<p><strong>ಹುಬ್ಬಳ್ಳಿ: </strong>‘ವೃತ್ತಿ ರಂಗಭೂಮಿ ಕಲಾವಿದರು ಸಂಘಟನೆ ಮೂಲಕ ಒಗ್ಗಟ್ಟು ಪ್ರದರ್ಶಿಸಿ, ಸರ್ಕಾರದಿಂದ ಅನುದಾನ ಪಡೆಯಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.</p>.<p>ಕರ್ನಾಟಕ ರಾಜ್ಯ ವೃತ್ತಿ ರಂಗಭೂಮಿ ಮಾಲೀಕರ ಸಂಘದ ವತಿಯಿಂದನಗರದ ಬಸವ ವನ ಬಳಿ ಹಾಕಿರುವ ಕೆ.ಬಿ.ಆರ್. ಡ್ರಾಮಾ ಕಂಪನಿ ಟೆಂಟ್ನಲ್ಲಿ ‘2019–20ನೇ ಸಾಲಿನ ಸಾಂಸ್ಕೃತಿಕ ಕಾರ್ಯ ಚಟುವಟಿಕೆಗಳ ಪ್ರಾರಂಭೋತ್ಸವ’ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಪ್ರಸ್ತುತ ನಾಟಕ ಕಂಪನಿಗಳ ಪರಿಸ್ಥಿತಿ ಶೋಚನೀಯವಾಗಿದೆ. ದೂರದರ್ಶನ, ಮೊಬೈಲ್, ಸಿನಿಮಾಗಳಿಂದ ನಾಟಕ ನೋಡುವವರ ಸಂಖ್ಯೆ ಕಡಿಮೆಯಾಗಿದೆ. ಯೂ ಟ್ಯೂಬ್ನಲ್ಲಿ ನಾಟಕ ನೋಡುತ್ತ ಮನರಂಜನೆ ಪಡೆಯುತ್ತಿದ್ದಾರೆ. ನಾಟಕ ಪ್ರದರ್ಶನ ಸಹ ಕಡಿಮೆಯಾಗುತ್ತಿದೆ’ ಎಂದರು.</p>.<p>‘93 ವರ್ಷಗಳಿಂದ ಚಿಂದೋಡಿ ಕುಟುಂಬ ನಾಟಕ ಪ್ರದರ್ಶನ ಮಾಡುತ್ತ ಬಂದಿದ್ದು, ನೂರು ವರ್ಷ ಪೂರೈಸುವ ಮಹತ್ವಾಕಾಂಕ್ಷೆ ಹೊಂದಿದೆ. ಸುದೀರ್ಘ ಪಯಣದಲ್ಲಿ ಸಾಕಷ್ಟು ನೋವು ಉಂಡಿರುವ ಈ ಕಂಪನಿ, ಐದಾರು ಜನ ಪ್ರೇಕ್ಷಕರು ಇದ್ದಾಗಲೂ ಕಲೆಗೆ ಅಪಚಾರವಾಗದಂತೆ ನಾಟಕ ಪೂರ್ಣಗೊಳಿಸಿದೆ. ಈಗ ಮತ್ತೊಮ್ಮೆ ರಂಗಭೂಮಿ ಮಾಲೀಕರು ಒಂದುಗೂಡಿದ್ದು ಸಂತಸದ ವಿಷಯ’ ಎಂದರು.</p>.<p>ಮಾಜಿ ಸಂಸದ ಪ್ರೊ. ಐ.