’ಕೋವಿಡ್ ಸಮಯವಿದ್ದರೂ ಕ.ಸಾ.ಪ. ಅಧ್ಯಕ್ಷ ಮನು ಬಳಿಗಾರ ಹಾವೇರಿಯಲ್ಲಿ ಸಾಹಿತ್ಯ ಸಮ್ಮೇಳನ ಆಯೋಜಿಸಲು ತರಾತುರಿಯಲ್ಲಿ ನಿರ್ಧಾರ ಕೈಗೊಂಡಿದ್ದಾರೆ. ಇತ್ತೀಚೆಗಿನ ಸಮ್ಮೇಳನಗಳು ಜಾತ್ರೆಯಂತಾಗಿದ್ದು, ರಾಜಕಾರಣಿಗಳೇ ತುಂಬಿಕೊಳ್ಳುತ್ತಿದ್ದಾರೆ. ಆದ್ದರಿಂದ ಸಾಹಿತ್ಯ ಪರಿಷತ್ನ ಅಮೃತ ನಿಧಿ ಯೋಜನೆಯಡಿ ಪ್ರತಿ ಕನ್ನಡಿಗನಿಂದ ₹10 ಮತ್ತು ಪ್ರತಿ ಸರ್ಕಾರಿ ನೌಕರನಿಂದ ₹100 ಸಂಗ್ರಹಿಸಿ ಸರ್ಕಾರದ ನಯಾಪೈಸೆ ಅನುದಾನ ಪಡೆಯದೆ ಸಮ್ಮೇಳನ ಆಯೋಜಿಸುವ ಯೋಜನೆಯಿದೆ’ ಎಂದರು.