ಶಾಸಕ ಪ್ರಸಾದ ಅಬ್ಬಯ್ಯ, ಕಾಂಗ್ರೆಸ್ ಮುಖಂಡ ಸದಾನಂದ ಡಂಗನವರ, ಮುಖಂಡರಾದ ನಾಸಿರ್ ಅಸುಂಡಿ, ರಾಕೇಶ ಪಲ್ಲಾಟೆ, ಶ್ರೀನಿವಾಸ ಬೆಳದಡಿ, ರಮೇಶ ಹುಲಕೊಪ್ಪ, ಶಾರುಖ್ ಮುಲ್ಲಾ, ಅಧ್ಯಕ್ಷರಾದ ಮೆಹಮೂದ್ ಕೋಳೂರು, ಪ್ರಸನ್ನ ಮೀರಜಕರ್, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಅಲ್ತಾಫ್ ಹಳ್ಳೂರ ಸೇರಿದಂತೆ ಸ್ಥಳೀಯ ನಾಯಕರು ಮನೆಮನೆಗೆ ತೆರಳಿ ಮತ ಕೇಳಿದರು. ಅಬ್ಬಯ್ಯ ವಾರ್ಡ್ 61ರಲ್ಲಿ ದೊರೆರಾಜ್ ಮಣಿಕುಂಟ್ಲ, 82ರಲ್ಲಿ ಯಲ್ಲಮ್ಮ ಪಲ್ಲಾಟೆ, 60ರಲ್ಲಿ ಕೌಸರ್ ಬಾನು ಗುಡಮಾಲ್ ಸೇರಿದಂತೆ ಹಲವರ ಪರ ಮತಯಾಚಿಸಿದರು.