ಮಾಜಿ ಸಂಸದ ಪ್ರೊ. ಐ.ಜಿ. ಸನದಿ ಮಾತನಾಡಿ, ‘ಒಬ್ಬರಿಗೊಬ್ಬರು ಕೈ ಜೋಡಿಸಿ ಸಹಕಾರ ನೀಡಿದರೆ ಅದು ಸಮಷ್ಠಿಯಾಗುತ್ತದೆ. ಆ ಸಮಷ್ಠಿಯೇ ಶಕ್ತಿಯಾಗಿ ಹೊರ ಹೊಮ್ಮುತ್ತದೆ. ಅಂತಹ ಬಲಿಷ್ಠ ಶಕ್ತಿ ನಾಟಕ ಕಂಪನಿಗಳ ಮಾಲೀಕರದ್ದಾಗಬೇಕು. ಬೆಂಗಳೂರು, ಶಿವಮೊಗ್ಗ, ತುಮಕೂರಿನಲ್ಲಿ ಇರುವಂತೆ ಹುಬ್ಬಳ್ಳಿಯಲ್ಲೂ ಒಂದು ರಂಗಭೂಮಿ ವೇದಿಕೆ ಬೇಕಾಗಿದೆ. ಸ್ಥಳೀಯ ಜನಪ್ರತಿನಿಧಿಗಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು’ ಎಂದು ಮನವಿ ಮಾಡಿದರು.