ಹುಬ್ಬಳ್ಳಿ: ನೆರೆ ಪ್ರವಾಹ ಪಿಡಿತರಿಗೆ ಹೋದ ವರ್ಷದ ಪರಿಹಾರವನ್ನೇ ರಾಜ್ಯ ಸರ್ಕಾರ ಬಿಡುಗಡೆ ಮಾಡಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯೂ ಜನರು ಸಂಕಷ್ಟಕ್ಕೆ ಈಡಾಗಿದ್ದಾರೆ. ಸರ್ಕಾರ ಜನರ ನೋವಿಗೆ ಸ್ಪಂದಿಸಬೇಕು ಎಂದು ಆಗ್ರಹಿಸಿದರು.
ಅಕ್ಟೋಬರ್ 24, 25 ರಂದು ನೆರೆಪಿಡಿತ ರಾಯಚೂರು,ಬೀದರ್, ಕಲಬುರ್ಗಿ ಜಿಲ್ಲೆಗಳಲ್ಲಿ ಪ್ರವಾಸ ಮಾಡುತ್ತೇನೆ. ಸಿಎಂ ಬಿಎಸ್ವೈ ರೀತಿ ವೈಮಾನಿಕ ಸಮೀಕ್ಷೆ ಮಾಡಲ್ಲ. ಕಾರಲ್ಲಿ ಹೋಗಿ ಜನರ ಸಂಕಷ್ಟ ಆಲಿಸುತ್ತೇನೆ ಎಂದರು.