ಜಿ. ಸನದಿ ಮಾತನಾಡಿ, ‘ಒಬ್ಬರಿಗೊಬ್ಬರು ಕೈ ಜೋಡಿಸಿ ಸಹಕಾರ ನೀಡಿದರೆ ಅದು ಸಮಷ್ಠಿಯಾಗುತ್ತದೆ. ಆ ಸಮಷ್ಠಿಯೇ ಶಕ್ತಿಯಾಗಿ ಹೊರ ಹೊಮ್ಮುತ್ತದೆ. ಅಂತಹ ಬಲಿಷ್ಠ ಶಕ್ತಿ ನಾಟಕ ಕಂಪನಿಗಳ ಮಾಲೀಕರದ್ದಾಗಬೇಕು. ಬೆಂಗಳೂರು, ಶಿವಮೊಗ್ಗ, ತುಮಕೂರಿನಲ್ಲಿ ಇರುವಂತೆ ಹುಬ್ಬಳ್ಳಿಯಲ್ಲೂ ಒಂದು ರಂಗಭೂಮಿ ವೇದಿಕೆ ಬೇಕಾಗಿದೆ. ಸ್ಥಳೀಯ ಜನಪ್ರತಿನಿಧಿಗಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು’ ಎಂದು ಮನವಿ ಮಾಡಿದರು.</p>.<p>ರಂಗಭೂಮಿ ಮಾಲೀಕರ ಸಂಘದ ಪ್ರಧಾನ ಕಾರ್ಯದರ್ಶಿ ಚಿಂದೋಡಿ ಶಂಭುಲಿಂಗಪ್ಪ, ಉಪಾಧ್ಯಕ್ಷೆ ಮಾಲತಿ ಸುಧೀರ್, ಖಜಾಂಚಿ ರಾಜಣ್ಣ ಜೇವರ್ಗಿ, ಕಲಾವಿದರ ಸಂಘದ ಅಧ್ಯಕ್ಷ ಫೈಯಾಜ್ ಕರ್ಜಗಿ ಇದ್ದರು. ನಂತರ ಚಿಂದೋಡಿ ಶ್ರೀಕಂಟೇಶ ನಿರ್ದೇಶಿಸಿರುವ ‘ನಿದ್ದಿಗೆಡಿಶ್ಯಾಳ ಬಸಲಿಂಗಿ’ ಸಾಮಾಜಿಕ ಹಾಸ್ಯ ನಾಟಕ ಪ್ರದರ್ಶಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ: </strong>‘ವೃತ್ತಿ ರಂಗಭೂಮಿ ಕಲಾವಿದರು ಸಂಘಟನೆ ಮೂಲಕ ಒಗ್ಗಟ್ಟು ಪ್ರದರ್ಶಿಸಿ, ಸರ್ಕಾರದಿಂದ ಅನುದಾನ ಪಡೆಯಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.</p>.<p>ಕರ್ನಾಟಕ ರಾಜ್ಯ ವೃತ್ತಿ ರಂಗಭೂಮಿ ಮಾಲೀಕರ ಸಂಘದ ವತಿಯಿಂದನಗರದ ಬಸವ ವನ ಬಳಿ ಹಾಕಿರುವ ಕೆ.ಬಿ.ಆರ್. ಡ್ರಾಮಾ ಕಂಪನಿ ಟೆಂಟ್ನಲ್ಲಿ ‘2019–20ನೇ ಸಾಲಿನ ಸಾಂಸ್ಕೃತಿಕ ಕಾರ್ಯ ಚಟುವಟಿಕೆಗಳ ಪ್ರಾರಂಭೋತ್ಸವ’ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಪ್ರಸ್ತುತ ನಾಟಕ ಕಂಪನಿಗಳ ಪರಿಸ್ಥಿತಿ ಶೋಚನೀಯವಾಗಿದೆ. ದೂರದರ್ಶನ, ಮೊಬೈಲ್, ಸಿನಿಮಾಗಳಿಂದ ನಾಟಕ ನೋಡುವವರ ಸಂಖ್ಯೆ ಕಡಿಮೆಯಾಗಿದೆ. ಯೂ ಟ್ಯೂಬ್ನಲ್ಲಿ ನಾಟಕ ನೋಡುತ್ತ ಮನರಂಜನೆ ಪಡೆಯುತ್ತಿದ್ದಾರೆ. ನಾಟಕ ಪ್ರದರ್ಶನ ಸಹ ಕಡಿಮೆಯಾಗುತ್ತಿದೆ’ ಎಂದರು.