿಂದ ಚನ್ನಮ್ಮ ವೃತ್ತಕ್ಕೆ ಬರುವುದನ್ನು ನಿಷೇಧಿಸಲಾಗಿದ್ದರೂ, ದಟ್ಟಣೆ ತಪ್ಪಿಲ್ಲ. ಆಗಾಗ ವಾಹನಗಳ ನಡುವೆ ಅಪಘಾತಗಳು ಆಗುತ್ತಲೇ ಇವೆ. ಇದರಿಂದಾಗಿ ಮಾಲೀಕರುಗಳ ನಡುವೆ ವಾಗ್ವಾದ ಸಾಮಾನ್ಯ ಎನ್ನುವಂತಾಗಿದೆ.</p>.<p>ಅಲ್ಲಿ ರಸ್ತೆ ತಗ್ಗಾಗಿರುವುದರ ಜತೆಗೆ ಹಾಳಾಗಿ ಹೋಗಿದೆ. ಹಾಗಾಗಿ, ಸ್ವಲ್ಪ ಮಳೆಯಾದರೂ ಸಾಕು ಗುಂಡಿಗಳಲ್ಲಿ ನೀರು ನಿಲ್ಲುತ್ತದೆ. ಸಂಚರಿಸುವ ವಾಹನಗಳ ಸಂಖ್ಯೆ ಹೆಚ್ಚಿರುವುದರಿಂದ ಕೆಸರು ಮೈಮೇಲೆ ಬೀಳುತ್ತದೆ. ರಸ್ತೆ ಪಕ್ಕದ ಚರಂಡಿ ಮುಚ್ಚಿ ಹೋಗಿದೆ.</p>.<p>ಬಸ್ ನಿಲ್ದಾಣ ಎದುರಗಡೆ ಕೆಲವು ಮಳಿಗೆಗಳ ಮುಂದೆ ಪಾದಚಾರಿ ಮಾರ್ಗದಲ್ಲಿ ದ್ವಿಚಕ್ರ ವಾಹನಗಳನ್ನು ನಿಲ್ಲಿಸಲಾಗುತ್ತದೆ. ಜತೆಗೆ ಹೋಟೆಲ್ಗಳ ಮುಂದೆ ರಸ್ತೆಯಲ್ಲಿಯೇ ವಾಹನಗಳು ನಿಂತಿರುತ್ತವೆ. ಹಾಗಾಗಿ, ವಾಹನಗಳು ಮುಂದೆ ಸಾಗುವುದೇ ಇಲ್ಲ.</p>.<p>ಬಸ್ ನಿಲ್ದಾಣದ ಮುಂದೆ ಆಟೊಗಳ ನಿಲುಗಡೆಗೆ ನಿಲ್ದಾಣವಿದೆ. ಆದರೂ, ಕೆಲವೊಮ್ಮೆ ಆಟೊಗಳು ರಸ್ತೆಯಲ್ಲಿಯೂ ನಿಂತಿರುತ್ತವೆ. ಜತೆಗೆ ನಿಲ್ದಾಣಕ್ಕೆ ಸಾರ್ವಜನಿಕರನ್ನು ಕಳುಹಿಸಲು, ಕರೆದುಕೊಂಡು ಹೋಗಲು ಬರುವವರೂ ವಾಹನಗಳನ್ನು ನಿಲ್ಲಿಸಿರುತ್ತಾರೆ. ಪಾದಚಾರಿಗಳು ಹೋಗಲು ಮಾರ್ಗವೇ ಇಲ್ಲದಂತಾಗಿದೆ ಎಂದು ದೂರುತ್ತಾರೆ ಸಾರ್ವಜನಿಕರು.</p>.<p>ನಿಲ್ದಾಣಕ್ಕೆ ಕೂಗಳತೆ ದೂರದಲ್ಲಿರುವ ಚನ್ನಮ್ಮ ವೃತ್ತದಲ್ಲಿನ ಟ್ರಾಫಿಕ್ ಸಿಗ್ನಲ್ಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ನೀಲಿಜಿನ್ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಅಳವಡಿಸಿರುವ ಟ್ರಾಫಿಕ್ ಸಿಗ್ನಲ್ ಬಂದ್ ಆಗಿದೆ. ಬಸವ ವನ ಬಳಿ ಇರುವ ಟ್ರಾಫಿಕ್ ಸಿಗ್ನಲ್ ಕೂಡ ಕಾರ್ಯ ನಿರ್ವಹಿಸುತ್ತಿಲ್ಲ.</p>.<p>ಸಾರ್ವಜನಿಕರು ಮತ್ತು ಪಾದಚಾರಿಗಳು ರಸ್ತೆ ದಾಟಲು ಹಳೇ ಬಸ್ ನಿಲ್ದಾಣದ ಎದುರಿಗೆ ಮೇಲ್ಸೇತುವೆ ಇತ್ತು. ಬಸ್ ನಿಲ್ದಾಣ ಸಂದರ್ಭದಲ್ಲಿ ಅದನ್ನು ಕೆಡವಲಾಗಿದೆ. ಪರ್ಯಾಯ ವ್ಯವಸ್ಥೆ ಮಾಡಿಲ್ಲ. ಹಾಗಾಗಿ ರಸ್ತೆ ದಾಟುವವರು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ದಾಟಬೇಕಾಗಿದೆ.</p>.<p>ಬಿಆರ್ಟಿಎಸ್ ನಿಲ್ದಾಣ ಕಾಮಗಾರಿಯನ್ನು ಶೀಘ್ರವೇ ಮುಗಿಸಬೇಕು. ಅಲ್ಲಿಯವರೆಗೆ ಸಂಚಾರ ದಟ್ಟಣೆಯನ್ನು ನಿಭಾಯಿಸಬೇಕು ಎಂಬುದು ಜನರ ಆಗ್ರಹ</p>.<p>ಬಸ್ ಸಂಚಾರ ಹೆಚ್ಚಿರುವುದರಿಂದ ದೂಳು ಜಾಸ್ತಿಯಾಗಿದೆ. ಪಾದಚಾರಿ ಮಾರ್ಗದಲ್ಲಿ ವಾಹನಗಳನ್ನು ನಿಲ್ಲಿಸುವುದರಿಂದ ಜನರಿಗೆ ತೊಂದರೆಯಾಗುತ್ತಿದೆ. ಕಾಮಗಾರಿ ಬೇಗನೆ ಪೂರ್ಣಗೊಳಿಸಬೇಕು.<br />-<strong> ಶಂಕರ, ವ್ಯಾಪಾರಿ</strong></p>.<p>ಬಿಆರ್ಟಿಎಸ್ ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿಯಿಂದ ತೊಂದರೆಯಾಗುತ್ತಿದೆ. ಜನರ ತೊಂದರೆ ನಿವಾರಿಸಲು ಕ್ರಮಕೈಗೊಳ್ಳಬೇಕು<br />- <strong>ಧರ್ಮರಾಜ ಗಡಗಿ, ವ್ಯಾಪಾರಿ.</strong></p>.<p><strong>ನಾಗಪ್ಪ.ಕೆ.ಎಂ.</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>