</p>.<p>‘93 ವರ್ಷಗಳಿಂದ ಚಿಂದೋಡಿ ಕುಟುಂಬ ನಾಟಕ ಪ್ರದರ್ಶನ ಮಾಡುತ್ತ ಬಂದಿದ್ದು, ನೂರು ವರ್ಷ ಪೂರೈಸುವ ಮಹತ್ವಾಕಾಂಕ್ಷೆ ಹೊಂದಿದೆ. ಸುದೀರ್ಘ ಪಯಣದಲ್ಲಿ ಸಾಕಷ್ಟು ನೋವು ಉಂಡಿರುವ ಈ ಕಂಪನಿ, ಐದಾರು ಜನ ಪ್ರೇಕ್ಷಕರು ಇದ್ದಾಗಲೂ ಕಲೆಗೆ ಅಪಚಾರವಾಗದಂತೆ ನಾಟಕ ಪೂರ್ಣಗೊಳಿಸಿದೆ. ಈಗ ಮತ್ತೊಮ್ಮೆ ರಂಗಭೂಮಿ ಮಾಲೀಕರು ಒಂದುಗೂಡಿದ್ದು ಸಂತಸದ ವಿಷಯ’ ಎಂದರು.</p>.<p>ಮಾಜಿ ಸಂಸದ ಪ್ರೊ. ಐ.ಜಿ. ಸನದಿ ಮಾತನಾಡಿ, ‘ಒಬ್ಬರಿಗೊಬ್ಬರು ಕೈ ಜೋಡಿಸಿ ಸಹಕಾರ ನೀಡಿದರೆ ಅದು ಸಮಷ್ಠಿಯಾಗುತ್ತದೆ. ಆ ಸಮಷ್ಠಿಯೇ ಶಕ್ತಿಯಾಗಿ ಹೊರ ಹೊಮ್ಮುತ್ತದೆ. ಅಂತಹ ಬಲಿಷ್ಠ ಶಕ್ತಿ ನಾಟಕ ಕಂಪನಿಗಳ ಮಾಲೀಕರದ್ದಾಗಬೇಕು. ಬೆಂಗಳೂರು, ಶಿವಮೊಗ್ಗ, ತುಮಕೂರಿನಲ್ಲಿ ಇರುವಂತೆ ಹುಬ್ಬಳ್ಳಿಯಲ್ಲೂ ಒಂದು ರಂಗಭೂಮಿ ವೇದಿಕೆ ಬೇಕಾಗಿದೆ. ಸ್ಥಳೀಯ ಜನಪ್ರತಿನಿಧಿಗಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು’ ಎಂದು ಮನವಿ ಮಾಡಿದರು.</p>.<p>ರಂಗಭೂಮಿ ಮಾಲೀಕರ ಸಂಘದ ಪ್ರಧಾನ ಕಾರ್ಯದರ್ಶಿ ಚಿಂದೋಡಿ ಶಂಭುಲಿಂಗಪ್ಪ, ಉಪಾಧ್ಯಕ್ಷೆ ಮಾಲತಿ ಸುಧೀರ್, ಖಜಾಂಚಿ ರಾಜಣ್ಣ ಜೇವರ್ಗಿ, ಕಲಾವಿದರ ಸಂಘದ ಅಧ್ಯಕ್ಷ ಫೈಯಾಜ್ ಕರ್ಜಗಿ ಇದ್ದರು. ನಂತರ ಚಿಂದೋಡಿ ಶ್ರೀಕಂಟೇಶ ನಿರ್ದೇಶಿಸಿರುವ ‘ನಿದ್ದಿಗೆಡಿಶ್ಯಾಳ ಬಸಲಿಂಗಿ’ ಸಾಮಾಜಿಕ ಹಾಸ್ಯ ನಾಟಕ ಪ್ರದರ್ಶಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>